ಇಸ್ರೋದಿಂದ ಮೊದಲ ರಾಕೆಟ್‌ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಚಾಲನೆ ನೀಡಿದರು.

ತಿರುವನಂತಪುರಂ: ಇಸ್ರೋದಿಂದ ಮೊದಲ ರಾಕೆಟ್‌ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಚಾಲನೆ ನೀಡಿದರು. 1963ರಲ್ಲಿ ಭಾರತ ಮೊದಲ ರಾಕೆಟ್ ಹಾರಿಸಿತ್ತು. ಈ ನಿಮಿತ್ತ ಈಗ 60ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಿಂಗ್‌, 60ನೇ ವರ್ಷಾಚರಣೆ ವೇಳೆಯೇ ಚಂದ್ರಯಾನ-2 ಯಶಸ್ವಿಯಾಗಿರುವುದು ವಿಶೇಷ. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು ಭಾರತದ ಬಾಹ್ಯಾಕಾಶ ಯಾನದ ಆಕಾಂಕ್ಷೆಗಳನ್ನು ನಿಜ ಮಾಡಿ ತೋರಿಸಿರುವುದು ಹೆಮ್ಮೆಯ ವಿಚಾರ ಎಂದರು.

ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್‌ ಮಾತನಾಡಿ, ವಿದೇಶಗಳಲ್ಲಿ ಚಂದ್ರಯಾನ-2 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಇಸ್ರೋ ಸಂಸ್ಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ಎಂದರು. ಸಂಭ್ರಮಾಚರಣೆ ನಿಮಿತ್ತ ಆರ್‌ಹೆಚ್‌-200 ರಾಕೆಟ್‌ ಉಡಾವಣೆ, ಬಾಹ್ಯಾಕಾಶ ತಂತ್ರಜ್ಞಾನ ಪ್ರದರ್ಶನ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ವಿಜ್ಞಾನಿಗಳಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.

Scroll to load tweet…

Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್‌ ತರಲಿದೆ ಇಸ್ರೋ!

Tumakur : ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಶೀಘ್ರ