ಬಿಜೆಪಿ ತೊರೆವ ವದಂತಿ ನಡುವೆಯೇ ನೆಹರೂ ಹೊಗಳಿದ ವರುಣ್ ಗಾಂಧಿ
ಬಿಜೆಪಿ ನಾಯಕ ವರುಣ್ ಗಾಂಧಿ ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳ ನಡುವೆಯೇ ತಮ್ಮ ಮುತ್ತಾತ ಜವಹರಲಾಲ್ ನೆಹರು ಅವರನ್ನು ಹೊಗಳಿದ್ದಾರೆ.
ಲಖನೌ: ಬಿಜೆಪಿ ನಾಯಕ ವರುಣ್ ಗಾಂಧಿ ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳ ನಡುವೆಯೇ ತಮ್ಮ ಮುತ್ತಾತ ಜವಹರಲಾಲ್ ನೆಹರು ಅವರನ್ನು ಹೊಗಳಿದ್ದಾರೆ. ಪಿಲಿಭೀತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವರುಣ್, ನೆಹರು ಬಡವರ ಪರವಾಗಿದ್ದರು. ವಿಶೇಷವಾಗಿ ರೈತರ ಪರವಾಗಿದ್ದರು. ಹೀಗಾಗಿಯೇ ಅವರು ಸರ್ಕಾರಿ ವೇತನ, ಬಂಗಲೆ, ಇತರ ಭತ್ಯೆಗಳನ್ನು ತ್ಯಾಗ ಮಾಡಿದ್ದರು. ಸಾರ್ವಜನಿಕ ಹಣದಲ್ಲಿ ಯಾವುದೇ ಬಂಗಲೆ, ಕಾರು ಖರೀದಿಸಿರಲಿಲ್ಲ. ನಾನು ಕೂಡಾ ಇದೇ ಕಾರಣಕ್ಕಾಗಿ ಸರ್ಕಾರದ ವೇತನ, ಬಂಗಲೆ ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.
ಬಡವರ ಅನ್ನ ಕಸಿದು ರಾಷ್ಟ್ರಧ್ವಜ ಕೊಳ್ಳಲು ಒತ್ತಾಯಿಸುವುದು ನಾಚಿಕೆಗೇಡು: ವರುಣ್ ಗಾಂಧಿ ಟೀಕೆ