ಖಾಸಗಿ ಭಾಗಕ್ಕೆ ಏರ್ ಕಂಪ್ರೆಸರ್ ತುರುಕಿದ ಫ್ರೆಂಡ್ಸ್, ಕರುಳು ಸ್ಫೋಟ
- ಸೀರಿಯಸ್ ಆಗಿರೋ ತಮಾಷೆ ಕೈ ಮೀರಿ ಹೋಯ್ತು
- ಖಾಸಗಿ ಭಾಗಕ್ಕೆ ಏರ್ ಕಂಪ್ರೆಸರ್ ತುರುಕಿದ ಗೆಳೆಯರು
- ಕರುಳಿಗೇ ಕಂಟಕವಾಯ್ತು ಫನ್ ಗೇಮ್
ಗಾಜಿಯಾಬಾದ್(ಜು.03): ದೆಹಲಿ ಸಮೀಪದ ಗಾಜಿಯಾಬಾದ್ನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ, 28 ವರ್ಷದ ವ್ಯಕ್ತಿಯ ಇಬ್ಬರು ಸ್ನೇಹಿತರು ಏರ್ ಕಂಪ್ರೆಸರ್ ಅನ್ನು ಆತನ ಹಿಂಭಾಗಕ್ಕೆ ಸರಿಸಿ ಒತ್ತಡ ಹಾಕಿದ್ದರ ಪರಿಣಾಮ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ನಂತರ, ಸಂದೀಪ್ ಕುಮಾರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಪಕ್ಕದ ನೋಯ್ಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವ್ಯಕ್ತಿಯ ಗುದನಾಳದ ಮತ್ತು ಸಣ್ಣ ಕರುಳಿನ ಒಂದು ಭಾಗ ಸ್ಫೋಟಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂಗಾತಿಯೊಂದಿಗಿನ ಸರಸದಲ್ಲಿದ್ದಾಗಲೇ ಲಂಬವಾಗಿ ಮುರಿದ ಶಿಶ್ನ!
ಮಂಗಳವಾರ ಸಂಜೆ ಕುಮಾರ್ ಅವರ ಕೆಲಸದ ಸ್ಥಳದಲ್ಲಿ ಈ ಘಟನೆ ನಡೆದಿದೆ. ಅಂಕಿತ್ ಮತ್ತು ಗೌತಮ್ ಎಂದು ಗುರುತಿಸಲಾದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಾಜಿಯಾಬಾದ್ನ ವಿಜಯ್ ನಗರ ನಿವಾಸಿ ಅಂಕಿತ್, ಇಟಾ ಜಿಲ್ಲೆಯವರಾಗಿದ್ದರೆ. ನೋಯ್ಡಾ ಸೆಕ್ಟರ್ 62 ನಿವಾಸಿ ಗೌತಮ್ ಬುಲಂದ್ಶಹರ್ ಮೂಲದವರು. ನೋಯ್ಡಾದ ಸೆಕ್ಟರ್ 63 ರ ಹೆಚ್ ಬ್ಲಾಕ್ನಲ್ಲಿರುವ ಲಘು ಉತ್ಪಾದನಾ ಘಟಕದಲ್ಲಿ ಸಂತ್ರಸ್ತ ಮತ್ತು ಇಬ್ಬರು ಆರೋಪಿಗಳು ಒಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯರ ಪ್ರಕಾರ ಇದು ಅಸಾಮಾನ್ಯ ಪ್ರಕರಣವಾಗಿದ್ದು, ಸಂದೀಪ್ ಗಂಭೀರ ಸ್ಥಿತಿಯಲ್ಲಿದ್ದಾರೆ. ರೋಗಿಯನ್ನು ಕರೆತಂದಾಗ, ಅವನ ಹೊಟ್ಟೆ ಉಬ್ಬಿಕೊಂಡಿತ್ತು ಮತ್ತು ಅವನ ಸಣ್ಣ ಕರುಳು ಮತ್ತು ಗುದನಾಳದ ಒಂದು ಭಾಗ ಸಿಡಿಯಿತು ಎಂದು ಆಸ್ಪತ್ರೆಯ ಹಿರಿಯ ನಿವಾಸಿ ವೈದ್ಯ ಅರುಣಾ ರೆಡ್ಡಿ ಹೇಳಿದ್ದಾರೆ.
ಅವನ ಹೊಟ್ಟೆಗೆ ಪೈಪ್ ಜೋಡಿಸಲಾಗಿದ್ದು, ಅದು ಈಗ ಮಲವಿಸರ್ಜನೆ ಭಾಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಅವರು ಸಮಯಕ್ಕೆ ಆಸ್ಪತ್ರೆಗೆ ತಲುಪದಿದ್ದರೆ ಪರಿಸ್ಥಿತಿ ಇನ್ನೂ ಕಷ್ಟವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
"ಚೇತರಿಸಿಕೊಳ್ಳಲು ಆರು ತಿಂಗಳುಗಳು ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ, ಅವರ ಹೊಟ್ಟೆಗೆ ಮೂತ್ರದ ಚೀಲವನ್ನು ಜೋಡಿಸಲಾಗುತ್ತದೆ. ಅವರು ಏನನ್ನೂ ತಿನ್ನಲು ಸಾಧ್ಯವಿಲ್ಲ" ಎಂದು ಡಾ ರೆಡ್ಡಿ ಹೇಳಿದ್ದಾರೆ.