userpic
user icon
0 Min read

47 ಕೊಠಡಿಗಳುಳ್ಳ ಹೋಟೆಲ್‌ನಲ್ಲಿ ಬೆಂಕಿ ಅವಘಡ: 14 ಸಾವು, ಕಟ್ಟಡದಿಂದ ಜಿಗಿದ ವ್ಯಕ್ತಿ

West Bengal Burrabazar Fire Tragedy 14 Dead in Kolkata Hotel Blaze mrq
Kolkata Burrabazar Hotel Fire

Synopsis

ಬರಬಜಾರ್‌ ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 14 ಜನರು ಸಾವನ್ನಪ್ಪಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಒಬ್ಬ ವ್ಯಕ್ತಿ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾರೆ. ಹೋಟೆಲ್‌ನಲ್ಲಿ ಸಿಕ್ಕಿಬಿದ್ದವರಲ್ಲಿ ಹಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಬರಬಜಾರ್‌ ಹೋಟೆಲ್‌ನಲ್ಲಿ  ಭೀಕರ ಬೆಂಕಿ ಅವಘಡ ಸಂಭವಿಸಿದೆ. ಬರಬಜಾರ್‌ನ ಮೆಚುವಾ ಫಲಪಟ್ಟಿಯ ಹೋಟೆಲ್‌ನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪಾಸ್ವಾನ್ ಎಂಬವರು  ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೋಟೆಲ್ ಕಟ್ಟಡದ ಮೇಲಿನಿಂದ ಜಿಗಿದಿದ್ದಾರೆ. ಕೂಡಲೇ ಪಾಸ್ವಾನ್ ಅವರನ್ನು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪಾಸ್ವಾನ್ ಮೃತರಾಗಿರೋದನ್ನು ಖಚಿತಪಡಿಸಿದ್ದಾರೆ. 

ಪ್ರಬಲ ಹೊಗೆಯಿಂದಾಗಿ ಹೋಟೆಲ್ ಸಂಪೂರ್ಣವಾಗಿ ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ. ಅಗ್ನಿಶಾಮಕ ದಳದ ಅನೇಕ ಸಿಬ್ಬಂದಿ ಬೆಂಕಿ ನಂದಿಸಲು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ  ಏಣಿಯ ಮೂಲಕ ನಾಲ್ಕು ಮತ್ತು ಐದನೇ ಅಂತಸ್ತಿನ ಕೋಣೆಗಳ ಕಿಟಕಿಗಳನ್ನು ಒಡೆದು ಹೋಟೆಲ್ ಒಳಗೆ ಪ್ರವೇಶಿಸಿದ್ದಾರೆ. ಹೋಟೆಲ್​ನಲ್ಲಿ ಸಿಕ್ಕಿಬಿದ್ದಿದ್ದವರಲ್ಲಿ ಅನೇಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈಗಾಗಲೇ ತನಿಖೆ ಆರಂಭವಾಗಿದೆ ಎಂದು ತಿಳಿದುಬಂದಿದೆ.

ಬೆಂಕಿ ಹೊತ್ತಿಕೊಂಡ ನಂತರ ಹಲವಾರು ಜನರು ಹೋಟೆಲ್ ಕಾರ್ನಿಸ್​ಗೆ ಬಂದರು. ನಂತರ ಅಗ್ನಿಶಾಮಕ ದಳ ಬಂದು ಅವರನ್ನು ರಕ್ಷಿಸಿತು. ಈ ಹೋಟೆಲ್‌ನಲ್ಲಿ ಅನೇಕ ಬೇರೆ ರಾಜ್ಯಗಳ ನಿವಾಸಿಗಳು ಉಳಿದುಕೊಂಡಿದ್ದರು. ಈ ಹೋಟೆಲ್‌ಲ್ಲಿ ಸುಮಾರು 47 ಕೊಠಡಿಗಳಿದ್ದು, ಪ್ರತಿ ಕೋಣೆಯಲ್ಲೂ ಜನರಿದ್ದರು. ಆದರೆ ಹೊಗೆಯ ಕಾರಣದಿಂದಾಗಿ ಮೊದಲು ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿಗಳಿಗೆ ಪ್ರವೇಶಿಸಲು ತೊಂದರೆಯಾಯಿತು.

ಇದನ್ನೂ ಓದಿ:  ರಾಮಲಲ್ಲಾನ ನೋಡಲು ಶತಮಾನಗಳಷ್ಟು ಹಳೆಯ ಸಂಪ್ರದಾಯ ಮುರಿದ ಗಡ್ಡಿ ನಿಶಾನ್

ಮಂಗಳವಾರ ಸಂಜೆ 7:30 ರ ಸುಮಾರಿಗೆ ಮಧ್ಯ ಕೊಲ್ಕತ್ತಾದ ಮೆಚುವಾ ಫಲಪಟ್ಟಿಯ ಈ ಹೋಟೆಲ್ ​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ನಂತರ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸುಮಾರು 8 ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಂದಿಸಲಾಯಿತು. ರಕ್ಷಣಾ ಕಾರ್ಯ ನಡೆಯುತ್ತಿದೆ. ಬೆಂಕಿ ಕಾಣಿಸಿಕೊಂಡ ರಸ್ತೆಯು ಸೆಂಟ್ರಲ್ ಅವೆನ್ಯೂ ಮತ್ತು ಬಿಧಾನ್ ಸರಣಿಯನ್ನು ಸಂಪರ್ಕಿಸುತ್ತದೆ. ಈ ರಸ್ತೆ ಇಕ್ಕಟ್ಟಾಗಿದ್ದು ಸಾಕಷ್ಟು ಜನನಿಬಿಡವಾಗಿದೆ. ಪರಿಣಾಮವಾಗಿ ಬೆಂಕಿ ವೇಗವಾಗಿ ಹರಡುವ ಭಯವಿತ್ತು. ಮೇಯರ್ ಫಿರ್ಹಾದ್ ಹಕೀಮ್, ಕೊಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ವರ್ಮಾ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿ ಪಾಂಜಾ ಬೆಳಿಗ್ಗೆ 3 ಗಂಟೆಯವರೆಗೆ ಸ್ಥಳದಲ್ಲಿದ್ದರು.

ಇದನ್ನೂ ಓದಿ:  

Download App

Latest Videos