ನಿಯಮ ಉಲ್ಲಂಘಿಸಿದ ಕಂಪನಿಗೆ ವಿನಾಯ್ತಿ: ಸಂಪುಟ ಅಸ್ತು!
* ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶ
* ನಿಯಮ ಉಲ್ಲಂಘಿಸಿದ ಕಂಪನಿಗೆ ವಿನಾಯ್ತಿ: ಸಂಪುಟ ಅಸ್ತು
* ಲಿಮಿಟೆಡ್ ಲಯಬಿಲಿಟಿ ಪಾರ್ಟನರ್ಶಿಪ್(ಎಲ್ಎಲ್ಪಿ) ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ
ನವದೆಹಲಿ(ಜು.29): ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ, ಲಿಮಿಟೆಡ್ ಲಯಬಿಲಿಟಿ ಪಾರ್ಟನರ್ಶಿಪ್(ಎಲ್ಎಲ್ಪಿ) ಕಾಯ್ದೆಗೆ ತಿದ್ದುಪಡಿಗಳನ್ನು ತರಲು ನಿರ್ಧರಿಸಿದೆ.
ಇದರೊಂದಿಗೆ ಈ ಕಾನೂನುಗಳನ್ನು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಅಪರಾಧೀಕರಣ ಆರೋಪದಡಿ ಕ್ರಮ ಕೈಗೊಳ್ಳುವುದರಿಂದ ವಿನಾಯ್ತಿ ಸಿಗಲಿದೆ. ಈ ಕಾಯ್ದೆ ತಿದ್ದುಪಡಿಯಿಂದ ಕಾಯ್ದೆಯ ಹಲವು ನಿಯಮಗಳನ್ನು ಉಲ್ಲಂಘಿಸಿದ ದೇಶದ 2.30 ಲಕ್ಷ ಕಂಪನಿಗಳಿಗೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಾಂಗ್ರೆಸ್ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ!
ಈ ಪ್ರಕಾರ ಇದೀಗ ಈ ಕಾಯ್ದೆಯ ನಿಯಮಗಳನ್ನು 22ಕ್ಕೆ ಸೀಮಿತಗೊಳಸಲಾಗಿದ್ದು, ಸಂಯುಕ್ತ ಅಪರಾಧಗಳನ್ನು 7ಕ್ಕೆ ಮತ್ತು ಅಸಂಯುಕ್ತ ಅಪರಾಧಗಳ ಸಂಖ್ಯೆಯನ್ನು 3ಕ್ಕೆ ಇಳಿಕೆ ಸೇರಿದಂತೆ ಹಲವು ಬದಲಾವಣಎಗಳನ್ನು ತರಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಎಲ್ಎಲ್ಪಿ ಕಾಯ್ದೆಯಡಿ 81 ಸೆಕ್ಷನ್ಗಳು ಮತ್ತು 4 ಶೆಡ್ಯೂಲ್ಗಳಿವೆ.