Asianet Suvarna News Asianet Suvarna News

ಲಖೀಂಪುರ ಹಿಂಸಾಚಾರದ ಮತ್ತೊಂದು ವಿಡಿಯೋ ಬಹಿರಂಗ, ಬಯಲಾಯ್ತು ಶಾಕಿಂಗ್ ಮಾಹಿತಿ!

* ಲಖೀಂಪುರ ಹಿಂಸಾಚಾರಕ್ಕೆ ನಾಲ್ವರು ರೈತರು ಸೇರಿ ಎಂಟು ಮಂದಿ ಬಲಿ

* ರೈತರ ಮೇಲೆ ಹರಿದಿತ್ತು ಎಸ್‌ಯುವಿ ಕಾರು

* ಲಖೀಂಪುರ ಹಿಂಸಾಚಾರದ ಮತ್ತೊಂದು ಶಾಕಿಂಗ್ ವಿಡಿಯೋ ಬಯಲು

Video Of Questioning Suggests Minister Son Present At UP Violence Site pod
Author
Bangalore, First Published Oct 6, 2021, 12:53 PM IST

ಲಖೀಂಪುರ(ಅ.06): ಲಖೀಂಪುರದಲ್ಲಿ(Lakhimpur Kheri) ನಡೆದ ಹಿಂಸಾಚಾರ(Violence) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಿನ್ನೆಯಷ್ಟೇ ರೈತರ ಮೇಲೆ ಕಾರು ಹರಿದುಹೋಗಿದ್ದ ದೃಶ್ಯವಿರುವ ವಿಡಿಯೋ ವೈರಲ್ ಆಗಿತ್ತು. ಆದರೀಗ ಆ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ SUV ಹರಿದ ಭುಗಿಲೆದ್ದ ಹಿಂಸಾಚಾರದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆ ನಡೆಸುತ್ತಿರುವ ದೃಶ್ಯಗಳು ಇದರಲ್ಲಿವೆ. 

ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!

ಈ ವಿಡಿಯೋದಲ್ಲಿ ರಕ್ತದಿಂದ ಕೂಡಿದ ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತಿದ್ದು, ಪೊಲೀಸ್ ಅಧಿಕಾರಿ(Police Officer) ತನ್ನ ಕೈಯಲ್ಲಿ ಮೈಕ್ ಹಿಡಿದು ಆತನನ್ನು ವಿಚಾರಿಸುತ್ತಿರುವುದನ್ನು ನೊಡಬಹುದಾಗಿದೆ. ಲಕ್ನೋದ ಚಾರ್ಬಾಗ್ ಪ್ರದೇಶದ ನಿವಾಸಿಯಾದ ಈ ವ್ಯಕ್ತಿಗೆ ಪೋಲಿಸರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಗಾಯಗೊಂಡ ವ್ಯಕ್ತಿ ತಾನು ಕಪ್ಪು ಫಾರ್ಚೂನರ್‌ನಲ್ಲಿ ಸವಾರಿ ಮಾಡುತ್ತಿದ್ದೆನೆಂದು ಹೇಳಿದ್ದು, ಅದರಲ್ಲಿ ಐದು ಜನರಿದ್ದರು ಎಂದಿದ್ದಾನೆ. ಅಲ್ಲದೇ ಕಾರಿನ ಹಿಂದೆ ಕುಳಿತಿದ್ದ ವ್ಯಕ್ತಿ ಈ ಕಾರು ಕಾಂಗ್ರೆಸ್‌ನ ಮಾಜಿ ಸಂಸದರಿಗೆ ಸೇರಿದ್ದು ಎಂದು ಹೇಳಿಕೊಂಡಿದ್ದಾರೆ. ಬಳಿಕ ಆ ವ್ಯಕ್ತಿ ಕಾರಿನ ಪ್ಲೇಟ್ ನಂಬರ್ ನೀಡಿದ್ದಾನೆ.

"

NDTV ಈ ಬಗ್ಗೆ ವರದಿ ಪಗ್ರಕಟಿಸಿದ್ದು, ವೀಡಿಯೋದಲ್ಲಿ, ಪೋಲಿಸ್ ಗಾಯಗೊಂಡ ವ್ಯಕ್ತಿ ಬಳಿ, 'ನಿಮ್ಮ ವಾಹನದ ಎದುರು ಇದ್ದ ಮತ್ತೊಂದು ಕಾರು ಯಾರದ್ದು?' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಗಾಯಗೊಂಡ ವ್ಯಕ್ತಿ ಮೊದಲು, 'ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ. ಅಲ್ಲದೇ ಆ ವಾಹನದಲ್ಲಿ 'ಭಯ್ಯಾಜಿ' ಜೊತೆಗಿದ್ದೆ ಎಂದೂ ಹೇಳಿದ್ದಾನೆ. 

ಗಾಯಗೊಂಡ ವ್ಯಕ್ತಿ ಭಯ್ಯಾ ಎಂಬ ಪದವನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾರನ್ನು ಸಂಬೋಧಿಸಿ ಬಳಸಿದ್ದಾರೆನ್ನಲಾಗಿದೆ. ಈ ಹಿಂದೆ, ಮತ್ತೊಂದು ವೈರಲ್ ವಿಡಿಯೋದಲ್ಲಿ, ಮಹೀಂದ್ರಾ ಎಸ್ಯುವಿ ವಾಹವನ್ನು ರೈತರ ಮೇಲೆ ಹರಿಸಿದ ದೃಶ್ಯವಿತ್ತು. ಆ ಕಾರಿನ ಹಿಂದೆ ಕಪ್ಪು ಫಾರ್ಚೂನರ್ ಕೂಡ ಇತ್ತು.

Follow Us:
Download App:
  • android
  • ios