Asianet Suvarna News Asianet Suvarna News

Delhi Air Pollution: ದೆಹಲಿ, ನಮ್ಮ 'ಗಾಳಿ' ಮಾಲಿನ್ಯಗೊಳಿಸಿದ್ದು ಪಾಕ್: ಸುಪ್ರೀಂನಲ್ಲಿ ಯುಪಿ ಸ್ಪಷ್ಟನೆ!

* ರಾ‍ಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ

* ಉತ್ತರ ಪ್ರದೇಶ ಸರ್ಕಾರದ ಬಳಿ ಉತ್ತರ ಕೇಳಿದ್ದ ಸುಪ್ರೀಂ

* ದೆಹಲಿ, ನಮ್ಮ 'ಗಾಳಿ' ಮಾಲಿನ್ಯಗೊಳಿಸಿದ್ದು ಪಾಕಿಸ್ತಾನ ಎಂದ ಯುಪಿ

 

Polluted air from Pakistan affecting Delhi UP govt tells Supreme Court pod
Author
Bangalore, First Published Dec 3, 2021, 12:34 PM IST

ನವದೆಹಲಿ(ಡಿ.03): ಪಾಕಿಸ್ತಾನದ (Pakistan) ಮೇಲೆ ಆಗಾಗ್ಗೆ ಭಯೋತ್ಪಾದನೆಯ ಆರೋಪ ಕೇಳಿ ಬರುತ್ತದೆ. ಆದರೆ ಈಗ ದೆಹಲಿಯ ವಾಯುಮಾಲಿನ್ಯಕ್ಕೂ (Delhi Air Pollution) ಪಾಕಿಸ್ತಾನವನ್ನೇ ದೂಷಿಸಲಾಗುತ್ತಿದೆ. ಆದಾಗ್ಯೂ, ಇದರಲ್ಲಿ ಸತ್ಯವೂ ಇದೆ, ಏಕೆಂದರೆ ಪಾಕಿಸ್ತಾನದ ಲಾಹೋರ್ (Lahore) ವಿಶ್ವದ ಅತ್ಯಂತ ಕಲುಷಿತ ನಗರವಾಗಿ ಎಂಬುವುದು ಎಲ್ಲರಿಗೂ ತಿಳಿದಿರಿವ ವಿಚಾರ. ಮಾಲಿನ್ಯ ಹರಡುವವರ ವಿರುದ್ಧ ಪಾಕಿಸ್ತಾನ ಸರ್ಕಾರ (Pakistan Govt) ಕ್ಷಿಪ್ರ ಕ್ರಮ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 3 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶ ಸರ್ಕಾರದ (Uttar Pradesh Govt) ಪರವಾಗಿ ವಕೀಲ ರಂಜಿತ್ ಕುಮಾರ್, ಯುಪಿಯಿಂದ ದೆಹಲಿಯ ಕಡೆಗೆ ಗಾಳಿ ಹೋಗುತ್ತಿಲ್ಲ ಎಂದು ವಾದಿಸಿದ್ದಾರೆ. ಈ ಕಲುಷಿತ ಗಾಳಿ ಪಾಕಿಸ್ತಾನದಿಂದ ಬರುತ್ತಿದೆ. ಈ ಗಾಳಿಯಿಂದ ಯುಪಿಯೇ ತತ್ತರಿಸಿ ಹೋಗಿದೆ ಎಂದಿದ್ದಾರೆ. ಹೀಗಿರುವಾಗ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ (CJI NV Ramana)ಅವರು ತಮಾಷೆಯಾಗಿ, ಹಾಗಾದರೆ ನೀವು ಪಾಕಿಸ್ತಾನದ ಕೈಗಾರಿಕೆಗಳನ್ನು ಮುಚ್ಚಲು ಬಯಸುತ್ತೀರಾ? ಎಂದು ಕೇಳಿದ್ದಾರೆ.

ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ

ಕಮಿಷನರ್ ನಿವೃತ್ತ ಕ್ಯಾಪ್ಟನ್ ಮುಹಮ್ಮದ್ ಉಸ್ಮಾನ್ ಅವರು ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ನಂತರ ಐದು ಆಂಟಿಸ್ಮಾಗ್ ಸ್ಕ್ವಾಡ್‌ಗಳನ್ನು ರಚಿಸಿದ್ದಾರೆ. ಈ ತಂಡಗಳು ಕೈಗಾರಿಕೆಗಳಿಗೆ ಭೇಟಿ ನೀಡುತ್ತವೆ ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಪರಿಸರ ಸಂರಕ್ಷಣಾ ಇಲಾಖೆ ತಂಡಕ್ಕೆ ನೇತೃತ್ವ ವಹಿಸಲಿದ್ದು, ಪೊಲೀಸರಲ್ಲದೆ ನಗರಸಭೆ ಮತ್ತಿತರ ಇಲಾಖೆಗಳ ಪ್ರತಿನಿಧಿಗಳೂ ತಂಡಗಳ ಸದಸ್ಯರಾಗಿರುತ್ತಾರೆ. 

Delhi Air Pollution:ನಿಮಗೆ ಸಾಧ್ಯವಿಲ್ಲದಿದ್ದರೆ ಸರ್ಕಾರ ನಡೆಸಲು ಅಧಿಕಾರಿ ನೇಮಕ, ಕೇಜ್ರಿ ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್!

ಏತನ್ಮಧ್ಯೆ, ಆಂಟಿಸ್ಮಾಗ್ ಸ್ಕ್ವಾಡ್‌ಗಳು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಾಲಿನ್ಯಕಾರಕ ಪೈರೋಲಿಸಿಸ್ ಘಟಕಗಳು, ಇಟ್ಟಿಗೆ ಗೂಡುಗಳು ಮತ್ತು ಇತರ ಕೈಗಾರಿಕಾ ಘಟಕಗಳನ್ನು ಮುಚ್ಚಿವೆ. ಲಾಹೋರ್ ಜಿಲ್ಲಾಡಳಿತದ ಪ್ರಕಾರ, ನಗರದಲ್ಲಿ 18 ಪೈರೋಲಿಸಿಸ್ ಪ್ಲಾಂಟ್‌ಗಳಿವೆ. ಅವರು ಪ್ಲಾಸ್ಟಿಕ್‌ಗಳು, ಬಳಸಿದ ಟೈರ್‌ಗಳು, ಕಬ್ಬಿಣ ಮತ್ತು ಹೈಡ್ರೋಕಾರ್ಬನ್‌ಗಳನ್ನು ಇತರ ಬಳಸಿದ ಸರಕುಗಳೊಂದಿಗೆ ಕರಗಿಸುತ್ತಾರೆ. ಹೊಗೆ ವಿರೋಧಿ ಈ ಸಸ್ಯಗಳನ್ನು ಮುಚ್ಚಲಾಯಿತು ಮತ್ತು ಅವುಗಳನ್ನು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಆದಾಗ್ಯೂ, ನಾಲ್ಕು ಪ್ಲಾಂಟ್‌ಗಳು ಇವೆಲ್ಲವನ್ನೂ ಉಲ್ಲಂಘಿಸಿ ಮತ್ತೆ ಕಾರ್ಯ ಆರಂಭಿಸಿವೆ. 

ಆಸ್ಪತ್ರೆಗಳ ನಿರ್ಮಾಣ ಕಾಮಗಾರಿ ಮೇಲಿನ ನಿಷೇಧ ಹಿಂಪಡೆದ ಸುಪ್ರೀಂ ಕೋರ್ಟ್ 

ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಪ್ರಕರಣದ ವಿಚಾರಣೆ ಡಿಸೆಂಬರ್ 3 ರಂದು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಹೀಗಿರುವಾಗ   ಆಸ್ಪತ್ರೆಗಳ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಂದಿನ ವಿಚಾರಣೆ ಡಿಸೆಂಬರ್ 10 ರಂದು ನಡೆಯಲಿದೆ. ವಾಯು ಮಾಲಿನ್ಯವನ್ನು ನಿಯಂತ್ರಿಸಲು ತನ್ನ ನಿರ್ದೇಶನಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಜಾರಿ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಸರ್ಕಾರಕ್ಕೆ 24 ಗಂಟೆ ಟೈಂ ಕೊಟ್ಟಿದ್ದ ಸುಪ್ರೀಂ ಕೋರ್ಟ್

