ಗಿಫ್ಟ್ ಸಿಕ್ಕಿದ್ದ ಆಟಿಕೆ ಸ್ಫೋಟ: ನವವಿವಾಹಿತನಿಗೆ ಗಾಯ, ಭಗ್ನಪ್ರೇಮಿಯ ಕಿತಾಪತಿ
- ವಧುವಿನ ಹಿರಿಯ ಸೋದರಿಯ ಸ್ನೇಹಿತ ನೀಡಿದ ಗಿಫ್ಟ್
- ಆಟಿಕೆಗೆ ರೀಚಾರ್ಜ್ ಮಾಡುವ ವೇಳೆ ಸ್ಫೋಟ
- ನವ ವಿವಾಹಿತ ಹಾಗೂ ಸೋದರಳಿಯನಿಗೆ ಗಾಯ
ಗುಜರಾತ್: ಮದುವೆಯಲ್ಲಿ ಗಿಫ್ಟ್ ಸಿಕ್ಕಿದ್ದ ಆಟಿಕೆಗೆ ರೀಚಾರ್ಜ್ ಮಾಡುವ ವೇಳೆ ಅದು ಸ್ಫೋಟಗೊಂಡು ನವವಿವಾಹಿತ ಹಾಗೂ ಆತನ ಸೋದರ ಅಳಿಯ ಗಂಭೀರ ಗಾಯಗೊಂಡ ಘಟನೆ ಗುಜರಾತ್ನಲ್ಲಿ ನಡೆದಿದೆ. ಇದನ್ನು ನವ ವಿವಾಹಿತನ ಪತ್ನಿಯ ಹಿರಿಯ ಸಹೋದರಿಯ ಮಾಜಿ ಗೆಳೆಯ ಮದುವೆಯಲ್ಲಿ ನೂತನ ದಂಪತಿಗೆ ಉದ್ದೇಶಪೂರ್ವಕವಾಗಿ ಗಿಫ್ಟ್ ನೀಡಿದ್ದ ಎಂದು ತಿಳಿದುಬಂದಿದೆ. ದಕ್ಷಿಣ ಗುಜರಾತ್ನ (Gujarat) ನವಸಾರಿ (Navsari) ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ (Mindhabari village) ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆಯ ಕುಟುಂಬದ ಸದಸ್ಯರು ವನ್ಸ್ಡಾ ಪೊಲೀಸ್ ಠಾಣೆಯಲ್ಲಿ (Vansda police station) ದೂರು ದಾಖಲಿಸಿದ್ದಾರೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.
ನವಸಾರಿ ಜಿಲ್ಲೆಯ ವಂಸ್ಡಾ ತಾಲೂಕಿನ ಗಂಗಾಪುರ ಗ್ರಾಮದ ಹುಡುಗಿಯನ್ನು ಮಿಂಧಬರಿ ಗ್ರಾಮದ ಲತೇಶ್ ಗವಿತ್ ಎಂಬಾತ ಕೆಲ ದಿನಗಳ ಹಿಂದೆ ಮದುವೆಯಾಗಿದ್ದ. ತಮ್ಮ ಮದುವೆಯಲ್ಲಿ ಎಲ್ಲ ಜೋಡಿಗೂ ಗಿಫ್ಟ್ ಸಿಗುವಂತೆ ಈ ಜೋಡಿಗೂ ಕುಟುಂಬದವರು, ನೆಂಟರು, ಸ್ನೇಹಿತರು ಗಿಫ್ಟ್ ನೀಡಿದ್ದರು. ಮಂಗಳವಾರ ಬೆಳಗ್ಗೆ, ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಅವರು ತಮ್ಮ ನಿವಾಸದಲ್ಲಿ ಇತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಗೊರೆಗಳನ್ನು ಬಿಚ್ಚುತ್ತಿದ್ದಾಗ, ಪಾರ್ಸೆಲ್ ಒಂದರಲ್ಲಿ ರೀಚಾರ್ಜ್ ಮಾಡಬಹುದಾದ ಆಟಿಕೆ ಕಂಡು ಬಂದಿದೆ.
