Asianet Suvarna News Asianet Suvarna News

ಅಪರೂಪದ ಬಿಳಿ ನವಿಲು ಪತ್ತೆ : ವಿಡಿಯೋ ವೈರಲ್

  • ಗರಿ ಬಿಚ್ಚಿ ಹಾರಿದ ಅಪರೂಪದ ಬಿಳಿ ನವಿಲು
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Viral Video: Rare White Peacock Caught Flying In Italy akb
Author
Bangalore, First Published May 1, 2022, 1:47 PM IST

ನವಿಲುಗಳು ವಿಶ್ವದ ಅತ್ಯಂತ ಸುಂದರವಾದ ಪಕ್ಷಿಗಳಲ್ಲಿ ಒಂದು. ತಮ್ಮ ವರ್ಣ ವೈವಿಧ್ಯದ ಗರಿಗಳು, ಫ್ಯಾನ್ ಆಕಾರದ ಬಾಲ ಮತ್ತು ಪ್ರತಿ ರೆಕ್ಕೆಯ ಮೇಲೆ ಗರಿಗಳ ಸುಂದರ ಚಿತ್ರಣದಿಂದ ಎಲ್ಲರ ಗಮನ ಸೆಳೆಯುವ ನವಿಲುಗಳು ನಮ್ಮ ದೇಶದ ರಾಷ್ಟ್ರಪಕ್ಷಿಯೂ ಹೌದು, ಬಣ್ಣ ಬಣ್ಣದ ಗರಿಯ ನವಿಲನ್ನು ನಾವು ನೀವೆಲ್ಲರೂ ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಅಪರೂಪದ ಬಿಳಿ ಬಣ್ಣದ ನವಿಲೊಂದು ಕಾಣ ಸಿಕ್ಕಿದೆ. ಪ್ರತಿಮೆಯ ಮೇಲಿಂದ ಹುಲ್ಲಿಗೆ ಶ್ವೇತ ವರ್ಣದ ನವಿಲೊಂದು ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ Yoda4ever ಎಂಬುವವರು ಪೋಸ್ಟ್ ಮಾಡಿದ್ದು, ಬಿಳಿ ನವಿಲು ಹಾರುತ್ತಿದೆ ಎಂದು ಬರೆದುಕೊಂಡಿದ್ದಾರೆ. 

ಇಟಲಿಯ (Italy) ಸ್ಟ್ರೆಸಾ (Stresa) ಬಳಿಯ ಮ್ಯಾಗಿಯೋರ್ (Maggiore Lake) ಸರೋವರದಲ್ಲಿರುವ ಬೊರೊಮಿಯನ್ ದ್ವೀಪಗಳಲ್ಲಿ (Borromean islands) ಒಂದಾದ ಐಸೊಲಾ ಬೆಲ್ಲಾದ (Isola Bella) ಸುಂದರವಾದ ಉದ್ಯಾನದಲ್ಲಿ ಈ ವೀಡಿಯೊ ಸೆರೆ ಆಗಿದೆ. ಇಲ್ಲಿನ ತೋಟಗಳಲ್ಲಿ ಬಿಳಿ ಮತ್ತು ಬಣ್ಣದ ನವಿಲುಗಳು ಮುಕ್ತವಾಗಿ ವಾಸಿಸುತ್ತವೆ. ಬೊರೊಮಿಯೊ ದ್ವೀಪಗಳು ತಮ್ಮ ಮನಮೋಹಕ ಸೌಂದರ್ಯದಿಂದ ಎಲ್ಲರನ್ನು ಸೆಳೆಯುವ ಸರೋವರದ ಮಧ್ಯಭಾಗದಲ್ಲಿರುವ ಪುಟ್ಟ ಸ್ವರ್ಗವಾಗಿದೆ.

 

ಈ ವೀಡಿಯೊವನ್ನು ಟ್ವಿಟರ್‌ನಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 21,000 ಕ್ಕೂ ಹೆಚ್ಚು ಲೈಕ್ಸ್  ಬಂದಿದೆ. ನೋಡುಗರು ಕೂಡ ಈ ಅಪರೂಪದ ಶ್ವೇತ ನವಿಲನ್ನು ಮೆಚ್ಚಿಕೊಂಡಿದ್ದು, ಕಾಮೆಂಟ್ ಮಾಡಿದ್ದಾರೆ. ನಾನು ಸುಮಾರು 10 ವರ್ಷಗಳ ಹಿಂದೆ ಬಿಳಿ ನವಿಲನ್ನು ನೋಡಿದ ನೆನಪಿದೆ. ಆದರೂ ಹಾರುವುದನ್ನು ನೋಡಿಲ್ಲ. ಇದು ಸುಂದರವಾಗಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಾಸ್ತು ಶಾಸ್ತ್ರದಲ್ಲಿ ನವಿಲು ಗರಿಗೇನು ಮಹತ್ವ, ಮನೆಯಲ್ಲಿಟ್ಟುಕೊಳ್ಳಬಹುದಾ?

ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಬಿಳಿ ನವಿಲುಗಳು ಲ್ಯೂಸಿಸಮ್ ಜೀನ್ ರೂಪಾಂತರದೊಂದಿಗೆ ನೀಲಿ ನವಿಲುಗಳ ಅಸಾಮಾನ್ಯ ಉಪ-ಜಾತಿಗಳಾಗಿವೆ. ಬಿಳಿ ಬಣ್ಣದಲ್ಲಿರುವ ನವಿಲುಗಳು ಹಳದಿಯಾಗಿ ಹುಟ್ಟುತ್ತವೆ ಮತ್ತು ವಯಸ್ಸಾದಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಪೈಡ್ ನವಿಲುಗಳಲ್ಲಿ ಭಾಗಶಃ ಗರಿಗೆದರುವ ಪ್ರಕ್ರಿಯೆ ಸಂಭವಿಸುತ್ತದೆ, ಇದರ ಪರಿಣಾಮವಾಗಿ ಇದರ ಬಣ್ಣ ನಷ್ಟವಾಗುತ್ತದೆ.

Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

ಕೊಪ್ಪಳ ಜಿಲ್ಲೆಯಲ್ಲಿವೆ ಅಪಾರ ವನ್ಯಜೀವಿ(Wildlife) ಸಂಪತ್ತು ಇದ್ದು, ಅಪರೂಪದ ಪ್ರಾಣಿಗಳು, ವಿಶಿಷ್ಟ ಜಲಚರ, ಪಕ್ಷಿಗಳಿವೆ. ಅದಕ್ಕಿಂತ ಮಿಗಿಲಾಗಿ ರಾಷ್ಟ್ರೀಯ ಪಕ್ಷಿ ನವಿಲುಗಳು ಸಾವಿರಾರು ಸಂಖ್ಯೆಯಲ್ಲಿವೆ. ಬಯಲು ಸೀಮೆಯಾಗಿದ್ದರೂ ಕುರುಚಲು ಕಾಡು ಮತ್ತು ತುಂಗಭದ್ರಾ ನದಿಯುದ್ದಕ್ಕೂ(Tungabhadra River) ಕಾಡು ಇರುವುದರಿಂದ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತು ಜಿಲ್ಲೆಯಲ್ಲಿದೆ. ಅವುಗಳನ್ನು ಸಂರಕ್ಷಣೆ ಮಾಡುವುದು ತೀರಾ ಅಗತ್ಯ. ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿ, ಪಕ್ಷಿಗಳು ಇದ್ದು, ಅವುಗಳ ಸಂತಾನ ವೃದ್ಧಿಗೆ ಸೂಕ್ತ ವಾತಾವರಣ ನಿರ್ಮಾಣವಾಗಬೇಕಿದೆ.

ಜಿಲ್ಲೆಯಲ್ಲಿ ಜಿಂಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವು ಎಷ್ಟಿವೆ ಎನ್ನುವ ಕುರಿತು ಇತ್ತೀಚೆಗೆ ಸರ್ವೇ ಮಾಡಿಲ್ಲ. ಆದರೆ, ಜಿಂಕೆಗಳ ಹಾವಳಿಯಿಂದ ರೈತರು(Farmers) ಬೆಳೆ ಕಾಪಾಡಿಕೊಳ್ಳಲು ಆಗದೆ ಹತ್ತಾರು ಸಾವಿರ ಎಕರೆ ಭೂಮಿ ಪಾಳು ಬಿಟ್ಟಿದ್ದಾರೆ. ಕೃಷ್ಣಮೃಗ, ಚಿಗರಿ ಸೇರಿದಂತೆ ಅದರ ಅಷ್ಟೂ ವೈವಿಧ್ಯತೆಗಳು ಜಿಲ್ಲೆಯಲ್ಲಿವೆ. ಇವುಗಳ ಸಂರಕ್ಷಣೆಗಾಗಿ ಸುಮಾರು ಹತ್ತು ವರ್ಷಗಳ ಹಿಂದೆಯೇ ಜಿಂಕೆ ವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿ ಕೇಂದ್ರಕ್ಕೂ ಪ್ರಸ್ತಾವನೆ ಕಳುಹಿಸಲಾಗಿತ್ತು. ರಾಜ್ಯ ಬಜೆಟ್‌ನಲ್ಲಿ(Karnataka Budget) .50 ಲಕ್ಷ ಮೀಸಲಿರಿಸಲಾಯಿತು. ಆದರೆ, ಅದರ ನಂತರ ಅದ್ಯಾವ ಬೆಳವಣಿಗೆಯೂ ಆಗಲಿಲ್ಲ.

Follow Us:
Download App:
  • android
  • ios