Asianet Suvarna News Asianet Suvarna News

ಒವೈಸಿ ವಿರುದ್ಧ ಕಣಕ್ಕಿಳಿದಿರುವ ಮಾಧವಿ ಲತಾ ಹಾಡಿ ಹೊಗಳಿದ ಮೋದಿ: ಅಪ್ ಕಾ ಅದಾಲತ್ ವೀಕ್ಷಿಸುವಂತೆ ಮೋದಿ ಮನವಿ

ತೆಲಂಗಾಣದ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಮುಸ್ಲಿಂ ಮುಖಂಡ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧವಿ ಲತಾ ಅವರ ಸಂದರ್ಶನವೊಂದನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದ್ದು, ಎಲ್ಲರೂ ಈ ಅದ್ಭುತವಾದ ಸಂದರ್ಶನವನ್ನು ವೀಕ್ಷಿಸುವಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಕರೆ ನೀಡಿದ್ದಾರೆ. 

Modi praises Madhavi Lata who is compiting against Owaisi in Hyderabad: Modi appeals to watch Up Ki Adalat akb
Author
First Published Apr 7, 2024, 1:20 PM IST

ಹೈದರಾಬಾದ್‌: ತೆಲಂಗಾಣದ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಮುಸ್ಲಿಂ ಮುಖಂಡ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧವಿ ಲತಾ ಅವರ ಸಂದರ್ಶನವೊಂದನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದ್ದು, ಎಲ್ಲರೂ ಈ ಅದ್ಭುತವಾದ ಸಂದರ್ಶನವನ್ನು ವೀಕ್ಷಿಸುವಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಕರೆ ನೀಡಿದ್ದಾರೆ. ಸ್ವತಃ ಪ್ರಧಾನಿ ಮೋದಿಯವರೇ ಹೀಗೆ ಹೇಳಿರುವುದರಿಂದ ಪ್ರಸ್ತುತ ಬಿಜೆಪಿ ಅಭ್ಯರ್ಥಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಹಾಗಿದ್ರೆ ಮುಸ್ಲಿಂ ಪ್ರಾಬಲ್ಯವಿರುವ ಹೈದರಾಬಾದ್‌ನಲ್ಲಿ  ಹಾಲಿ ಸಂಸದರಾಗಿರುವ ಅಸಾದುದ್ದೀನ್ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಈ ಫೈರ್ ಬ್ರಾಂಡ್ ಮಾಧವಿ ಲತಾ ಯಾರು ಇಲ್ಲಿದೆ ಡಿಟೇಲ್..

ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಪ್ರಚಾರದ ಭರಾಟೆಯ ಮಧ್ಯೆಯೂ ಬಿಡುವು ಮಾಡಿಕೊಂಡು ಟ್ವಿಟ್ಟರ್‌ನಲ್ಲಿ ಹೈದರಾಬಾದ್‌ನಿಂದ  ಲೋಕಸಭೆ ಚುನಾವಣೆಗೆ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಚೊಚ್ಚಲ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು ಹಾಡಿ ಹೊಗಳಿದ್ದಾರೆ.  'ಮಾಧವಿ ಲತಾ ಜೀ, ನಿಮ್ಮ 'ಆಪ್ ಕಿ ಅದಾಲತ್' ಎಪಿಸೋಡ್ ಅದ್ಭುತವಾಗಿತ್ತು. ನೀವು ತುಂಬಾ ಸಧೃಡವಾಡ ಅಂಶಗಳನ್ನು ಉಲ್ಲೇಖಿಸಿದ್ದೀರಿ ಜೊತೆಗೆ ನಿಮ್ಮ ವಾದ ತರ್ಕಬದ್ಧವಾಗಿತ್ತು ಉತ್ಸಾಹದಿಂದ ಕೂಡಿತ್ತು. ನಿಮಗೆ ನನ್ನ ಶುಭಾಶಯಗಳು' ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ವೀಕ್ಷಿಸುವಂತೆ  ಪ್ರಧಾನಿ ಟ್ವಿಟ್ಟರ್‌ನಲ್ಲಿ ಒತ್ತಾಯಿಸಿದ್ದಾರೆ.

