10:43 PM (IST) Mar 03

India latest News Live 3 March 2026 ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿ

ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿಯಾಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿ ನಡೆಸಿದೆ. ಈ ವೇಳೆ ಪ್ರಯಾಣಿಕರ ವಿಮಾನವೂ ಧ್ವಂಸಗೊಂಡಿದೆ.

Read Full Story
10:03 PM (IST) Mar 03

India latest News Live 3 March 2026 ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ

ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ, ಸಚಿನ್ ತೆಂಡೂಲ್ಕರ್ ಕುಟುಂಬ, ಆಪ್ತರು, ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

Read Full Story
09:03 PM (IST) Mar 03

India latest News Live 3 March 2026 ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್, ರಂಗೇರಿದ ಅಸ್ಸಾಂ ಎಲೆಕ್ಷನ್

ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್, ಅಧಿಕಾರಕ್ಕೇರಲೇಬೇಕು ಎಂದು ಪಣತೊಟ್ಟಿರುವ ಅಸ್ಸಾಂ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Read Full Story
08:38 PM (IST) Mar 03

India latest News Live 3 March 2026 ಮಗನ ಆಸೆ ಈಡೇರಿಸಲು ಅವನಿಂದ್ಲೇ ತಾಯಿಯಾದಳು ಖ್ಯಾತ ಕಿರುತೆರೆ ನಟಿ! ಅಷ್ಟಕ್ಕೂ ಆಗಿದ್ದೇನು?

ಸ್ಪ್ಯಾನಿಷ್ ನಟಿ ಆನಾ ಓಬ್ರೀಗಾನ್, ಕ್ಯಾನ್ಸರ್‌ನಿಂದ ಮೃತಪಟ್ಟ ತನ್ನ 27 ವರ್ಷದ ಮಗನ ಕೊನೆಯ ಆಸೆಯನ್ನು ಈಡೇರಿಸಲು ಮಗುವನ್ನು ಪಡೆದಿದ್ದಾರೆ. ಮಗನ ವೀರ್ಯಾಣು ಬಳಸಿ ಜನಿಸಿದ ಈ ಮಗು, ವಾಸ್ತವದಲ್ಲಿ ಆಕೆಗೆ ಮೊಮ್ಮಗಳಾಗಿದ್ದು, ಕಾನೂನುಬದ್ಧವಾಗಿ ಮಗಳಾಗಿದ್ದಾಳೆ. 

Read Full Story
08:32 PM (IST) Mar 03

India latest News Live 3 March 2026 ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್

ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್, ಇರಾನ್ ಡ್ರೋನ್ ನೇರವಾಗಿ ರಿಯಾದ್ ಎಂಬಸಿ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ರೋನಾಲ್ಡೋ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳೆ.

Read Full Story
08:10 PM (IST) Mar 03

India latest News Live 3 March 2026 ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಕಚ್ಚಾತೈಲ ಖರೀದಿ ಹೆಚ್ಚಿಸುವ ಅನಿವಾರ್ಯತೆ - ಮತ್ತೆ ಸುಂಕ ಹೇರಲಿದೆಯಾ ಅಮೆರಿಕಾ

ಅಮೆರಿಕಾ-ಇಸ್ರೇಲ್ ದಾಳಿಯ ನಂತರ ಇರಾನ್, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು, ಭಾರತವು ಅಮೆರಿಕಾದೊಂದಿಗಿನ ರಾಜತಾಂತ್ರಿಕ ಒತ್ತಡದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ. 

Read Full Story
07:18 PM (IST) Mar 03

India latest News Live 3 March 2026 West Asia Conflict - ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ - 48 ಗಂಟೆಯಲ್ಲಿ 8 ನಾಯಕರೊಂದಿಗೆ ಮೋದಿ ಮಾತುಕತೆ!

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 48 ಗಂಟೆಗಳಲ್ಲಿ 8 ದೇಶಗಳ ನಾಯಕರೊಂದಿಗೆ ಮಾತನಾಡಿದ್ದಾರೆ. ಕತಾರ್, ಒಮಾನ್, ಸೌದಿ ಮೇಲಿನ ದಾಳಿಯನ್ನು ಖಂಡಿಸಿ, ಶಾಂತಿಗೆ ಕರೆ ನೀಡಿದ್ದಾರೆ.
Read Full Story
07:17 PM (IST) Mar 03

India latest News Live 3 March 2026 ತಿರುಪತಿ ತಿಮ್ಮಪ್ಪನ ದರ್ಶನ ಕ್ಯೂನಲ್ಲಿ ಭಕ್ತರ ಜಟಾಪಟಿ, ಬೆಲ್ಟ್ ಬಿಚ್ಚಿ ಹೊಡೆದು ರಂಪಾಟ

ತಿರುಪತಿ ತಿಮ್ಮಪ್ಪನ ದರ್ಶನ ಕ್ಯೂನಲ್ಲಿ ಭಕ್ತರ ಜಟಾಪಟಿ, ಬೆಲ್ಟ್ ಬಿಚ್ಚಿ ಹೊಡೆದು ರಂಪಾಟ ಮಾಡಲಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಭಕ್ತರು ಇದ್ದ ದರ್ಶನ ಸಾಲಿನಲ್ಲೇ ಈ ಘಟನೆ ನಡೆದಿದೆ.

