ಆಫ್ಘಾನಿಸ್ತಾನ ತಾಲಿಬಾನ್ ಕೈವಶವಾದ ಬಳಿಕ ಇದೀಗ ಮುಗ್ದ ಜನ ನರಳಾಡುತ್ತಿದ್ದಾರೆ. ಹೊಸ ಆಡಳಿತ ನೀಡುವುದಾಗಿ ತಾಲಿಬಾನ್ ಹೇಳಿದ್ದರೂ ಅಮಾಯಕರ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಬೆಳವಣಿಗೆಗಳ ಕುರಿತು ಆಫ್ಘಾನಿಸ್ತಾನ ಸರ್ಕಾರದ ಸಲಹೆಹಾರ ಜೋವಿಟಟ್ಟ ಥಾಮಸ್ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್ Exclusive ಸಂದರ್ಶನ ನಡೆಸಿದೆ. 

ಬೆಂಗಳೂರು(ಆ.20): ಆಫ್ಘಾನಿಸ್ತಾನ ತಾಲಿಬಾನ್ ಕೈವಶವಾದ ಬಳಿಕ ಇದೀಗ ಮುಗ್ದ ಜನ ನರಳಾಡುತ್ತಿದ್ದಾರೆ. ಹೊಸ ಆಡಳಿತ ನೀಡುವುದಾಗಿ ತಾಲಿಬಾನ್ ಹೇಳಿದ್ದರೂ ಅಮಾಯಕರ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಬೆಳವಣಿಗೆಗಳ ಕುರಿತು ಆಫ್ಘಾನಿಸ್ತಾನ ಸರ್ಕಾರದ ಸಲಹೆಹಾರ ಜೋವಿಟಟ್ಟ ಥಾಮಸ್ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್ Exclusive ಸಂದರ್ಶನ ನಡೆಸಿದೆ. 

Add Asianetnews Kannada as a Preferred SourcegooglePreferred

"

ಕಾಬೂಲಿಗೆ ತಾಲೀಬಾನಿಗಳು ಬಂದ ದಿನ ಏನಾಯ್ತು? ಉಡುಪಿಗೆ ಬಂದಿಳಿದ ಜಾನ್ ಹೇಳಿದ ಸತ್ಯಗಳು!

ತಾಲಿಬಾನ್ ಮಾತು ನಂಬಲೇಬೇಡಿ. ಭಾರತ ಅತ್ಯಂತ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಆಫ್ಗಾನ್ ಅಡ್ವೈಸರ್ ಹೇಳಿದ್ದಾರೆ. ತಾಲಿಬಾನ್ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ. ಮಾಜಿ ಅಧ್ಯಕ್ಷ ಕರ್ಜೈ ಬಳಸಿ ಸರ್ಕಾರ ರಚಿಸಿದರೂ ಪರಿಸ್ಥಿತಿ ಬದಲಾಗಲ್ಲ ಎಂದು ಜೋವಿಟ್ಟ ಥಾಮಸ್ ಹೇಳಿದ್ದಾರೆ. ಆಫ್ಘಾನಿಸ್ತಾನ ಜನತೆ ಭಾರತ ಪ್ರೀತಿಸುತ್ತಾರೆ, ಪಾಕ್ ದ್ವೇಷಿಸುತ್ತಾರೆ. ತಾಲಿಬಾನ್, ಪಾಕಿಸ್ತಾನ, ಚೀನಾ ಕುರಿತು ಎಚ್ಚರಿಕೆ ಅಗತ್ಯ ಎಂದಿದ್ದಾರೆ.

10 ವರ್ಷ ಭಾರತದಲ್ಲಿದ್ದ ಅಕ್ರಮವಾಗಿ ನೆಲೆಸಿದ್ದ ಯುವಕ; ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷ!

ಕೇರಳ ಮೂಲದ ಜೋವಿಟ್ಟ ಥಾಮಸ್ ಆಫ್ಘಾನ್ ಸರ್ಕಾರದ ಅಡ್ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಫ್ಘಾನಿಸ್ತಾನದ ಮೂರು ಸಚಿವಾಲದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯದ ಅಫ್ಘಾನಿಸ್ತಾನ ಪರಿಸ್ಥಿತಿ, ತಾಲಿಬಾನ್ ಆಕ್ರಮಣ ಹಾಗೂ ಆಫ್ಘಾನ್ ಸೇನೆ ತಾಲಿಬಾನ್ ಆಕ್ರಣ ತಡೆಯುವಲ್ಲಿ ಯಾಕೆ ವಿಫಲವಾಯಿತು ಅನ್ನೋ ಕುರಿತು ಜೋವಿಟ್ಟ ಥಾಮಸ್ ನೈಜ ಚಿತ್ರಣ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ Exclusive ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.