'30 ಲಕ್ಷ ಜನರನ್ನು ಕೊಂದ ಪಾಕಿಸ್ತಾನ ಮಿತ್ರವಾಯಿತು, ಸಹಾಯ ಮಾಡಿದ ಭಾರತ ಶತ್ರುವಾಯಿತು' ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಬಾಂಗ್ಲಾದೇಶ ಸರ್ಕಾರದ ವಿರುದ್ಡ ಟೀಕಿಸಿದ್ದಾರೆ.

ದೆಹಲಿ (ಡಿ.6): '30 ಲಕ್ಷ ಜನರನ್ನು ಕೊಂದ ಪಾಕಿಸ್ತಾನ ಮಿತ್ರವಾಯಿತು, ಸಹಾಯ ಮಾಡಿದ ಭಾರತ ಶತ್ರುವಾಯಿತು' ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಬಾಂಗ್ಲಾದೇಶ ಸರ್ಕಾರದ ವಿರುದ್ಡ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಭಾರತ-ಬಾಂಗ್ಲಾದೇಶ ಸಂಬಂಧಗಳು ಶುಕ್ರವಾರ ಮಾತನಾಡಿರುವ ತಸ್ಲಿಮಾ ನಸ್ರೀನ್, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವುದಕ್ಕಾಗಿ ಖಂಡಿಸಿದ್ದಾರೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧವನ್ನು ಉಲ್ಲೇಖಿಸಿರುವ ಲೇಖಕಿ, ‘ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶವನ್ನು ರಕ್ಷಿಸಲು ಭಾರತವೂ 17,000 ಸೈನಿಕರ ಪ್ರಾಣ ಕಳೆದುಕೊಂಡಿತು. ಆದರೆ ಪಾಕಿಸ್ತಾನದಿಂದ ರಕ್ಷಿಸಿದ ಭಾರತವನ್ನೇ ಬಾಂಗ್ಲಾದೇಶದ ಶತ್ರು ಎಂದು ಕರೆಯಲಾಗುತ್ತಿದೆ. ಇದಕ್ಕಿಂತ ದುರಂತ ಮತ್ತೊಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡುವ ಮೂಲಕ ಪಾಕಿಸ್ತಾನದ ವಿರುದ್ಧ ಹೋರಾಡಲು ಬಾಂಗ್ಲಾದೇಶಕ್ಕೆ ಸಹಾಯ ಮಾಡಿದ್ದು ಭಾರತ ಇಂದು. ಈ ವೇಳೆ ಬಾಂಗ್ಲಾದೇಶದ 30 ಲಕ್ಷ ಜನರನ್ನು ಕೊಂದು 2 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿತು. ಅಂಥ ಪಾಕಿಸ್ತಾನ ಇಂದು ಬಾಂಗ್ಲಾದೇಶದ ಸ್ನೇಹಿತನಾಗಿದ್ದಾನೆ" ಎಂದು ನಸ್ರೀನ್ ಹೇಳಿದರು.

WATCH | 500 ವರ್ಷಗಳ ಹಿಂದೆ ಬಾಬರ್ ಏನು ಮಾಡಿದ್ನೋ, ಅದೇ ಈಗ ಬಾಂಗ್ಲಾದೇಶ, ಸಂಭಾಲ್‌ನಲ್ಲಿ ನಡ್ತೀದೆ: ಸಿಎಂ ಯೋಗಿ ಕೆಂಡ!

ಬಾಂಗ್ಲಾದೇಶದಲ್ಲಿ ಅದರಲ್ಲೂ ಹಿಂದೂ ಸಮುದಾಯದ ವಿರುದ್ಧ ಹಿಂಸಾಚಾರ ಹೆಚ್ಚುತ್ತಿದೆ. ಇತ್ತೀಚೆಗೆ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ನಂತರ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಬಾಂಗ್ಲಾ ಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಭಾರತ ಮತ್ತು ಯುಕೆ ಸೇರಿದಂತೆ ಹಲವು ದೇಶಗಳು ಈ ಪರಿಸ್ಥಿತಿಯ ಬಗ್ಗೆ ಬಾಂಗ್ಲಾದೇಶವನ್ನು ಟೀಕಿಸಿವೆ. ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ಶೇಖ್ ಹಸೀನಾ ಅವರು ಯೂನಸ್ ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ, ಇದನ್ನು "ಜನಾಂಗೀಯ ಹತ್ಯೆ" ಎಂದು ಕರೆದಿದ್ದಾರೆ.

ಅಲ್ಪಸಂಖ್ಯಾತರ ಬೆಂಬಲಕ್ಕಾಗಿ ಪ್ರತಿಭಟನೆಗೆ ಸಿದ್ಧತೆ

200 ಕ್ಕೂ ಹೆಚ್ಚು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳನ್ನು ಪ್ರತಿನಿಧಿಸುವ ನಾಗರಿಕ ಸಮಾಜದ ಸದಸ್ಯರು ಮುಂದಿನ ವಾರ ಬಾಂಗ್ಲಾದೇಶ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಆರ್‌ಎಸ್‌ಎಸ್ ಅಧಿಕಾರಿಯೊಬ್ಬರು ಶುಕ್ರವಾರ (6 ಡಿಸೆಂಬರ್ 2024) ಈ ಮಾಹಿತಿಯನ್ನು ನೀಡಿದ್ದಾರೆ. ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದು ಈ ಪ್ರದರ್ಶನದ ಉದ್ದೇಶವಾಗಿದೆ.