ಕೋಲಾರದಲ್ಲಿ 11 ಜನರು ಸಂಶಯಾದ್ಪದವಾಗಿ ಮೃತಪಟ್ಟಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಆರೋಗ್ಯಾಧಿಕಾರಿಗಳೂ, ಸೇರಿದಂತೆ ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದೆ.

ಕೋಲಾರ(ನ.20) : ಕೋಲಾರದಲ್ಲಿ 11 ಜನರು ಸಂಶಯಾದ್ಪದವಾಗಿ ಮೃತಪಟ್ಟಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಆರೋಗ್ಯಾಧಿಕಾರಿಗಳೂ, ಸೇರಿದಂತೆ ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದೆ.

Add Asianetnews Kannada as a Preferred SourcegooglePreferred

ಚಮಕಲಹಳ್ಳಿ ಗ್ರಾಮದಲ್ಲಿ 16 ದಿನದಲ್ಲಿ 11 ಜನರ ನಿಗೂಡ ಸಾವಿನ ಪ್ರಕರಣದಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದು, ಚಮಕಲಹಳ್ಳಿ ಗ್ರಾಮಕ್ಕೆ ಅರೋಗ್ಯಾಧಿಕಾರಿಗಳು ಹಾಗೂ ವೈಧ್ಯರ ತಂಡ ಭೇಟಿ ನೀಡಿದ್ದಾರೆ.

30ರ ಯುವಕನ ಮೇಲೆ ಮೂರು ಮಕ್ಕಳ ತಾಯಿಗೆ ಲವ್ವು; ಮುಂದೆ ಆಗಿದ್ದು ಆಗಬಾರದ್ದು

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಎನ್.ಚಮಕಲಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಜನರ ರಕ್ತದ ಮಾದರಿ ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಮುದಿಗೆರೆ ಪಂಚಾಯ್ತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಆರಂಭವಾಗಿದ್ದು, ಗ್ರಾಮಕ್ಕೆ ತಹಸೀಲ್ದಾರ್ ರಾಜಶೇಖರ್​​, ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್​ಕುಮಾರ್, ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನೈ ಸ್ಥಾಪನೆ ಮಾಡಲಾಗಿದೆ.

ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ

ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮೂವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 11 ಮಂದಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!