Asianet Suvarna News Asianet Suvarna News

ನೈಟ್‌ ಗಾರ್ಡ್ ಆಗಿದ್ದ ಕಾಸರಗೋಡಿನ ಯುವಕ ಈಗ IIM ಪ್ರೊಫೆಸರ್

ನೋಡಿ ಇದೇ ನನ್ನ ಮನೆ | ಅಸಿಸ್ಟಂಟ್ ಪ್ರೊಫೆಸರ್ ಇದ್ದ ಮನೆ ಇದು | ನೈಟ್‌ ಗಾರ್ಡ್‌ ಆಗಿದ್ದ ಕಾಸರಗೋಡಿನ ಯುವಕ ಈಗ IIM ಪ್ರೊಫೆಸರ್

Night guard to IIM teacher Kerala man Ranjith Ramachandran takes hard road dpl
Author
Bangalore, First Published Apr 11, 2021, 10:13 AM IST

ದೆಹಲಿ(ಎ.11): ಇತ್ತೀಚೆಗೆ IIM ರಾಂಚಿಯ ಪ್ರೊಫೆಸರ್ ಆಗಿ ಆಯ್ಕೆಯಾದ ವ್ಯಕ್ತಿಯೊಬ್ಬರು ಒಂದು ಪೋಸ್ಟ್ ಶೇರ್ ಮಾಡಿದ್ದರು. ಐಐಟಿ ಸೇರಿದಾಗ ಇಂಗ್ಲಿಷ್ ಮಾತನಾಡುವುದಕ್ಕೂ ಬರದ, ತಾನು ಹುಟ್ಟಿ ಬೆಳೆದ ಕಾಸರಗೋಡಿನಿಂದ ಹೊರಗೆ ಎಂದೂ ಹೋಗಿರದ ಯುವಕ ಈಗ ಅಸಿಸ್ಟೆಂಟ್ ಪ್ರೊಫೆಸರ್. ತನ್ನಂತೆ ಕಷ್ಟ ಪಡುತ್ತಿರುವ ಯುವಜನರಿಗೆ ಇದು ಪ್ರೇರಣೆಯಾಗಲಿ ಎಂದು ತಮ್ಮ ಜೀವನದ ಸುಂದರ ಜರ್ನಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನ 28 ವರ್ಷದ ಯುವಕ ರಂಜಿತ್ ರಾಮಚಂದ್ರನ್ ಜೀವನದ ಉದ್ದಕ್ಕೂ ಕಷ್ಟಗಳನ್ನೇ ಹಾಸಿ ಹೊದ್ದು ಬದುಕಿದವರು. ಅವರು ಕಾಸರಗೋಡಿನ ಪಾಣತ್ತೂರಿನಲ್ಲಿರುವ ಪ್ಲಾಸ್ಟಿಕ್ ಹೊದಿಸಿರುವ ತಮ್ಮ ಮನೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್, ನಾನು ನನ್ನ ಬದುಕು ನನ್ನಂತೆ ಕಷ್ಟಪಡುವ ಇತರರಿಗೆ ಪ್ರೇರಣೆಯಾಗಲಿ ಎಂದು ಬಯಸುತ್ತೇನೆ. ನನ್ನ ಯಶಸ್ಸು ಇತರರ ಕನಸುನ್ನು ಅರಳಿಸಬೇಕು. ಪಿಯುಸಿ ನಂತರ ಶಿಕ್ಷಣವನ್ನೇ ಬಿಡಬೇಕೆಂದು ನಿರ್ಧರಿಸಿದ್ದೆ. ಯಾವುದಾದರೂ ಚಿಕ್ಕ ಕೆಲಸ ಮಾಡಿ ಮನೆಗೆ ನೆರವಾಗಬೇಕೆಂದುಕೊಂಡಿದ್ದೆ ಎಂದಿದ್ದಾರೆ.

ಬೆಂಕಿ ಅವಘಡದಲ್ಲಿ ಪಾರಾಗಿ ಪದಕ ಗೆದ್ದ ಮಧ್ಯಪ್ರದೇಶ ಆರ್ಚರ್‌ಗಳು!

ರಂಜಿತ್‌ನ ತಂದೆ ಟೈಲರ್. ತಾಯಿ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ಮೂವರು ಮಕ್ಕಳಿದ್ದು, ರಂಜಿತ್ ಹಿರಿಯವನು. ಸೋರುವ ಮಾಡಿಗೆ ಪ್ಲಾಸ್ಟಿಕ್ ಮುಚ್ಚಿದ ಮನೆಯಲ್ಲಿ ಇವರು ಬದುಕು. ಎಸ್‌ಟಿಗೆ ಸೇರಿದ ಮರಾಟಿ ಸಮುದಾಯಕ್ಕೆ ಸೇರಿದ ಯುವಕನೀತ. 