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಬಿಜೆಪಿ ಕಣಕ್ಕಿಳಿಸಿದೆ ಬೆಂಕಿ ಚೆಂಡು, ಯಾರಿವರು ಮಾಧವಿ ಲತಾ ಕೊಂಪೆಲ್ಲಾ?

ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವಿ ಅವರು, 'ಮೋದಿ ಜೀ, ಸತ್ಯವನ್ನು ನಿರ್ಭೀತಿಯಿಂದ ಮಾತನಾಡುವ ಧೈರ್ಯ ನಿಮ್ಮಿಂದ ಮಾತ್ರ ನನಗೆ ಸಿಕ್ಕಿತು ಮತ್ತು ನಮ್ಮ ಪಕ್ಷದ ಧ್ಯೇಯವಾದ  ಸಬ್ ಕಾ ಸಾಥ್ ಸಭ್ ಕಾ ವಿಕಾಸ್ ( SabkaSathSabkaVikas)ನನ್ನ ಸ್ಫೂರ್ತಿಯಾಗಿದೆ. ರಾಷ್ಟ್ರವು ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ನಾವು ಪ್ರಗತಿ ಹೊಂದುತ್ತೇವೆ ಎಂದು ಕೊನೆಯ ಉಸಿರು ಇರುವವರೆಗೂ ನೀವು ತೋರಿಸಿದ ಮಾರ್ಗವನ್ನು ನಾವು ಅನುಸರಿಸುತ್ತೇವೆ ಎಂದು ಮಾಧವಿ ಲತಾ ಹೇಳಿದ್ದಾರೆ. 

ಇನ್ನು ಇಂಡಿಯಾ ಟಿವಿಯಲ್ಲಿ ಪ್ರಸಾರವಾಗಿರುವ ಆಫ್ ಕಿ ಅದಾಲತ್‌ ಶೋದಲ್ಲಿ ಮಾಧವಿ ಲತಾ ಮಾತನಾಡಿದ್ದು, ತನ್ನ ಪ್ರತಿಸ್ಪರ್ಧಿ ಎಐಎಂಐಎಂನಿಂದ ಕಣಕ್ಕಿಳಿದಿರುವ ಹಾಲಿ ಸಂಸದ  ಓವೈಸಿ ಈ ಬಾರಿಯ ಚುನಾವಣೆಯಲ್ಲಿ 1 ಲಕ್ಷದ 50,000 ಮತಗಳ ಅಂತರದಿಂದ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಓವೈಸಿ 6 ಲಕ್ಷ ಬೋಗಸ್ ಮತಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ ಮಾಧವಿ ಲತಾ, ನಮ್ಮಲ್ಲಿ ಬೋಗಸ್ ಮತಗಳಿದ್ದರೆ 4 ಸಾವಿರ ವರ್ಷಗಳವರೆಗೆ ನಿರಂತರವಾಗಿ ಗೆಲ್ಲಬಹುದು. ಆದರೆ ಏನು ಮಾಡುವುದು? ನಮ್ಮ ಬಳಿ ಬೋಗಸ್ ಮತಗಳಿಲ್ಲ. ಓವೈಸಿ ಬಳಿ 6,20,000 ಬೋಗಸ್ ಮತಗಳಿವೆ. ನೀವು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಒಂದು ಇಪಿಕ್‌ (EPIC) ಸಂಖ್ಯೆಯನ್ನು ಟೈಪ್ ಮಾಡಿದರೆ, ನೀವು ಒಂದೇ ವೋಟರ್ ಐಡಿಯನ್ನು ಎರಡು ಸ್ಥಳಗಳಲ್ಲಿ ಕಾಣಬಹುದು. ಕೇವಲ ಹೈದರಾಬಾದ್‌ನ ಚಾರ್‌ಮಿನಾರ್ ಪ್ರದೇಶವೊಂದರಲ್ಲಿಯೇ ಅವರು 1,60,000 ನಕಲಿ ಮತಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. 

