Asianet Suvarna News Asianet Suvarna News

ಬೇಕಾಬಿಟ್ಟಿ ಜನ ಸೇರಿದ್ದ ರಾಜ್ಯದಲ್ಲಿ ಕಂಟ್ರೋಲ್‌ಗೆ ಸಿಕ್ತಿಲ್ಲ ಕೊರೋನಾ..!

ಜನ ಬೇಕಾಬಿಟ್ಟಿ ಸೇರೋಕೆ ಬಿಟ್ಟ ರಾಜ್ಯದಲ್ಲೆಲ್ಲಾ ಕೊರೋನಾ ಏರಿಕೆ | ಕಂಟ್ರೋಲ್‌ಗೆ ಸಿಗದಷ್ಟು ತಾರಕಕ್ಕೇರಿದ ಕೊರೋನಾ

 

States That Allowed Mass Gatherings Register Exponential Spike In COVID 19 Case load dpl
Author
Bangalore, First Published Apr 29, 2021, 1:38 PM IST

ದೆಹಲಿ(ಏ.29): ಏಪ್ರಿಲ್ 27 ರಂದು ಹರಿದ್ವಾರದ ಕುಂಭಮೇಳದಲ್ಲಿ ಕೊನೆಯ 'ಶಾಹಿ ಸ್ನ್ಯಾನ್' ನಡೆಯಿತು. COVID-19 ಪ್ರಕರಣಗಳಲ್ಲಿ ರಾಷ್ಟ್ರವ್ಯಾಪಿ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಆಚರಣೆಯನ್ನು ಸಾಂಕೇತಿಕವಾಗಿ ಸೀಮಿತಗೊಳಿಸಲಾಯಿತು.

ಆದರೆ ಎಚ್ಚೆತ್ತುಕೊಂಡು ಸಾಂಕೇತಿಕ ಸ್ನಾನಕ್ಕೆ ನಿರ್ಧಾರ ಮಾಡಿದ್ದು ಮಾತ್ರ ಸ್ವಲ್ಪ ತಡವಾಯ್ತು. ಉತ್ತರಾಖಂಡ್‌ನ ಹರಿದ್ವಾರದಲ್ಲಿ ತಡವಾಗಿ ಎಚ್ಚೆತ್ತುಕೊಂಡಿದ್ದರಿಂದ ವಿಪತ್ತು ತಡೆಯುವಲ್ಲಿ ವಿಳಂಬ ಮಾಡಿದಂತಾಗಿದೆ.

ಪಾಕ್‌ನಿಂದ ಭಾರತಕ್ಕೆ ಸಾಲು ಸಾಲು ಆಕ್ಸಿಜನ್ ಟ್ಯಾಂಕರ್ ?

ಮಾರ್ಚ್ 31 ಮತ್ತು ಏಪ್ರಿಲ್ 24 ರ ನಡುವೆ ಉತ್ತರಾಖಂಡದಲ್ಲಿ 1,800 ರಷ್ಟು ಆಕ್ಟಿವ್ ಪ್ರಕರಣಗಳನ್ನು ದಾಖಲಾಗಿದೆ. ಇದಕ್ಕೆ ಸರಿಯಾಗಿ ಹರಿದ್ವಾರ ಮಹಾಕುಂಭಮೇಳವೂ ಸೇರಿತು. ಮಹಾಕುಂಭಕ್ಕೆ ಮುಂಚಿತವಾಗಿ, ಒಟ್ಟು ಸಕ್ರಿಯ ಪ್ರಕರಣಗಳು ಮಾರ್ಚ್ 31ರ ಅವಧಿಯಲ್ಲಿ 1,863 ಆಗಿದ್ದವು, ಆದರೆ ಏಪ್ರಿಲ್ 24 ರ ವೇಳೆಗೆ ದೈನಂದಿನ ಪ್ರಕರಣ 33,330 ಕ್ಕೆ ಏರಿತು.

ಕೋಲ್ಕತಾ ಮತ್ತು ಅದರ ಉಪನಗರಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ COVID-19 ಪಾಸಿಟಿವ್ ದೃಢಪಡುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ, ನಾಲ್ಕು ಆರ್‌ಟಿ-ಪಿಸಿಆರ್ ವರದಿಗಳಲ್ಲಿ ಒಂದು COVID-19 ಪಾಸಿಟಿವ್ ಆಗುತ್ತಿದೆ.

Follow Us:
Download App:
  • android
  • ios