Asianet Suvarna News Asianet Suvarna News

ತುಮಕೂರಿಗೆ ಕೇಂದ್ರದಿಂದ ಭರ್ಜರಿ ಕೊಡುಗೆ : ಸೃಷ್ಟಿಯಾಗಲಿದೆ ಸಾವಿರಾರು ಉದ್ಯೋಗ

ತುಮಕೂರಿನಲ್ಲಿ ಶೀಘ್ರವೇ ಕೈಗಾರಿಕಾ ವಲಯ ತಲೆ ಎತ್ತಲಿದ್ದು, ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯವು ಸಂಪುಟದ ಅನುಮತಿ ಕೋರಲಿದೆ.

industrial sector will be open At tumakuru Soon snr
Author
Bengaluru, First Published Sep 22, 2020, 7:25 AM IST

ನವದೆಹಲಿ (ಸೆ.22): ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ (ಸಿಬಿಐಸಿ) ಯೋಜನೆಯಡಿ ಬರುವ ತುಮಕೂರು ಔದ್ಯೋಗಿಕ ವಲಯದ ಅಭಿವೃದ್ಧಿಗೆ ಶೀಘ್ರದಲ್ಲೇ ಕೇಂದ್ರ ವಾಣಿಜ್ಯ ಸಚಿವಾಲಯವು ಸಚಿವ ಸಂಪುಟದ ಅನುಮೋದನೆ ಕೋರಲಿದೆ.

1,736 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ಕೈಗಾರಿಕಾ ವಲಯಕ್ಕೆ ಈಗಾಗಲೇ ರಾಷ್ಟ್ರೀಯ ಔದ್ಯೋಗಿಕ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ಜಾರಿ ಟ್ರಸ್ಟ್‌ (ಎನ್‌ಐಸಿಡಿಐಟಿ) ಅನುಮೋದನೆ ನೀಡಿದೆ. ಶೀಘ್ರದಲ್ಲೇ ಇದರ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಮಕ್ಕಳಿಗೆ ಮನಿ ಮ್ಯಾನೇಜ್‌ಮೆಂಟ್: ವಾರನ್‌ ಬಫೆಟ್‌ ಹೇಳೋದೇನು? ...

ತುಮಕೂರಿನ ಜೊತೆಗೆ ಉತ್ತರ ಪ್ರದೇಶದ ಮಲ್ಟಿ-ಮೋಡಲ್‌ ಲಾಜಿಸ್ಟಿಕ್‌ ಹಬ್‌ ಮತ್ತು ಆಂಧ್ರಪ್ರದೇಶದ ಔದ್ಯೋಗಿಕ ವಲಯಕ್ಕೂ ಅನುಮೋದನೆ ಕೋರಲಾಗುತ್ತದೆ. ಸದ್ಯ ದೇಶದಲ್ಲಿ 11 ಔದ್ಯೋಗಿಕ ಕಾರಿಡಾರ್‌ಗಳ ನಿರ್ಮಾಣ ಯೋಜನೆ ವಿವಿಧ ಹಂತದಲ್ಲಿದ್ದು, ಅದರಲ್ಲಿ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ (ಸಿಬಿಐಸಿ), ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್‌ ಕಾರಿಡಾರ್‌ (ಬಿಎಂಐಸಿ) ಹಾಗೂ ಹೈದರಾಬಾದ್‌-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ (ಎಚ್‌ಬಿಐಸಿ) ಕೂಡ ಸೇರಿವೆ.

Follow Us:
Download App:
  • android
  • ios