ಭಾಗ್ಯನಗರಿ ಮುತ್ತಿನ ನಗರಿ ಎಂದೆಲ್ಲಾ ಹೆಸರಾಗಿರುವ ಹೈದರಾಬಾದ್ ಹೈಟೆಕ್ ಸಿಟಿ ಎಂದೂ ಹೆಸರುವಾಸಿಯಾಗಿದ್ದರೂ ಹೈದರಾಬಾದ್ ಲೋಕಸಭಾ ಕ್ಷೇತ್ರದ ಸ್ಥಿತಿ ಮಾತ್ರ ಸುಧಾರಿಸಿಲ್ಲ ಎಂದ ಅವರು ಇಲ್ಲಿ ಇತ್ತೀಚೆಗಷ್ಟೇ ಮುಸ್ಲಿಂ ಹುಡುಗಿಯನ್ನು 70 ವರ್ಷದ ಅರಬ್ ವ್ಯಕ್ತಿಗೆ ಮಾರಾಟ ಮಾಡಿದ ಘಟನೆಯನ್ನು ನೆನಪಿಸಿಕೊಂಡರು. 

ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದ ಅಸಾದುದ್ದೀನ್ ಒವೈಸಿ, ಸ್ಫೋಟ ಖಂಡಿಸಿದ ನಾಯಕ!

ಭಾರತದಲ್ಲಿ ನಾಸ್ಕಾಮ್ ನಡೆಸಿದ ಸಮೀಕ್ಷೆಯಲ್ಲಿ,  ಕಳೆದ ವರ್ಷದಲ್ಲಿ 3 ಲಕ್ಷ ಐಟಿ ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು  ಹೈದರಾಬಾದ್‌ನಲ್ಲಿವೆ ಎಂದು ತಿಳಿದು ಬಂದಿದೆ. ಆದರೆ ಹೈದರಾಬಾದ್ ಲೋಕಸಭಾ ಕ್ಷೇತ್ರದ 2 ರಿಂದ 3%  ದಷ್ಟು ಜನರೂ ಸಹ ಆ ಉದ್ಯೋಗಗಳನ್ನು ಪಡೆಕೊಂಡಿಲ್ಲ. ಮತ್ತು ಯಾರಾದರೂ ಈ ಕ್ಷೇತ್ರದ ಜನ ಒಳ್ಳೆಯ ಕೆಲಸ ಸಿಗುತ್ತದೆ ಎಂದಾದರೆ ಅವರು ಆ ಪ್ರದೇಶವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಾರೆ ಅವರು ಇಲ್ಲಿ ಉಳಿಯಲು ಬಯಸುವುದಿಲ್ಲ ಎಂದು ಮಾಧವಿ ಲತಾ ಹೇಳಿದ್ದಾರೆ.

ಇನ್ನು ಒವೈಸಿ ವಿರುದ್ಧ ತಮ್ಮ ಉಮೇದುದಾರಿಕೆ ಬಗ್ಗೆ ಮಾತನಾಡಿದ ಅವರು ತನಗೆ ನ್ಯೂಸ್ ಚಾನೆಲ್‌ನಿಂದ ತಾನು ಅಭ್ಯರ್ಥಿಯಾಗಿರುವ ವಿಚಾರ ತಿಳಿದು ಬಂತು. ಟಿಕೆಟ್ ಸಿಕ್ಕ ಬಳಿಕ ಮೋದಿಜಿಯವರನ್ನು ಭೇಟಿಯಾಗಲು ಅವಕಾಶ ಸಿಗುತ್ತಿರುವುದು ನನ್ನ ಅದೃಷ್ಟ, ಅವರು ಈ ಯುಗದ ಮಹಾಯೋಗಿ. ನನ್ನನ್ನು ಭೇಟಿಯಾಗದೆ ಅಥವಾ ನನಗೆ ಗೊತ್ತಿಲ್ಲದೆ, ಅವರು ನನ್ನ ಸಾಮಾಜಿಕ ಕೆಲಸದ ಆಧಾರದ ಮೇಲೆ ಮಾತ್ರ ನನ್ನನ್ನು ಆಯ್ಕೆ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ನಾನು ಸಮಾಜ ಸುಧಾರಣೆಯ ಕೆಲಸದಲ್ಲಿ ತೊಡಗಿದ್ದೇನೆ ಮುಂದಿನ 8 ರಿಂದ 10 ತಿಂಗಳುಗಳಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ 1,009 ಸಾಮಾನ್ಯ ಹೆರಿಗೆಗಳನ್ನು ಉಚಿತವಾಗಿ ಖಾತ್ರಿಪಡಿಸುವ ಭರವಸೆ ನೀಡಿದ್ದೇನೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. 