ಹೈಯರ್ ಸೆಕೆಂಡರಿ ನಂತರ ನಾನು ನನ್ನ ಹೆತ್ತವರನ್ನು ಆರ್ಥಿಕವಾಗಿ ಬೆಂಬಲಿಸಲು ಸಹಾಯ ಮಾಡಲು ಕೆಲಸಕ್ಕಾಗಿ ಹಾತೊರೆಯುತ್ತಿದ್ದೆ. ನನ್ನ ಕಿರಿಯ ಸಹೋದರ ಮತ್ತು ಸಹೋದರಿಯನ್ನು ನಾನು ಬೆಂಬಲಿಸಬೇಕಾಗಿತ್ತು. ಸ್ಥಳೀಯ ಬಿಎಸ್‌ಎನ್‌ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ರಾತ್ರಿ ಕಾವಲುಗಾರನ ಕೆಲಸ ನನಗೆ ತಿಂಗಳಿಗೆ 4,000 ಸಂಬಳ. ನನ್ನ ಹಳ್ಳಿಯ ಬಳಿಯ ರಾಜಪುರಂನ ಪಿಯಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಡಿಗ್ರಿಗೆ ಸೇರಿದೆ. ಹಗಲಿನಲ್ಲಿ ನಾನು ಕಾಲೇಜಿಗೆ ಹೋಗಿದ್ದೆ ಮತ್ತು ಸಂಜೆ ಟೆಲಿಫೋನ್ ವಿನಿಮಯ ಕೇಂದ್ರಕ್ಕೆ ಮರಳಿದೆ, ಅಲ್ಲಿ ನಾನು ಇಡೀ ರಾತ್ರಿ ಕಳೆದಿದ್ದೇನೆ.

ಐದು ವರ್ಷಗಳ ಕಾಲ, ನನ್ನ ಪದವಿ ಮತ್ತು ಸ್ನಾತಕೋತ್ತರ ದಿನಗಳಲ್ಲಿ ನಾನು ದೂರವಾಣಿ ವಿನಿಮಯ ಕೇಂದ್ರದಲ್ಲಿ ವಾಸಿಸುತ್ತಿದ್ದೆ. ಸೆಕ್ಯುರಿಟಿ ಗಾರ್ಡ್ ಆಗಿ,  ನಿರಂತರ ವಿದ್ಯುತ್ ಸರಬರಾಜು ಸಿಗುವುದು ನನ್ನ ಮುಖ್ಯ ಉದ್ದೇಶವಾಗಿತ್ತು ಎನ್ನುತ್ಥಾರೆ ರಂಜಿತ್.

ತಟ್ಟು ಚಪ್ಪಾಳೆ ಪುಟ್ಟ ಮಗುವಿನಂತೆ! ಕ್ಲ್ಯಾಂಪಿಂಗ್ ಥೆರಫಿ ಅಂದ್ರೇನು?

ಹಳ್ಳಿಯಲ್ಲಿ ನನ್ನ ಜೀವನದಲ್ಲಿ ಉನ್ನತ ವ್ಯಾಸಂಗದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಐಐಟಿಗೆ ಇಳಿದಾಗ ನನಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ನಾನು ಕಾಸರಗೋಡಿದಿಂದ ಹೊರಗೆ ಹೋಗಲಿಲ್ಲ. ವಾಸ್ತವವಾಗಿ, ಒಂದು ಸಮಯದಲ್ಲಿ ನಾನು ಪಿಎಚ್‌ಡಿ  ತ್ಯಜಿಸಲು ಬಯಸಿದ್ದೆ ಎಂದು ಒಂದು ವರ್ಷದ ಹಿಂದೆ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ರಂಜಿತ್ ನೆನಪಿಸಿಕೊಂಡಿದ್ದಾರೆ

ಆದರೆ ಐಐಟಿ-ಮದ್ರಾಸ್‌ನ ಪ್ರಾಧ್ಯಾಪಕ ದಂಪತಿಗಳಾದ ಡಾ.ಸುಬಾಶ್ ಶಶಿಧರನ್ ಮತ್ತು ವೈದೇಹಿ ರಂಜಿತ್ ಸಹಾಯಕ್ಕೆ ಬಂದರು ಎಂದು ಅವರು ಹೇಳಿದ್ದಾರೆ. ನನ್ನ ಮಾರ್ಗದರ್ಶಿಯಾಗಿದ್ದ ಪ್ರೊಫೆಸರ್ ಸುಬಾಶ್, ಕೋರ್ಸ್ ತೊರೆಯುವ ನನ್ನ ನಿರ್ಧಾರ ತಪ್ಪು ಎಂದು ನನಗೆ ತಿಳಿಸಿದರು. ಐಐಎಂನಲ್ಲಿ ಅಧ್ಯಾಪಕರಾಗಬೇಕೆಂಬ ಕನಸನ್ನು ದೃಢಪಡಿಸಿದ ಎಂದಿದ್ದಾರೆ.

ಮೂರಡಿಯ ಕುಳ್ಳಿಗೆ ಸಿಕ್ಕಿದವನು ಎಂಥ ಗಂಡ!

ಐಐಟಿ-ಮದ್ರಾಸ್‌ನಲ್ಲಿ, ರಂಜಿತ್ ಅವರು ಸ್ಟೈಫಂಡ್‌ನಿಂದ ಬದುಕಿದರು. ಮನೆಗೆ ಕಳುಹಿಸಲು ಅದರ ಒಂದು ಭಾಗವನ್ನು ಉಳಿಸುತ್ತಿದ್ದರು. ಅಲ್ಲಿ ಸಹೋದರಿ ರಂಜಿತಾ ಮತ್ತು ಸಹೋದರ ರಾಹುಲ್ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ.

Follow Us:
Download App:
  • android
  • ios