ಭಾರತೀಯ ರೈಲ್ವೆಯು ಕಾಯ್ದಿರಿಸುವ ಟಿಕೆಟ್‌ ಸ್ವರೂಪದಲ್ಲಿ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಇನ್ನು ಮುಂದೆ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ತಮಗೆ ನಿಗದಿಯಾದ ನಿಲ್ದಾಣದಲ್ಲಿ ರೈಲು ಏರದಿದ್ದರೆ ಟಿಕೆಟ್‌ ರದ್ದಾಗಲಿದೆ.

ನವದೆಹಲಿ: ಭಾರತೀಯ ರೈಲ್ವೆಯು ಕಾಯ್ದಿರಿಸುವ ಟಿಕೆಟ್‌ ಸ್ವರೂಪದಲ್ಲಿ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಇನ್ನು ಮುಂದೆ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ತಮಗೆ ನಿಗದಿಯಾದ ನಿಲ್ದಾಣದಲ್ಲಿ ರೈಲು ಏರದಿದ್ದರೆ ಟಿಕೆಟ್‌ ರದ್ದಾಗಲಿದೆ.

ಟಿಕೆಟ್‌ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌

ರೈಲ್ವೆಯು, ಟಿಕೆಟ್‌ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌ಗಳನ್ನು (ಹ್ಯಾಂಡ್‌ ಹೆಲ್ಡ್‌ ಟರ್ಮಿನಲ್ಸ್‌) ನೀಡಿದೆ. ಒಂದು ವೇಳೆ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ ಅದು ತಕ್ಷಣ ಈ ಎಚ್‌ಎಚ್‌ಟಿಗಳಲ್ಲಿ ದಾಖಲಾಗುತ್ತದೆ.

ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ

ಬಳಿಕ ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ ನೀಡಲಾಗುತ್ತದೆ. ಆಸನ ಬೇರೊಬ್ಬರಿಗೆ ನೀಡಿದ ಬಗ್ಗೆ ಮೂಲ ಪ್ರಯಾಣಿಕರಿಗೆ ಸಂದೇಶವೂ ರವಾನೆಯಾಗಲಿದೆ. ಇದಕ್ಕೂ ಮೊದಲು ನಿಗದಿತ ನಿಲ್ದಾಣದಲ್ಲಿ ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೆ ಟಿಟಿಇ ಆ ಆಸನವನ್ನು ಬೇರೆಯವರಿಗೆ ನೀಡದೆ ಮುಂದಿನ 2 ನಿಲ್ದಾಣಗಳ ವರೆಗೆ ಖಾಲಿ ಬಿಡುತ್ತಿದ್ದರು.