Read Full Story
06:50 PM (IST) Mar 03

India latest News Live 3 March 2026 ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ

ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ, ಕೊಹ್ಲಿ ಆಕಾಯ್‌ನನ್ನ ಶಾಲೆಗೆ ಕರೆದುಕೊಂಡು ಬರುತ್ತಿರುವ ದೃಶ್ಯವೊಂದು ಸದ್ದು ಮಾಡುತ್ತಿದೆ. ಫ್ಯಾಮಿಲಿಗೆ ಸಂಪೂರ್ಣ ಸಮಯ ನೀಡಿದ್ದಾರೆ.

Read Full Story
06:48 PM (IST) Mar 03

India latest News Live 3 March 2026 ದೇಶಗಳ ನಡುವಿನ ದ್ವೇಷಕ್ಕೆ ಬಲಿಯಾದ ಹಸುಗೂಸು, ಖಮೇನಿಯ 14 ತಿಂಗಳ ಮೊಮ್ಮಗಳ ದಾರುಣ ಸಾವು!

Ayatollah Khamenei and Family Killed in US-Israel Airstrikes: Reports ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಬೃಹತ್ ವಾಯುದಾಳಿಯಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

Read Full Story
06:37 PM (IST) Mar 03

India latest News Live 3 March 2026 Crude Oil - ಹೆದರಬೇಡಿ, ಭಾರತದ ಬಳಿ ಸಾಕಷ್ಟು ತೈಲವಿದೆ! ಆಮದು ನಿಂತರೂ ಎಷ್ಟು ದಿನ ನಿಭಾಯಿಸಬಹುದು ಗೊತ್ತಾ?

ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದ್ದು, ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ಆದಾಗ್ಯೂ, ಭಾರತವು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಹೊಂದಿದ್ದು ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದಿದೆ.

Read Full Story
06:07 PM (IST) Mar 03

India latest News Live 3 March 2026 ಟಿ20 ವಿಶ್ವಕಪ್‌ನಲ್ಲಿ ಈ 2 ತಂಡಗಳೇ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ! ಅಚ್ಚರಿ ಭವಿಷ್ಯ ನುಡಿದ ಪಾಕ್ ದಿಗ್ಗಜ ಕ್ರಿಕೆಟಿಗ

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟದಲ್ಲಿದ್ದು, ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಫೈನಲ್ ಪ್ರವೇಶಿಸುವುದು ಯಾರು ಎನ್ನುವ ಬಗ್ಗೆ ಇಬ್ಬರು ದಿಗ್ಗಜ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.

Read Full Story
05:31 PM (IST) Mar 03

India latest News Live 3 March 2026 'ಗಲ್ಫ್‌ನಲ್ಲಿರುವ 1 ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ' - ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಲು ಭಾರತ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಹರಡುತ್ತಿರುವ ಯುದ್ಧದಿಂದಾಗಿ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಗಲ್ಫ್‌ನಲ್ಲಿರುವ ಕೋಟ್ಯಂತರ ಭಾರತೀಯರ ಸುರಕ್ಷತೆ, ದೇಶದ ವ್ಯಾಪಾರ ಮತ್ತು ಇಂಧನ ಮಾರ್ಗಗಳ ಮೇಲಾಗುವ ಪರಿಣಾಮಗಳ ಬಗ್ಗೆ ಸರ್ಕಾರ ಆತಂಕಗೊಂಡಿದ್ದು, ತಕ್ಷಣವೇ ಮಾತುಕತೆ ಮೂಲಕ ಸಂಘರ್ಷ ಕೊನೆಗೊಳಿಸಲು ಕರೆ ನೀಡಿದೆ.
Read Full Story
05:13 PM (IST) Mar 03

India latest News Live 3 March 2026 ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಿಂದ ಬ್ಯಾನ್ ಆಗ್ತಾರಾ ಸಂಜು ಸ್ಯಾಮ್ಸನ್? ಶುರುವಾಯ್ತು ಹೊಸ ಭೀತಿ!

ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ತಂದುಕೊಟ್ಟ ಸಂಭ್ರಮದಲ್ಲಿ ಹೆಲ್ಮೆಟ್ ಬಿಸಾಡಿದ ಸಂಜು ಸ್ಯಾಮ್ಸನ್ ಐಸಿಸಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆಯಿದೆ. ಇದು 'ಲೆವೆಲ್ 1' ಅಪರಾಧವಾದ್ದರಿಂದ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ನಿಷೇಧ ಹೇರುವ ಸಾಧ್ಯತೆ ಕಡಿಮೆ.

