Asianet Suvarna News Asianet Suvarna News

ಮಹಾತ್ಮಾ ಗಾಂಧಿ ಮಹಾ ಪುರುಷ ಆದ್ರೆ ಪ್ರಧಾನಿ ಮೋದಿ ಯುಗ ಪುರುಷ: ಉಪರಾಷ್ಟ್ರಪತಿ ಜಗದೀಪ್‌ ಧನಕರ್

ಮಹಾತ್ಮ ಗಾಂಧಿ ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಇನ್ನು, ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕರೆದೊಯ್ದಿದ್ದಾರೆ ಎಂದು ಜಗದೀಪ್‌ ಧನಕರ್‌ ಹೇಳಿದ್ದಾರೆ. 

mahatma gandhi mahapurush pm modi yugpurush vice president jagdeep dhankhar ash
Author
First Published Nov 28, 2023, 12:26 PM IST

ಮುಂಬೈ (ನವೆಂಬರ್ 28, 2023): ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ಮೋದಿಯನ್ನು ಮಹಾತ್ಮ ಗಾಂಧೀಜಿ ಜತೆಗೆ ಹೋಲಿಸಿದ್ದಾರೆ. ಮಹಾತ್ಮಾ ಗಾಂಧಿ ಅವರನ್ನು ಕಳೆದ ಶತಮಾನದ ‘ಮಹಾಪುರುಷ’ ಎಂದು ಬಣ್ಣಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ರನ್ನು ಈ ಶತಮಾನದ ‘ಯುಗಪುರುಷ’ ಎಂದು ಬಣ್ಣಿಸಿದ್ದಾರೆ.

ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಜನ್ಮ ದಿನಾಚರಣೆಯಲ್ಲಿ ಮಾತಾಡಿದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಮಹಾತ್ಮ ಗಾಂಧಿ ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಇನ್ನು, ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕರೆದೊಯ್ದಿದ್ದಾರೆ ಎಂದು ಜಗದೀಪ್‌ ಧನಕರ್‌ ಹೇಳಿದರು.

 ರಕ್ಷಣಾ ವಲಯದಲ್ಲಿ ಭಾರತದ ಮಹತ್ತರ ಸಾಧನೆ: ಮೇಕ್ ಇನ್ ಇಂಡಿಯಾಗೆ ಮೆಗಾ ಸಕ್ಸಸ್..!

ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಕಳೆದ ಶತಮಾನದ ಮಹಾಪುರುಷ ಮಹಾತ್ಮಾ ಗಾಂಧಿ. ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಈ ಇಬ್ಬರು ಮಹಾನ್ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಒಂದು ವಿಷಯ ಸಾಮಾನ್ಯವಾಗಿದೆ. ಇಬ್ಬರೂ ಶ್ರೀಮದ್ ರಾಜ್‌ಚಂದ್ರಜಿ ಅವರನ್ನು ಗೌರವದಿಂದ ಪ್ರತಿಬಿಂಬಿಸಿದ್ದಾರೆ ಎಂದು ಜಗದೀಪ್‌ ಧನಕರ್‌ ಹೇಳಿದರು. 

1867 ರಲ್ಲಿ ಗುಜರಾತ್‌ನಲ್ಲಿ ಜನಿಸಿದ ಮತ್ತು 1901 ರಲ್ಲಿ ನಿಧನರಾದ ಶ್ರೀಮದ್ ರಾಜ್‌ಚಂದ್ರಜಿ ಅವರ ಭಿತ್ತಿಚಿತ್ರವನ್ನು ಉಪರಾಷ್ಟ್ರಪತಿ ಅನಾವರಣಗೊಳಿಸಿದರು. ಅವರು ಜೈನ ಧರ್ಮದ ಬೋಧನೆಗಳು ಮತ್ತು ಮಹಾತ್ಮ ಗಾಂಧಿಯವರಿಗೆ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: 9 ವರ್ಷದ ವಿದ್ಯಾರ್ಥಿಗೆ ಕಂಪಾಸ್‌ನಿಂದ ಹಲ್ಲೆ ನಡೆಸಿದ ಸಹಪಾಠಿಗಳು: ಪೋಷಕರು ದೂರು ನೀಡಿದ್ರೂ ಕ್ಯಾರೆ ಎನ್ನದ ಶಾಲೆ!

ಇನ್ನೊಂದೆಡೆ, ಈ ರಾಷ್ಟ್ರದ ಬೆಳವಣಿಗೆಯನ್ನು ವಿರೋಧಿಸುವ ಶಕ್ತಿಗಳು, ಈ ದೇಶದ ಬೆಳವಣಿಗೆಯನ್ನು ಅರಗಿಸಿಕೊಳ್ಳದ ಶಕ್ತಿಗಳು ಒಂದಾಗುತ್ತಿವೆ. ದೇಶದಲ್ಲಿ ಏನಾದರೂ ಒಳ್ಳೆಯ ಘಟನೆಗಳು ನಡೆದಾಗ, ಅವರು ವಿಭಿನ್ನ ಕ್ರಮಕ್ಕೆ ಬರುತ್ತಾರೆ. ಇದು ಸಂಭವಿಸಬಾರದು ಎಂದೂ ಜಗದೀಪ್‌ ಧನಕರ್‌ ಹೇಳಿದ್ದಾರೆ. ಅಪಾಯ ತುಂಬಾ ದೊಡ್ಡದು. ನೀವು (ನಮ್ಮ) ಸುತ್ತಲೂ ನೋಡುವ ದೇಶಗಳು, ಅವರ ಇತಿಹಾಸಗಳು 300 ಅಥವಾ 500 ಅಥವಾ 700 ವರ್ಷಗಳಷ್ಟು ಹಳೆಯವು, (ಆದರೆ) ನಮ್ಮ ಇತಿಹಾಸವು 5,000 ವರ್ಷಗಳಷ್ಟು ಹಳೆಯದು ಎಂದೂ ಅವರು ಹೇಳಿದರು.

ಶ್ರೀಮದ್ ರಾಜಚಂದ್ರಜಿ ಮತ್ತು ಮಹಾತ್ಮ ಗಾಂಧಿಯವರು 1891 ರಲ್ಲಿ ಮುಂಬೈನಲ್ಲಿ ಮೊದಲ ಬಾರಿಗೆ ಭೇಟಿಯಾದರು. ನಂತರ ಅವರು ಯುವ ಬ್ಯಾರಿಸ್ಟರ್ ಆಗಿ ಇಂಗ್ಲೆಂಡ್‌ನಿಂದ ಹಿಂದಿರುಗಿದರು. ಈ ಬಗ್ಗೆ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌,  ಶ್ರೀಮದ್ ರಾಜ್‌ಚಂದ್ರಜಿಯವರ ಹಿರಿಮೆ ಅಂತಹದ್ದಾಗಿದೆ, ಅವರು ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರಿಗೂ ಸ್ಫೂರ್ತಿ ನೀಡಿದರು ಎಂದೂ ಹೇಳಿದರು. 
 

ಪ್ರಧಾನಿ ಮೋದಿಗೆ ಭಾರಿ ಭದ್ರತಾ ಲೋಪ: 7 ಪೊಲೀಸರ ಅಮಾನತು ಮಾಡಿದ ಸರ್ಕಾರ

Follow Us:
Download App:
  • android
  • ios