ಗುರುವಾರ ಮಾಲಿನ್ಯ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ‘‘ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಮಾಲಿನ್ಯದ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕಡಿಮೆ ಮಾಡುವಂತಹ ಯಾವುದೇ ಕ್ರಮಗಳನ್ನು ಇನ್ನೂ ಸಹ ಸರ್ಕಾರಗಳು ತೆಗೆದುಕೊಂಡಿಲ್ಲ. ನಾವು ಸಮಯ ಹಾಳು ಮಾಡುತ್ತಿದ್ದೇವೆ ಎನಿಸುತ್ತಿದೆ. ಅಧಿಕಾರಿಗಳಲ್ಲಿ ಸೃಜನಶೀಲತೆಯನ್ನು ನಾವು ತುಂಬಲು ಸಾಧ್ಯವಿಲ್ಲ. ಎಲ್ಲವನ್ನೂ ನಮ್ಮಿಂದಲೇ ಬಯಸಬೇಡಿ. ನೀವು ಏನಾದರೂ ಮಾರ್ಗಗಳನ್ನು ಹುಡುಕಿ ಮುಂದಿನ 24 ಗಂಟೆಗಳಲ್ಲಿ ನಮಗೆ ತಿಳಿಸಿ. ನಿಮಗೆ ಮಾಲಿನ್ಯ ನಿಯಂತ್ರಣ ಸಾಧ್ಯವಾಗದೇ ಹೋದಲ್ಲಿ ನಾವೇ ಅಭೂತಪೂರ್ವವಾದಂಥ ಯಾವುದಾದರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿತು.

ಇದೇ ವೇಳೆ ಮಾಲಿನ್ಯ ಕಡಿತಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆರಂಭಿಸಿರುವ ‘ರೆಡ್‌ ಲೈಟ್‌ ಆನ್‌, ಗಾಡಿ ಆಫ್‌’ ಆಂದೋಲನ ಕೇವಲ ಘೋಷಣೆಯಲ್ಲೇ ಉಳಿದುಕೊಂಡಿದೆ. ಇದರಿಂದ ಯಾವುದೇ ಉಪಯೋಗವಾಗಿಲ್ಲ. ಸರ್ಕಾರ ತನ್ನ ಪ್ರಚಾರಕ್ಕಾಗಿ ಈ ಆಂದೋಲನ ನಡೆಸುತ್ತಿದೆ. ಇದಕ್ಕಾಗಿ ಮಕ್ಕಳು ಘೋಷಣಾ ಪತ್ರಗಳನ್ನು ಹಿಡಿದು ರಸ್ತೆಗಳಲ್ಲಿ ನಿಂತಿದ್ದಾರೆ. ಅವರ ಆರೋಗ್ಯದ ಬಗ್ಗೆ ಗಮನ ಹರಿಸುವವರು ಯಾರು?’ ಎಂದು ಕೋರ್ಟ್‌ ಪ್ರಶ್ನಿಸಿದೆ. ಅಲ್ಲದೆ ವಯಸ್ಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮಕ್ಕಳನ್ನು ಏಕೆ ಶಾಲೆಗೆ ಕಳುಹಿಸಲಾಗುತ್ತಿದೆ. ಮಾಲಿನ್ಯ ಕಡಿಮೆ ಗದೇ ಇದ್ದರೂ ಶಾಲೆಗಳನ್ನು ತೆರೆದಿದ್ದು ಏಕೆ? ಎಂದು ಪ್ರಶ್ನಿಸಿದೆ.

Follow Us:
Download App:
  • android
  • ios