Read Full Story
04:59 PM (IST) Mar 03

India latest News Live 3 March 2026 ಮಧ್ಯಪ್ರಾಚ್ಯ ಸಂಘರ್ಷ - ಭಾರತ ಇನ್ನೂ ಕಾಯುವುದು ಸೂಕ್ತವಲ್ಲ, ತೈಲ, ಚಿನ್ನದ ಆಮದು ಅವಲಂಬನೆಗೆ ಅನಿಲ್ ಆರ್ಥಿಕ ಸಲಹೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವು ಭಾರತದ ಆರ್ಥಿಕತೆಗೆ ಅಪಾಯವನ್ನುಂಟುಮಾಡಿದೆ. ದೇಶದ ಆಮದು ಅವಲಂಬನೆಯನ್ನು ಎತ್ತಿ ತೋರಿಸಿರುವ ಉದ್ಯಮಿ ಅನಿಲ್ ಅಗರ್ವಾಲ್ಸ್ವಾ ವಲಂಬನೆ ಸಾಧಿಸಲು ದೇಶೀಯ ಸಂಪನ್ಮೂಲಗಳ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸಬೇಕೆಂದು ಸಲಹೆ ನೀಡಿದ್ದಾರೆ.

Read Full Story
04:58 PM (IST) Mar 03

India latest News Live 3 March 2026 ಖಮೇನಿ ಹತ್ಯೆ, ಭಾರತ ತೊರೆದು ಇರಾನ್‌ನಲ್ಲಿ ನೆಲೆಸಲು ಸಿದ್ಧ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ

ಖಮೇನಿ ಹತ್ಯೆ, ಭಾರತ ತೊರೆದು ಇರಾನ್‌ನಲ್ಲಿ ನೆಲೆಸಲು ಸಿದ್ಧ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸರ್ವೋಚ್ಚ ನಾಯಕನ ಹತ್ಯೆ ಬೆನ್ನಲ್ಲೇ ತಾನು ಭಾರತ ತೊರೆದು ಇರಾನ್‌ಗೆ ಮರಳಲು ಸಿದ್ದ ಎಂದಿದ್ದಾರೆ.

Read Full Story
04:56 PM (IST) Mar 03

India latest News Live 3 March 2026 Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?

ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಹೆಸರು ಕೇಳಿಬರುತ್ತಿದೆ. ತ್ರಿಷಾ ಅವರದ್ದು ಎನ್ನಲಾದ ವೈರಲ್ ಪೋಸ್ಟ್ ಇದಕ್ಕೆ ಕಾರಣ ಎನ್ನಲಾಗಿದ್ದು, ಅದು ಎಡಿಟ್ ಮಾಡಲಾದ ಸುಳ್ಳು ಪೋಸ್ಟ್ ಎಂಬುದು ಬಹಿರಂಗವಾಗಿದೆ.

Read Full Story
04:24 PM (IST) Mar 03

India latest News Live 3 March 2026 UN role in Iran conflict - ಇರಾನ್ ಮೇಲಿನ ದಾಳಿಯನ್ನ ವಿಶ್ವಸಂಸ್ಥೆ ಏಕೆ ತಡೆಯುತ್ತಿಲ್ಲ ಗೊತ್ತಾ?

ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಗೆ ವಿಶ್ವಸಂಸ್ಥೆ ಮೌನವಹಿಸಿದೆ. ಭದ್ರತಾ ಮಂಡಳಿಯ ಖಾಯಂ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ವೀಟೋ ಅಧಿಕಾರದ ಕಾರಣದಿಂದಾಗಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಈ ಲೇಖನವು ವಿಶ್ವಸಂಸ್ಥೆಯ ಈ ಅಸಹಾಯಕತೆಯ ಹಿಂದಿನ ಕಾರಣಗಳನ್ನು ವಿಶ್ಲೇಷಿಸುತ್ತದೆ.
Read Full Story
04:01 PM (IST) Mar 03

India latest News Live 3 March 2026 Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ, ಸಾಮಾನ್ಯವಾಗಿ 180 ಡಿಗ್ರಿ ವಿರುದ್ದ ದಿಕ್ಕಿನಲ್ಲಿರುವ ಸೂರ್ಯ ಹಾಗೂ ಚಂದ್ರ ಇಂದು ಏಕಕಾಲಕ್ಕೆ ಗೋಚರವಾಗುತ್ತಾರೆ.

Read Full Story
03:57 PM (IST) Mar 03

India latest News Live 3 March 2026 ರಿಂಕು ಸಿಂಗ್ ಇದ್ದರೂ ಸಂಜು ಸ್ಯಾಮ್ಸನ್‌ಗೆ ಚಾನ್ಸ್ ಕೊಟ್ಟಿದ್ದೇಕೆ? ಇಲ್ಲಿದೆ 4 ಇಂಟ್ರೆಸ್ಟಿಂಗ್ ಕಾರಣ

ತಂದೆಯ ನಿಧನದಿಂದಾಗಿ ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಆ ಜಾಗದಲ್ಲಿ ಬಂದ ಸಂಜು ಸ್ಯಾಮ್ಸನ್‌ಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೂ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ರಿಂಕು ಲಭ್ಯವಿದ್ದರೂ ಸಂಜು ಅವರನ್ನೇ ಯಾಕೆ ಆಡಿಸಲಾಯಿತು ಗೊತ್ತಾ?

Read Full Story