ಮುಷ್ಕರ ಮಾಡೋದು ಕಾನೂನಿಗೆ ವಿರುದ್ಧ ಎಂದ ಕೋರ್ಟ್ 3,000 ವೈದ್ಯರ ಸಮೂಹಿಕ ರಾಜೀನಾಮೆ

ಭೋಪಾಲ್(ಜೂ.04): ರಾಜ್ಯದಲ್ಲಿ ಮುಷ್ಕರ ಮಾಡುತ್ತಿರುವ ಕಿರಿಯ ವೈದ್ಯರಿಗೆ 24 ಗಂಟೆಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿದೆ. ಆದರೆ ಪ್ರತಿಭಟನಾ ವೈದ್ಯರು ಇದನ್ನು ಧಿಕ್ಕರಿಸಿದ್ದು, ಅವರಲ್ಲಿ ಸುಮಾರು 3,000 ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ತೀರ್ಪನ್ನು ಪ್ರಶ್ನಿಸುವುದಾಗಿ ಘೋಷಿಸಿದ್ದಾರೆ. ನ್ಯಾಯಾಲಯವು ನಾಲ್ಕು ದಿನಗಳ ಮುಷ್ಕರವನ್ನು ಕಾನೂನುಬಾಹಿರ ಎಂದು ಹೇಳಿದೆ.

Add Asianetnews Kannada as a Preferred SourcegooglePreferred

ರಾಜ್ಯದ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 3 ಸಾವಿರ ಕಿರಿಯ ವೈದ್ಯರು ಗುರುವಾರ ತಮ್ಮ ಹುದ್ದೆಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ತಮ್ಮ ರಾಜೀನಾಮೆಗಳನ್ನು ಆಯಾ ಕಾಲೇಜುಗಳ ಡೀನ್‌ಗೆ ಸಲ್ಲಿಸಿದ್ದಾರೆ ಎಂದು ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘ (ಎಂಪಿಜೆಡಿಎ) ಅಧ್ಯಕ್ಷ ಡಾ.ಅರವಿಂದ ಮೀನಾ ತಿಳಿಸಿದ್ದಾರೆ. ಸೋಮವಾರ ಪ್ರಾರಂಭವಾದ ಮುಷ್ಕರ, ಅವರ ಬೇಡಿಕೆಗಳು ಈಡೇರುವವರೆಗೂ ಮುಂದುವರಿಯಲಿದೆ ಎಂದಿದ್ದಾರೆ.

ಬಿಜೆಪಿಯಿಂದ ಮತ್ತೆ ಮೂಲಪಕ್ಷಕ್ಕೆ ಘರ್‌ವಾಪಸಿ : ಮೋದಿ ದೂರವಾಣಿ ಕರೆ...

ಕಿರಿಯ ವೈದ್ಯರು ರಾಜ್ಯ ಸರ್ಕಾರದ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಸ್ಟೈಫಂಡ್ ಹೆಚ್ಚಳ ಮತ್ತು ಅವರಿಗೆ ಮತ್ತು ಅವರ ಕುಟುಂಬಗಳಿಗೆ ಮಾರಣಾಂತಿಕ ಕೊರೊನಾವೈರಸ್ ಸೋಂಕು ತಗುಲಿದರೆ ಅವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಕೇಳಲಾಗಿದೆ.

ಮೂರನೇ ವರ್ಷದ ಪಿಜಿಗೆ ರಾಜ್ಯ ಸರ್ಕಾರ ಈಗಾಗಲೇ ತಮ್ಮ ದಾಖಲಾತಿಯನ್ನು ರದ್ದುಗೊಳಿಸಲಾಗಿದ್ದು ಆದ್ದರಿಂದ ಅವರು ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಶ್ರೀ ಮೀನಾ ಹೇಳಿದ್ದಾರೆ. ಹೈಕೋರ್ಟ್ ತೀರ್ಪಿನ ವಿರುದ್ಧ ಎಂಪಿಜೆಡಿಎ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದಿದ್ದಾರೆ.

ವೈದ್ಯಕೀಯ ಅಧಿಕಾರಿಗಳ ಸಂಘ ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ವೈದ್ಯರ ಸಂಘದ ಸದಸ್ಯರು ಸಹ ತಮ್ಮ ಪ್ರತಿಭಟನೆಗೆ ಸೇರುತ್ತಾರೆ ಎಂದು ಮೀನಾ ಹೇಳಿದ್ದಾರೆ. ರಾಜಸ್ಥಾನ, ಬಿಹಾರ, ಛತ್ತೀಸ್‌ಗಡ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ ಮತ್ತು ಏಮ್ಸ್ ರಿಷಿಕೇಶ್‌ನ ಕಿರಿಯ ಮತ್ತು ಹಿರಿಯ ವೈದ್ಯರು ತಮ್ಮ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

'ದೇಶದಲ್ಲೇ ಬೆಂಗ್ಳೂರಿನ ಜನರಿಗೆ ಅತಿ ಹೆಚ್ಚು ಲಸಿಕೆ'

ಮೀನಾ ಮೇ 6 ರಂದು ಬೇಡಿಕೆ ಹೇಳಿಕೊಂಡರು. ಸರ್ಕಾರಿ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಆದರೆ ಅದರ ನಂತರ ಏನೂ ಆಗಲಿಲ್ಲ ಎನ್ನಲಾಗಿದೆ.

ತಮ್ಮ ಸ್ಟೈಫಂಡ್ ಅನ್ನು ಶೇಕಡಾ 17 ರಷ್ಟು ಹೆಚ್ಚಿಸುವ ಸರ್ಕಾರಗಳ ನಿರ್ಧಾರ ಮತ್ತು ಸಂಬಂಧಿತ ಆದೇಶಗಳನ್ನು ಜಾರಿಗೊಳಿಸಿದ ನಂತರ ವೈದ್ಯರು ಮತ್ತೆ ಕರ್ತವ್ಯವನ್ನು ಪ್ರಾರಂಭಿಸುತ್ತಾರೆಯೇ ಎಂಬುದಕ್ಕೆ ಇಲ್ಲ ಎಂದಿದ್ದಾರೆ ವೈದ್ಯರು. ಸ್ಟೈಫಂಡ್ ಅನ್ನು ಶೇಕಡಾ 24 ರಷ್ಟು ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಮತ್ತು ಅವರು ಅದನ್ನು ಆ ಮಿತಿಗೆ ಏರಿಸುವವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.