ಓಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತದಿಂದ 3 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಕ್ಕಟ್ಟಾದ ಸ್ಥಳ ಮತ್ತು ಜನಸಂದಣಿ ನಿಯಂತ್ರಣದ ಕೊರತೆ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿದೆ.

ನವದೆಹಲಿ: ಓಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆ ನಡೆಯುತ್ತಿರುವ ಹಿನ್ನೆಲೆ ಗುಂಡಿಚಾ ದೇವಾಲಯದ ಬಳಿಯ ಬಳಿಯ ಶಾರದಾಬಲಿಯಲ್ಲಿ ಭಾನುವಾರ ಮುಂಜಾನೆ ದುರಂತ ಸಂಭವಿಸಿದ್ದು, ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವಾರಾಂತ್ಯದ ಕಾರಣವಾದ್ದರಿಂದ ಭಕ್ತರಯ ರಥಗಳ ಮೇಲೆ ದೇವತೆಗಳನ್ನು ನೋಡಲು ಕಿಕ್ಕಿರಿದು ಸೇರಿದ್ದರು. ಈ ವೇಳೆ ಬೆಳಿಗ್ಗೆ 4.00 ರಿಂದ 5.00 ರ ನಡುವೆ ಕಾಲ್ತುಳಿತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಮರದ ದಿಮ್ಮಿಗಳನ್ನು ಹೊತ್ತ ಎರಡು ಲಾರಿ ವಾಹನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದ ಪ್ರದೇಶದಲ್ಲಿ ಪ್ರವೇಶಿಸಲು ಯತ್ನಿಸಿದಾಗ ಪರಿಸ್ಥಿತಿ ಕೈ ಮೀರಿ, ಕಾಲ್ತುಳಿತಕ್ಕೆ ಕಾರಣವಾಯಿತು.

ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವು ಬಹಳ ಇಕ್ಕಟ್ಟಾಗಿದ್ದ ಕಾರಣ, ಪೊಲೀಸ್ ಬಂಧೋಬಸ್ತು ಕೂಡ ಕಡಿಮೆಯಾಗಿತ್ತು. ರಥಗಳ ಬಳಿ ತಾಳೆ ಮರದ ಏಣಿಗಳು ಚದುರಿದವು. ಈ ಎಲ್ಲಾ ಕಾರಣಗಳಿಂದ ಭಕ್ತರಿಗೆ ಅಪಾಯದ ಪರಿಸ್ಥಿತಿ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿ ಚಿನ್ಮಯ್ ಪಾತ್ರ ತಿಳಿಸಿದ್ದಾರೆ. ಕಾಲ್ತುಳಿತದ ಕುರಿತು ಪ್ರತಿಕ್ರಿಯಿಸಿರುವ ಓಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರು, “ಈ ದುರ್ಘಟನೆಯಲ್ಲಿ ಮೂವರು ತಮ್ಮ ಪ್ರಾಣ ಕಳೆದುಕೊಂಡಿರುವುದು ಬಹಳ ದುಃಖದ ಸಂಗತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯನ್ನು ನಡೆಸಲಾಗುತ್ತದೆ. ನಿರ್ಲಕ್ಷ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದ್ದಾರೆ.

ಕಳೆದ ಶುಕ್ರವಾರದ ದಿನವೂ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 600ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಸುಮಾರು 40 ಜನರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿರುವುದು, ಅಲ್ಲಿನ ಆಡಳಿತ ಪ್ರಸಿದ್ಧ ರಥಯಾತ್ರೆಯಂತೆ ದೊಡ್ಡ ಉತ್ಸವವನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿದೆ ಎಂಬ ಆಕ್ರೋಶ ಭಕ್ತರಿಂದ ವ್ಯಕ್ತವಾಗಿದೆ.

“ರಥಯಾತ್ರೆಯಲ್ಲಿ ಜನಸಂದಣಿಯನ್ನು ನಿಯಂತ್ರಣ ಮಾಡುವ ಸಮಸ್ಯೆ ಮತ್ತೆ ಮತ್ತೆ ಎದುರಾಗುತ್ತಿದೆ. ಶುಕ್ರವಾರದ ಕಾಲ್ತುಳಿತಕ್ಕೂ, ಭಾನುವಾರದ ದುರಂತಕ್ಕೂ ಜನರ ಹೆಚ್ಚಿನ ಬೃಹತ್ ಸೇರ್ಪಡೆ ಕಾರಣವಾಗಿದೆ. ಜಗನ್ನಾಥನ ರಥವನ್ನು ಎಳೆಯಲು ಸಹ ಆಗದೆ ಬಿಟ್ಟಿತ್ತು. ಭಾನುವಾರದ ಘಟನೆ, ಗುರುತಿನಂತಹ ವಿನಾಶಕಾರಿ ಪುನರಾವರ್ತನೆಯಾಗಿದೆ,” ಎಂದು ಸ್ಥಳೀಯ ನಿವಾಸಿ ದೇಬಾಸಿಸ್ ದಾಸ್ ಕಳವಳ ವ್ಯಕ್ತಪಡಿಸಿದರು. ಈ ದುರಂತವು ದೊಡ್ಡ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಜನಸಂದಣಿಯನ್ನು ಸುಸೂತ್ರವಾಗಿ ನಿಯಂತ್ರಿಸುವ ಅಗತ್ಯದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.