ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಇನ್ನೇನು ಬಿಜೆಪಿ ಬಹುಮತದತ್ತ ಸಾಗುತ್ತಿದೆ ಎಂಬ ಮುನ್ಸೂಚನೆಗಳು ಮಾಧ್ಯಮಗಳಲ್ಲಿ ಪ್ರಕಟವಾದುದನ್ನು ಗಮನಿಸಿದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಬಳಸಿದ ನುಡಿಗಟ್ಟೊಂದು ಭಾರಿ ಗಮನ ಸೆಳೆಯಿತು. 

ಶ್ರೀನಗರ:ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಇನ್ನೇನು ಬಿಜೆಪಿ ಬಹುಮತದತ್ತ ಸಾಗುತ್ತಿದೆ ಎಂಬ ಮುನ್ಸೂಚನೆಗಳು ಮಾಧ್ಯಮಗಳಲ್ಲಿ ಪ್ರಕಟವಾದುದನ್ನು ಗಮನಿಸಿದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಬಳಸಿದ ನುಡಿಗಟ್ಟೊಂದು ಭಾರಿ ಗಮನ ಸೆಳೆಯಿತು. 

Add Asianetnews Kannada as a Preferred SourcegooglePreferred

ವಿಲಿಯಂ ಶೇಕ್ಸ್‌ಪಿಯರ್‌ರ ‘ಜೂಲಿಯಸ್ ಸೀಸರ್’ನ ಪ್ರಸಿದ್ಧ ಲ್ಯಾಟಿನ್ ನುಡಿಗಟ್ಟು ‘ಇತ್ ತು ಕರ್ನಾಟಕ ’ ಎಂಬ ನುಡಿಗಟ್ಟು ಅವರು ಬಳಸಿದ್ದರು. ‘ಎಟ್ ತು’ ಅಂದರೆ, ‘ನೀವು ಕೂಡ’ ಕೈಕೊಟ್ಟಿರಲ್ಲ ಎಂಬ ಅರ್ಥ ನೀಡುತ್ತದೆ. ಕರ್ನಾಟಕದ
ಜನತೆ ಕೂಡ ಕಾಂಗ್ರೆಸ್‌ಗೆ ಕೈಕೊಟ್ಟರಲ್ಲ? ಎಂಬರ್ಥದಲ್ಲಿ ಆತಂಕದಿಂದ ಅವರು ಈ ನುಡಿಗಟ್ಟು ಬಳಸಿದ್ದರು.

ರೋಮನ್ ಸರ್ವಾಧಿಕಾರಿ ಜೂಲಿಯಸ್ ಸೀಸರ್ ತನ್ನ ಸ್ನೇಹಿತ ಮಾರ್ಕಸ್ ಜೂನಿಯಸ್ ಬ್ರೂಟಸ್‌ನಿಂದ ಹತ್ಯೆಗೀಡಾದ ಸಂದರ್ಭ ಈ ಮಾತು ಬಳಸುತ್ತಾನೆ.