ಒಂದು ದೇಶ, ಒಂದು ಭಾಷೆ ಪರ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಬ್ಯಾಟಿಂಗ್!
ದೇಶದಲ್ಲಿ ಹಿಂದಿ ಭಾಷಾ ಹೇರಿಕೆ ವಿವಾದದ ನಡೆಯುತ್ತಿರುವ ಬೆನ್ನಲ್ಲೇ ಶಿವಸೇನಾ ಮುಖ್ಯಸ್ಥ ಸಂಜಯ್ ರಾವುತ್ ‘ಒಂದು ದೇಶ, ಒಂದು ಭಾಷೆ’ಯ ಪರ ಬ್ಯಾಟಿಂಗ್ ಮಾಡಿದ್ದು, ಹಿಂದಿ ಭಾಷೆಯನ್ನು ದೇಶಾದ್ಯಂತ ಮಾತನಾಡಲಾಗುತ್ತಿದ್ದು, ಇದು ಸ್ವೀಕಾರಾರ್ಹತೆಯನ್ನು ಪಡೆದಿದೆ ಎಂದು ಹೇಳಿದ್ದಾರೆ.
ಮುಂಬೈ (ಮೇ.15): ದೇಶದಲ್ಲಿ (India) ಹಿಂದಿ ಭಾಷಾ (Hindi Language) ಹೇರಿಕೆ ವಿವಾದದ (Controversy) ನಡೆಯುತ್ತಿರುವ ಬೆನ್ನಲ್ಲೇ ಶಿವಸೇನಾ (Shiv Sena) ಮುಖ್ಯಸ್ಥ ಸಂಜಯ್ ರಾವತ್ (Sanjay Raut) ‘ಒಂದು ದೇಶ, ಒಂದು ಭಾಷೆ’ಯ ಪರ ಬ್ಯಾಟಿಂಗ್ ಮಾಡಿದ್ದು, ಹಿಂದಿ ಭಾಷೆಯನ್ನು ದೇಶಾದ್ಯಂತ ಮಾತನಾಡಲಾಗುತ್ತಿದ್ದು, ಇದು ಸ್ವೀಕಾರಾರ್ಹತೆಯನ್ನು ಪಡೆದಿದೆ ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲ ರಾಜ್ಯಗಳಲ್ಲೂ ಒಂದೇ ಭಾಷೆಯ ಪದ್ಧತಿ ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಅವರಿಗೆ ಸವಾಲು ಹಾಕಿದ್ದಾರೆ.
ತಮಿಳ್ನಾಡಿನ ಶಿಕ್ಷಣ ಸಚಿವ ಕೆ. ಪೊನ್ಮುಡಿ ಶುಕ್ರವಾರ ಹಿಂದಿ ಭಾಷಿಗರು ಕೊಯಮತ್ತೂರಿನಲ್ಲಿ ಪಾನಿಪುರಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ ಬೆನ್ನಲ್ಲೇ ರಾವುತ್, ‘ತಮಿಳ್ನಾಡಿನ ಸಚಿವ ಹೇಳಿಕೆಯಿಂದ ದಕ್ಷಿಣ ಭಾರತದಲ್ಲೂ ಹಿಂದಿ ಮಾತನಾಡುವವರು ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ’ ಎಂದಿದ್ದಾರೆ.
Belgaum Files: ಕನ್ನಡಿಗರನ್ನು ಕೆಣಕಿದ ಸಂಜಯ್ ರಾವತ್ ಗೆ ಸಿಎಂ ಬೊಮ್ಮಾಯಿ ತಿರುಗೇಟು
‘ನನಗೆ ಸದನದಲ್ಲಿ ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ನಾನು ಮಾತನಾಡುವುದನ್ನು ಇಡೀ ದೇಶವೇ ಕೇಳಬೇಕು ಎಂದು ಬಯಸುತ್ತೇನೆ. ಹಿಂದಿ ರಾಷ್ಟ್ರದ ಭಾಷೆಯಾಗಿದೆ. ಇಡೀ ದೇಶದಲ್ಲಿ ಜನರಿಂದ ಸ್ವೀಕಾರಾರ್ಹತೆ ಪಡೆದ ಏಕೈಕ ಭಾಷೆ ಹಿಂದಿಯಾಗಿದೆ’ ಎಂದಿದ್ದಾರೆ. ‘ಒಂದು ದೇಶ, ಒಂದು ಸಂವಿಧಾನ, ಒಂದು ಸಂಕೇತ ಹಾಗೂ ಒಂದು ಭಾಷೆ ಜಾರಿಗೆ ಬರಬೇಕು. ಎಲ್ಲ ರಾಜ್ಯಗಳಲ್ಲಿ ಒಂದು ಭಾಷೆಯನ್ನು ಜಾರಿಗೆ ತರುವ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವೀಕರಿಸಬೇಕು’ ಎಂದು ರಾವುತ್ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ ಹೇಳಿಕೆ ಖಂಡಿಸಿದ ಸಂಜಯ್ ರಾವತ್: ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಕೇಂದ್ರವು ಮಾತುಕತೆ ನಡೆಸುವವರೆಗೂ ಕಾಶ್ಮೀರದಲ್ಲಿ ಶಾಂತಿಯು ದುಸ್ತರವಾಗಿರುತ್ತದೆ ಎಂದು ಮೆಹಬೂಬಾ ಮುಫ್ತಿ ಹೇಳಿದ ಬೆನ್ನಲ್ಲಿಯೇ ಅವರ ವಿರುದ್ಧ ಟೀಕಾಪ್ರಹಾರ ಆರಂಭವಾಗಿದೆ. ಇದನ್ನು ಕಟುಶಬ್ದಗಳಲ್ಲಿ ಟೀಕೆ ಮಾಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಮೆಹಬೂಬಾ ಮುಫ್ತಿಯಂಥ ವ್ಯಕ್ತಿಗಳ ಜೊತೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದ ಕಾರಣದಿಂದಾಗಿಯೇ ಈ ವ್ಯಕ್ತಿಗಳಿಗೆ ಇಂಥ ಹೇಳಿಕೆ ನೀಡಲು ಶಕ್ತಿ ಸಿಕ್ಕಂತಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೆಲವು ಸಮಯದಲ್ಲಿ ಬಿಜೆಪಿಯ "ಸ್ನೇಹಿತ"ರಾಗಿ ಆಡಳಿತ ಮಾಡಿದ್ದರು ಎಂದಿದ್ದಾರೆ. ಪಿಡಿಪಿ (PDP) ಮೊದಲಿನಿಂದಲೂ "ಪಾಕಿಸ್ತಾನದ ಪರವಾಗಿದೆ ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ" ಎಂದು ಅವರು ಆರೋಪಿಸಿದ್ದಾರೆ. 2015 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪಿಡಿಪಿ ಮತ್ತು ಬಿಜೆಪಿ ಒಟ್ಟಾಗಿದ್ದವು. ಜೂನ್ 2018 ರಲ್ಲಿ ಮೈತ್ರಿ ಮುರಿದುಹೋಯಿತು. ಕಾಶ್ಮೀರದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದ ಜನರೊಂದಿಗೆ ಪಾಕಿಸ್ತಾನದ ಜೊತೆಯಲ್ಲೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮಾತನಾಡಬೇಕು ಎಂದು ಮೆಹಬೂಬಾ ಮುಫ್ತಿ ಶನಿವಾರ ಹೇಳಿದ್ದರು.
Maha Vikas Aghadi ಅಸಾದುದ್ದೀನ್ ಓವೈಸಿ ಪಾರ್ಟಿ, ಬಿಜೆಪಿಯ ಬಿ ಟೀಮ್ ಎಂದ ಸಂಜಯ್ ರಾವತ್!
ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನುಮುಫ್ತಿ ಬೆಂಬಲಿಸಿದ್ದರು ಇಂಥ ಪಕ್ಷದೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರವನ್ನು ರಚಿಸಿತ್ತು. ಇದರಿಂದಾಗಿ ಮೆಹಬೂಬಾ ಮುಫ್ತಿ ಇಂಥ ಮಾತುಗಳನ್ನು ಆಡಲು ಶಕ್ತಿ ಸಿಕ್ಕಂತಾಗಿದೆ ಎಂದು ರಾವತ್ ಹೇಳಿದ್ದಾರೆ. "ಈಗ ಅದೇ ಮೆಹಬೂಬಾ ಮುಫ್ತಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ಬಯಸಿದ್ದಾರೆ. ಇದು ಬಿಜೆಪಿ ಮಾಡಿರುವ ಪಾಪ" ಎಂದು ಅವರು ಆರೋಪಿಸಿದ್ದಾರೆ. ಅಂತಹವರಿಗೆ ಅಧಿಕಾರ ಹಂಚುವ ಮೂಲಕ ಬಿಜೆಪಿ ಶಕ್ತಿ ನೀಡಿತು. ಹೀಗಾಗಿ ಮೆಹಬೂಬಾ ಮುಫ್ತಿ ಹೇಳುತ್ತಿರುವುದಕ್ಕೆ ಬಿಜೆಪಿಯೇ ಹೊಣೆ ಎಂದರು. ಈ ವಿಷಯದ ಬಗ್ಗೆ ಬಿಜೆಪಿಯ ದೃಷ್ಟಿಕೋನ ಈಗ ಏನೇ ಇರಲಿ, ಪಿಡಿಪಿಯ ಸಿದ್ಧಾಂತವನ್ನು ಯಾವಾಗಲೂ ಶಿವಸೇನೆ ವಿರೋಧಿಸುತ್ತದೆ ಎಂದು ಹೇಳಿದರು.