ಮೋದಿ ಬಗ್ಗೆ ನಾನು ಹೆಚ್ಚೇನು ಹೇಳಲು ಸಾಧ್ಯ? ದೆಹಲಿಯಲ್ಲಿ ಕುಳಿತುಕೊಂಡು ನನಗೆ ತಿಳಿಯದೇ ಅವರು ನಾನು ಒವೈಸಿಗೆ ಸ್ಪರ್ಧೆ ನೀಡಬಹುದು ಎಂದು ಭಾವಿಸಿ ಅವರು ನನಗೆ ಟಿಕೆಟ್ ನೀಡಿದರು. ಇದಕ್ಕಿಂತ ಪಾರದರ್ಶಕ ರಾಜಕಾರಣ ಇನ್ನೇನಿದೆ ಎಂದು ಅವರು ಹೇಳಿದ್ದಾರೆ.  ಅಂದಹಾಗೆ ಈ ಮಾಧವಿ ಲತಾ ಅವರು ಹೈದರಾಬಾದ್‌ನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ವಿರಿಂಚಿ ಹಾಸ್ಪಿಟಲ್ಸ್‌ನ ಚೇರ್ಮನ್‌,  ತಮ್ಮ ಮಕ್ಕಳನ್ನು ಮಕ್ಕಳನ್ನು ಶಾಲೆಗೆ ಕಳಿಸದೆಯೇ ಅವರನ್ನು ಐಐಟಿಯನ್‌ಗೆ ಸಿದ್ಧಪಡಿಸಿದ ಮಹಾ ಸರಸ್ವತಿ. ಮಾಧವಿ ಲತಾ ಅವರಿಗೆ ಮೂರು ಜನ ಮಕ್ಕಳು, ಈ ಮೂರೂ ಮಕ್ಕಳನ್ನು ಅವರು ಶಾಲೆಗೆ ಕಳಿಸಿಲ್ಲ. ಎಲ್ಲರಿಗೂ ಮಾಡಿಸಿದ್ದು ಹೋಮ್‌ ಸ್ಕೂಲಿಂಗ್‌. ಅಂದರೆ ಮನೆಯಲ್ಲಿಯೇ ಕಲಿಕೆ. ಈ ಪೈಕಿ ಇಬ್ಬರು ಮಕ್ಕಳು ಇಂದು ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮೂರನೇ ಮಗು 11ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದೆ.

ಹಳೇ ಹೈದರಾಬಾದ್‌ನಲ್ಲಿ ಎಲ್ಲಾ ಹಿಂದುಗಳನ್ನು ಹಿಂದುತ್ವದ ಬಂಧದಲ್ಲಿ ಒಟ್ಟುಗೂಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವುದಾಗಿ ಮಾಧವಿ ಲತಾ ಹೇಳಿರುವ ವಿಡಿಯೋ, ಲೋಕಸಭಾ ಟಿಕೆಟ್‌ ದೊರೆತ ಸಂದರ್ಭದಲ್ಲಿ ವೈರಲ್‌ ಆಗುತ್ತಿದೆ. ಹೈದರಾಬಾದ್‌ನಲ್ಲಿ ಎಲ್ಲಾ ಹಿಂದೂಗಳಲ್ಲಿ ಐಕ್ಯತೆಯನ್ನು ಬೆಳೆಸುವುದು ನನ್ನ ಕನಸು ಎಂದಿದ್ದು, ಆ ಮೂಲಕ ಓವೈಸಿ ಅಬ್ಬರವನ್ನು ಕಟ್ಟಿ ಹಾಕುವ ಇರಾದೆ ಹೊಂದಿದ್ದಾರೆ ಮಾಧವಿ.

Follow Us:
Download App:
  • android
  • ios