ಬುದ್ಧ ಪೂರ್ಣಿಮಾ ಪ್ರಧಾನ ಭಾಷಣ ಮಾಡಿದ ಪ್ರಧಾನಿ ಕೊರೋನಾ ಕುರಿತು ಮೋದಿ ಮಾತು ಜಗತ್ತು ಇದೇ ರೀತಿ ಇರಲ್ಲ ಎಂದ ಮೋದಿ

​​​​​​ದೆಹಲಿ(ಮೇ.26): ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಮೇ 26 ರಂದು COVID-19 ರ ನಂತರ ಗ್ರಹವು ಇದೇ ರೀತಿ ಇರುವುದಿಲ್ಲ ಮತ್ತು ಭವಿಷ್ಯದಲ್ಲಿ ನಡೆದ ಘಟನೆಗಳನ್ನು ಕೊರೋನಾ ಪೂರ್ವ ಅಥವಾ ಕೊರೋನಾ ನಂತರ ಎಂದು ನೆನಪಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬುದ್ಧ ಪೂರ್ಣಿಮಾ ಕುರಿತು "ವರ್ಚುವಲ್ ವೆಸಾಕ್ ಗ್ಲೋಬಲ್ ಸೆಲೆಬ್ರೇಷನ್ಸ್" ಸಂದರ್ಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು ಒಂದು ಶತಮಾನದಲ್ಲಿ ಜಗತ್ತು ಈ ರೀತಿಯ ಸಾಂಕ್ರಾಮಿಕ ರೋಗವನ್ನು ಕಂಡಿಲ್ಲ. ಆದರೂ ಸಾಂಕ್ರಾಮಿಕ ರೋಗದ ಬಗ್ಗೆ ಈಗ ಉತ್ತಮ ತಿಳುವಳಿಕೆ ಇದೆ. ಜೀವಗಳನ್ನು ಉಳಿಸಲು ಮತ್ತು ವೈರಸ್ ಅನ್ನು ಸೋಲಿಸಲು ಲಸಿಕೆ ಸಂಪೂರ್ಣವಾಗಿ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!

ಸಾಂಕ್ರಾಮಿಕ ರೋಗದಿಂದಾಗ ಆರ್ಥಿಕ ಪರಿಣಾಮವು ದೊಡ್ಡದಾಗಿದೆ. COVID-19 ರ ನಂತರ ನಮ್ಮ ಗ್ರಹವು ಇದೇ ರತಿ ಆಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು, ಅದರ ವಿರುದ್ಧ ಹೋರಾಡುವ ನಮ್ಮ ಕಾರ್ಯತಂತ್ರ ಬಲವಾಗಿದೆ ಎಂದಿದ್ದಾರೆ. ಒಂದು ವರ್ಷದೊಳಗೆ COVID-19 ಲಸಿಕೆಗಳನ್ನು ಅಭಿವೃದ್ಧಿಪಡಿಸುವ ವಿಜ್ಞಾನಿಗಳ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ. ಇದು ಮಾನವನ ದೃಢ ನಿಶ್ಚಯ ಮತ್ತು ದೃಢತೆಯ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪೂಜ್ಯ ಮಹಾಸಂಗ ಸದಸ್ಯರು, ನೇಪಾಳ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರಾದ ಪ್ರಹ್ಲಾದ್ ಸಿಂಗ್ ಮತ್ತು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಿರೆನ್ ರಿಜಿಜು, ಪೂಜ್ಯ ವೈದ್ಯ ಧಮ್ಮಪಿಯಾ ಉಪಸ್ಥಿತರಿದ್ದರು.