ದೇವರನ್ನೇ ಸಾಯಿಸಿ ದೇಗುಲದ ಆಸ್ತಿ ಲಪಟಾಯಿಸಿದರು!
ದೇವರಿಗೆ ಸಾವಿಲ್ಲ ಎಂಬುದು ಎಲ್ಲರ ನಂಬಿಕೆ| ದೇವರಿಗೂ ಸಾವಿದೆ ಎಂಬುದನ್ನು ಸಾಬೀತುಪಡಿಸುವ ಪ್ರಕರಣ| ದೇವರನ್ನೇ ಸಾಯಿಸಿ ದೇಗುಲದ ಆಸ್ತಿ ಲಪಟಾಯಿಸಿದರು!
ಲಖನೌ(ಫೆ.17): ದೇವರಿಗೆ ಸಾವಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ದೇವರಿಗೂ ಸಾವಿದೆ ಎಂಬುದನ್ನು ಸಾಬೀತುಪಡಿಸುವ ಪ್ರಕರಣವೊಂದು ಉತ್ತರಪ್ರದೇಶ ಲಖನೌ ಜಿಲ್ಲೆಯ ಮೋಹನ್ಲಾಲ್ ಗಂಜಿ ನಗರದಲ್ಲಿ ನಡೆದಿದೆ.
ನಗರದಲ್ಲಿ 100 ವರ್ಷಗಳ ಇತಿಹಾಸ ಇರುವ ಕೃಷ್ಣ-ರಾಮ ದೇಗುಲದ ಹೆಸರಿನಲ್ಲಿ ಜಮೀನು ಇತ್ತು. ಕೆಲ ದಶಕಗಳ ಹಿಂದೆ ‘ಕೃಷ್ಣರಾಮ್’ ಸತ್ತಿದ್ದಾರೆ ಎಂದು ಉಲ್ಲೇಖಿಸಿ ಗಯಾ ಪ್ರಸಾದ್ ಎಂಬವರಿಗೆ ಆ ಜಮೀನು ವರ್ಗಾವಣೆಯಾಗಿದೆ. ಗಯಾಪ್ರಸಾದ್ ಮರಣದ ನಂತರ ಆ ಭೂಮಿ ಅವರ ಇಬ್ಬರು ಸಹೋದರರಿಗೆ ಹಂಚಿಕೆಯಾಗಿದೆ.
ಗಂಡ ಬೇಕು ಎಂದು ದೇವರಿಗೆ ಬರೆದ ಪತ್ರ ವೈರಲ್
ಇತ್ತೀಚೆಗೆ ದೇವಸ್ಥಾನದ ಟ್ರಸ್ಟಿಗಳ ದೂರಿನ ಅನ್ವಯ ತನಿಖೆ ನಡೆಸಿದಾಗ ಕೃಷ್ಣ-ರಾಮ ಎಂಬ ದೇವರ ಹೆಸರನ್ನು ಮನುಷ್ಯರ ಹೆಸರೆಂದು ಬಿಂಬಿಸಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದ ಅಚ್ಚರಿಯ ವಿಷಯ ಬಯಲಾಗಿದೆ.