ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಅವರ ವಿವಾದಾತ್ಮಕ ಕಾಮೆಂಟ್ನ ನಂತರ, ಡಿಜಿಟಲ್ ಕಂಟೆಂಟ್ಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ನೈತಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮತೋಲನದಲ್ಲಿರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲಹಬಾದಿಯಾ ಅವರ ಕಾರ್ಯಕ್ರಮಗಳು ನೈತಿಕ ಮಾನದಂಡಗಳನ್ನು ಪಾಲಿಸುವಂತೆ ಕೋರ್ಟ್ ಸೂಚಿಸಿದೆ.
ನವದೆಹಲಿ (ಮಾ.3): ನೈತಿಕತೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಸಮತೋಲನದಲ್ಲಿರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದ್ದು, ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಅವರ ಅಸಭ್ಯ ಕಾಮೆಂಟ್ನ ವಿವಾದದ ನಂತರ ಡಿಜಿಟಲ್ ಕಂಟೆಂಟ್ಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ಈ ಅಂಶವನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಈ ಹಿಂದೆ ಯಾವುದೇ ಶೋ ಚಿತ್ರೀಕರಿಸಲು ನಿರ್ಬಂಧಿಸಿದ್ದ 31 ವರ್ಷದ ಅಲಹಬಾದಿಯಾ ಅವರು ಈಗ ತಮ್ಮ The Ranveer Show ಪುನಾರಂಭಿಸಲು ಅನುಮತಿ ಪಡೆದಿದ್ದಾರೆ. ಆದರೆ, ಅವರ ಕಾರ್ಯಕ್ರಮಗಳು ಎಲ್ಲ ವಯೋಮಾನದ ಪ್ರೇಕ್ಷಕರು ನೋಡಬಹುದಾದ ಮಟ್ಟದ ನೈತಿಕ ಮಾನದಂಡಗಳನ್ನು ಪಾಲಿಸುವಂತೆ ಭರವಸೆ ನೀಡಬೇಕೆಂದು ಕೋರ್ಟ್ ಸ್ಪಷ್ಟಪಡಿಸಿದೆ.
The BeerBiceps Guy ಎಂದು ಯೂಟ್ಯೂಬ್ನಲ್ಲಿ ಜನಪ್ರಿಯರಾಗಿರುವ ಅಲಹಬಾದಿಯಾ, ಕಳೆದ ತಿಂಗಳು India’s Got Latent ರೋಸ್ಟ್ ಶೋನಲ್ಲಿ ಅಸಭ್ಯ ಮಾತು ಅಡಿದ ಕಾರಣಕ್ಕೆ ಭಾರೀ ವಿವಾದ ಸೃಷ್ಟಿಸಿದ್ದರು. ಕಾಮಿಡಿಯನ್ ಸಮಯ್ ರೈನಾ ನಡೆಸುತ್ತಿದ್ದ ಈ ಕಾರ್ಯಕ್ರಮದಲ್ಲಿ, ಅಲಹಬಾದಿಯಾ ಸ್ಪರ್ಧಿಯೊಬ್ಬರನ್ನು ಉದ್ದೇಶಿಸಿ,
"ನೀನು ಪ್ರತಿದಿನ ಪೋಷಕರ ಸೆಕ್ಸ್ಅನ್ನು ನೋಡಲು ಇಷ್ಟಪಡುತ್ತೀಯಾ ಅಥವಾ ಒಮ್ಮೆ ಅವರ ಜೊತೆ ಸೆಕ್ಸ್ನಲ್ಲಿ ಪಾಲ್ಗೊಂಡು ಶಾಶ್ವತವಾಗಿ ನಿಲ್ಲಿಸಲು ಇಷ್ಟಪಡ್ತೀಯಾ' ಎಂದು ಅಶ್ಲೀಲತೆಯ ಎಲ್ಲೆ ಮೀರಿದ ಪ್ರಶ್ನೆ ಕೇಳಿದ್ದರು.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಡಿಜಿಟಲ್ ವೇದಿಕೆಗಳಲ್ಲಿ ಅಸಭ್ಯತೆಯನ್ನು ಕಾಮಿಡಿ ಎಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ವಿರುದ್ಧ ರಣವೀರ್ ಅಲಹಬಾದಿಯಾ, ಸಮಯ್ ರೈನಾ ಮತ್ತು ಶೋಗೆ ಸಂಬಂಧಿಸಿದ ಇತರರ ವಿರುದ್ಧ ಹಲವು ಪೊಲೀಸ್ ದೂರುಗಳು ದಾಖಲಾಗಿದವು.
ಅಶ್ಲೀಲ ಹಾಸ್ಯ ಪ್ರಕರಣ: ರಣ್ವೀರ್ ಅಲ್ಲಾಹಾಬಾದಿಯಾನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸುಪ್ರೀಂ ಕೋರ್ಟ್
ಈ ವಿವಾದದ ಬೆನ್ನಲ್ಲೇ, ಅಲಹಬಾದಿಯಾ ತಮ್ಮ ಹೇಳಿಕೆಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು ಮತ್ತು "ಕಾಮಿಡಿ ನನ್ನ ಶಕ್ತಿ ಕ್ಷೇತ್ರವಲ್ಲ", "ನನ್ನ ಮಾತು ಸೂಕ್ತವಾಗಿರಲಿಲ್ಲ, ಅದು ತಮಾಷೆಯೂ ಅಲ್ಲ" ಎಂದು ಒಪ್ಪಿಕೊಂಡಿದ್ದರು. "India’s Got Latent ನಲ್ಲಿ ನಾನು ಹೇಳಿದ ಮಾತು ತಪ್ಪು. ಕ್ಷಮಿಸಿ" ಎಂಬ ಶೀರ್ಷಿಕೆ ಸಹಿತ ಕ್ಷಮಾಪಣೆಯ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಜನ್ಮತಾಳಿದ ಬಳಿಕ ಮತ್ತೆ ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್!
"ನನ್ನ ಹೇಳಿಕೆ ಅಸಭ್ಯವಾಗಿತ್ತು, ಮತ್ತು ಅದು ತಮಾಷೆಯೂ ಅಲ್ಲ. ಕಾಮಿಡಿ ನನ್ನ ಶಕ್ತಿ ಕ್ಷೇತ್ರವಲ್ಲ. ನಾನು ಇಲ್ಲಿ ಕೇವಲ ಕ್ಷಮೆ ಕೇಳಲು ಬಂದಿದ್ದೇನೆ. ಇದನ್ನು ಸಮರ್ಥಿಸಲು ಅಥವಾ ವ್ಯಾಖ್ಯಾನಿಸಲು ನಾನು ಇಲ್ಲ. ಇದು ನನ್ನ ತಪ್ಪು ನಿರ್ಧಾರ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಇದು ನನ್ನ ಭಾಗದಿಂದ ಸರಿಯೇ ಅಲ್ಲ," ಎಂದು ಅಲಹಬಾದಿಯಾ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
