ಪಂಜಾಬ್ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ "ಪ್ರಮುಖ ಭದ್ರತಾ ಲೋಪ" ದ ನಂತರ, ಅವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುನ್ನ ನಡೆದ ಭದ್ರತಾ ಉಲ್ಲಂಘನೆಯು ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರದ ನಡುವೆ ತೀವ್ರ ಮಾತಿನ ಯುದ್ಧವನ್ನು ಉಂಟುಮಾಡಿತ್ತು.
ನವದೆಹಲಿ (ಮಾರ್ಚ್ 21, 2023): ಕಳೆದ ವರ್ಷ ಪಂಜಾಬ್ಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆಯ ಪ್ರಮುಖ ರಾಜಕೀಯ ವಿವಾದದ ಒಂದು ವರ್ಷದ ನಂತರ, ಅಲ್ಲಿನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾಜಿ ಡಿಜಿಪಿ ಎಸ್. ಚಟ್ಟೋಪಾಧ್ಯಾಯ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಮುಖ ತಪ್ಪಿಗಾಗಿ ಶಿಸ್ತು ಕ್ರಮ ಪ್ರಾರಂಭಿಸಲು ಆದೇಶಿಸಿದ್ದಾರೆ. ಜನವರಿ 5, 2022 ರಂದು, ಪಿಎಂ ಮೋದಿ ಅವರು ಪಂಜಾಬ್ನ ಹುಸೇನಿವಾಲಾಗೆ ಪ್ರಯಾಣಿಸುತ್ತಿದ್ದಾಗ ಫಿರೋಜ್ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಸುಮಾರು 15-20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಭದ್ರತೆ ಉಲ್ಲಂಘನೆ ಆಗಿತ್ತು.
ಪಂಜಾಬ್ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ "ಪ್ರಮುಖ ಭದ್ರತಾ ಲೋಪ" ದ ನಂತರ, ಅವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುನ್ನ ನಡೆದ ಭದ್ರತಾ ಉಲ್ಲಂಘನೆಯು ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರದ ನಡುವೆ ತೀವ್ರ ಮಾತಿನ ಯುದ್ಧವನ್ನು ಉಂಟುಮಾಡಿತ್ತು.
ಇದನ್ನು ಓದಿ: ನೆಹರೂ ಕುಟುಂಬ ಕುರಿತ ಹೇಳಿಕೆ: ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಕ್ಕಚ್ಯುತಿ ಅಸ್ತ್ರ
ಪಮಜಾಬ್ ಮಾಜಿ ಡಿಜಿಪಿ ಚಟ್ಟೋಪಾಧ್ಯಾಯ ಈಗಾಗಲೇ ನಿವೃತ್ತರಾಗಿದ್ದು, ಅವರ ಜತೆಗೆ ಫಿರೋಜ್ಪುರ ವ್ಯಾಪ್ತಿಯ ಪೋಲಿಸ್ನ ಅಂದಿನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಇಂದರ್ಬೀರ್ ಸಿಂಗ್ ಮತ್ತು ಹರ್ಮನ್ದೀಪ್ ವಿರುದ್ಧ ಪ್ರಮುಖ ಶಿಸ್ತಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿದುಬಂದಿದೆ. ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ತನಿಖಾ ಸಮಿತಿಯು ಹಲವಾರು ರಾಜ್ಯ ಅಧಿಕಾರಿಗಳನ್ನು ಲೋಪದೋಷಗಳಿಗೆ ದೋಷಾರೋಪಣೆ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸುಪ್ರೀಂಕೋರ್ಟ್ ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಿದಂತೆ ಅವರ ವಿರುದ್ಧ ಶಿಸ್ತು ಕ್ರಮಗಳನ್ನು ಏಕೆ ಪ್ರಾರಂಭಿಸಬಾರದು ಎಂಬುದಕ್ಕೆ ಹಲವಾರು ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಂದ ವಿವರಣೆಯನ್ನು ಪಡೆಯಲು ಭಗವಂತ ಮಾನ್ ನಿರ್ಧರಿಸಿದ್ದಾರೆ. ಈ ಅಧಿಕಾರಿಗಳಲ್ಲಿ ಆಗಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ನರೇಶ್ ಅರೋರಾ, ಆಗಿನ ಎಡಿಜಿಪಿ ಸೈಬರ್ ಕ್ರೈಮ್ ಜಿ ನಾಗೇಶ್ವರ ರಾವ್, ಆಗಿನ ಐಜಿಪಿ ಪಟಿಯಾಲಾ ರೇಂಜ್ ಮುಖ್ವಿಂದರ್ ಸಿಂಗ್ ಛಿನಾ, ಆಗಿನ ಐಜಿ ಕೌಂಟರ್ ಇಂಟೆಲಿಜೆನ್ಸ್ ರಾಕೇಶ್ ಅಗರವಾಲ್ ಮತ್ತು ನೋಡಲ್ ಅಧಿಕಾರಿ ಸುರ್ಜೀತ್ ಸಿಂಗ್, ಆಗಿನ ಡಿಐಜಿ ಫರೀದ್ಕೋಟ್, ಆಗಿನ ಎಸ್ಎಸ್ಪಿ ಮೊಗಾ ಚರಂಜಿತ್ ಸಿಂಗ್ ಸೇರಿದ್ದಾರೆ.
ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ರೇಸ್ನಲ್ಲಿ ಪ್ರಧಾನಿ ಮೋದಿ: ಮೋದಿಯೇ ಪ್ರಮುಖ ಸ್ಪರ್ಧಿ ಎಂದ ಪ್ರಶಸ್ತಿ ಸಮಿತಿ ಉಪ ನಾಯಕ
ಕಳೆದ ವರ್ಷ, ಸುಪ್ರೀಂ ಕೋರ್ಟ್ ಭದ್ರತಾ ಲೋಪವನ್ನು ತನಿಖೆ ಮಾಡಲು ಸಮಿತಿಯನ್ನು ನೇಮಿಸಿತ್ತು. ಈ ವೇಳೆ ಅವರು ಈ ಪ್ರಶ್ನೆಗಳನ್ನು "ಏಕಪಕ್ಷೀಯ ವಿಚಾರಣೆಗಳಿಗೆ" ಬಿಡಲಾಗುವುದಿಲ್ಲ. ಏಕೆಂದರೆ ಅವರಿಗೆ ತನಿಖೆ ಮಾಡಲು "ನ್ಯಾಯಾಂಗವಾಗಿ ತರಬೇತಿ ಪಡೆದ ಸ್ವತಂತ್ರ ಮನಸ್ಸು" ಅಗತ್ಯವಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Adani ಕೇಸ್: ಇ.ಡಿ. ಕಚೇರಿ ಮುತ್ತಿಗೆಗೆ ವಿಪಕ್ಷಗಳ ಯತ್ನ; ತನಿಖೆ ಕೋರಿ ಇ - ಮೇಲ್ನಲ್ಲೇ ದೂರು