ಮಧ್ಯರಾತ್ರಿ ಪತ್ನಿಯಿಂದ ಪತಿ ಮೇಲೆ ಅಟ್ಯಾಕ್ : ಬ್ಲೇಡ್ ತಂದು ಕುತ್ತಿಗೆ ಕೊಯ್ದ ವೈಫ್
ಉಡುಗೊರೆಯಲ್ಲಿ ಆಟಿಕೆ ಕಂಡು, ಲತೇಶ್ ಮತ್ತು ಜಿಯಾನ್ ಆಟಿಕೆಗೆ ರೀಚಾರ್ಜ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಅದು ಸ್ಫೋಟಗೊಂಡಿದೆ. ಇದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ಲತೇಶ್ ಅವರ ಕೈಗಳು, ತಲೆ ಮತ್ತು ಕಣ್ಣುಗಳಿಗೆ ಗಾಯಗಳಾಗಿದ್ದು, ಅವರ ಬಲಗೈ ಮಣಿಕಟ್ಟು ಕೂಡ ಕತ್ತರಿಸಲ್ಪಟ್ಟಿದೆ ಮತ್ತು ಜಿಯಾನ್ ಅವರ ತಲೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಇಬ್ಬರನ್ನೂ ನವಸಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನವ ವಿವಾಹಿತೆ ಸಾವು, ಲವ್ ಮ್ಯಾರೇಜ್ ಸುಂದರ ಬದುಕಿನ ಕನಸು ಮೂರೇ ತಿಂಗಳಲ್ಲಿ ನುಚ್ಚು ನೂರು
ಈ ಗಿಫ್ಟ್ನ್ನು ಕೊಯಂಬ (Koyamba) ನಿವಾಸಿ ರಾಜು ಪಟೇಲ್ (Raju Patel) ಎಂಬಾತ ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. ವಧುವಿನ ಪೋಷಕರೊಂದಿಗೆ ಮಾತನಾಡಿದ ಬಳಿಕ ಲತೇಶ್ ಅವರ ಕುಟುಂಬ ಸದಸ್ಯರಿಗೆ ಈ ವಿಚಾರ ತಿಳಿದು ಬಂದಿದೆ. ಈತನಿಗೆ ವಧುವಿನ ಅಕ್ಕನ ಜೊತೆ ಅಕ್ರಮ ಸಂಬಂಧವಿತ್ತು. ಕೆಲ ದಿನಗಳ ಹಿಂದೆ ಈ ಸಂಬಂಧ ಮುರಿದು ಬಿದ್ದಿತ್ತು ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ (Visakhapatnam) ಜಿಲ್ಲೆಯಲ್ಲಿ ಮದುವೆಯಾಗಿ ಗಂಡನ ಮನೆ ಸೇರಬೇಕಾದ ವಧುವೊಬ್ಬಳು ಮಂಟಪದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಆಘಾತಕಾರಿ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ವಧು ಮುಹೂರ್ತದ ಸಮಯಕ್ಕೆ ಸರಿಯಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಸೃಜನಾ ಮೃತಪಟ್ಟ ವಧು. ವರದಿಗಳ ಪ್ರಕಾರ ವಧು ಸೃಜನಾ (Srujana) ಅವರಿಗೆ ನಾಗೋತಿ ಶಿವಾಜಿ (Nagothi Sivaji) ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಉಪನಗರದ ಮಧುರವಾಡದಲ್ಲಿ ಇವರ ವಿವಾಹ ನಡೆಯಬೇಕಿತ್ತು. ಮದುವೆಯ ಸಂಪ್ರದಾಯದ ಭಾಗವಾಗಿ ವಧು ವರರ ತಲೆಗೆ ಬೆಲ್ಲ ಮತ್ತು ಜೀರಿಗೆ ಪೇಸ್ಟ್ನ್ನು ಬಂಧುಗಳು ಹಾಕಿದರು ಇನ್ನೇನು ತಾಳಿ ಕಟ್ಟುವುದೊಂದು ಬಾಕಿ ಉಳಿದಿತ್ತು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹುಡುಗಿ ಕುಸಿದು ಬಿದ್ದಿದ್ದಳು.