ಕರ್ನಾಟಕ ಇದುವರೆಗೂ ಇಂಡು ಕೇಳರಿಯದಷ್ಟು ಭರ್ಜರಿಯಾಗಿ ನಡೆದ ವಿಧಾನಸಭಾ ಚುನಾವಣೆ ಮತದಾನ ಸಂಪನ್ನಗೊಂಡಿದ್ದು ಫಲಿತಾಂಶದ ಪೂರ್ವಭಾವಿ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.
ಬೆಂಗಳೂರು (ಮೇ. 13): ಕರ್ನಾಟಕ ಇದುವರೆಗೂ ಇಂಡು ಕೇಳರಿಯದಷ್ಟು ಭರ್ಜರಿಯಾಗಿ ನಡೆದ ವಿಧಾನಸಭಾ ಚುನಾವಣೆ ಮತದಾನ ಸಂಪನ್ನಗೊಂಡಿದ್ದು ಫಲಿತಾಂಶದ ಪೂರ್ವಭಾವಿ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮತದಾನೋತ್ತರ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಇಂಡಿಯಾ ಟುಡೇ ಸಮೀಕ್ಷೆ ಕಾಂಗ್ರೆಸ್ ಬಹುಮತ ಪಡೆಯುತ್ತದೆ ಎನ್ನುತ್ತದೆ. ಯಾವುದೇ ಒಂದು ಪಕ್ಷ ಬಹುಮತ ಪಡೆಯುತ್ತದೆ ಎಂದಾದಲ್ಲಿ ಮತ ವಿಭಜನೆಯಾಗಿರುವ ಸಾಧ್ಯತೆ ಇರುತ್ತದೆ. ಮೋದಿ, ಬಿಜೆಪಿ ಅಲೆಯಿಂದ ಜನ ಕಾಂಗ್ರೆಸ್ ಕಡೆ ವಾಲಿರಬಹುದು ಎಂದು ಹೇಳುತ್ತದೆ. ಆದರೆ ಉಳಿದ ಸಮೀಕ್ಷೆಗಳು ಆಡಳಿತ ವಿರೋಧಿ ಅಲೆ ಇದೆ ಎನ್ನುತ್ತದೆ. ಮುಂಬೈ ಕರ್ನಾಟಕ, ಕರಾವಳಿ ಭಾಗದಲ್ಲಿ ಬಿಜೆಪಿ ಬಹುಮತ ಪಡೆಯುತ್ತದೆ ಎಂದು ಹೇಳುತ್ತದೆ. ಮೈಸೂರು ಕರ್ನಾಟಕದಲ್ಲಿ ಜೆಡಿಎಸ್ ಕಳೆದ ಬಾರಿಯಂತೆ 30 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ.
ಸಮೀಕ್ಷೆಗಳ ಬಗ್ಗೆ ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ವಿಶ್ಲೇಷಿಸಿದ್ದು ಹೀಗೆ
