Asianet Suvarna News Asianet Suvarna News

ದೇಶದಲ್ಲಿ ಮೊದಲ ಸಹಕಾರಿ ಸಂಸ್ಥೆ ಸ್ಥಾಪಿಸಿದ ಹೆಗ್ಗಳಿಕೆ, ಕರ್ನಾಟಕ ಸಹಕಾರಿ ಶಕ್ತಿ ವಿವರಿಸಿದ ಅಮಿತ್ ಶಾ!

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಕಾಪರೇಟೀವ್ ಸೊಸೈಟಿ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ದೇಶಕ್ಕೆ ಕರ್ನಾಟಕ ನೀಡಿದ ಕೊಢುಗೆ ಕುರಿತು ವಿವರಿಸಿದ್ದಾರೆ.

Indias first cooperative society launched in Karnataka 100 years ago says Amit shah in Bengaluru Sahakar Labharthi Sammelan ckm
Author
First Published Dec 30, 2022, 7:08 PM IST

ಬೆಂಗಳೂರು(ಡಿ.30): ಭಾರತದಲ್ಲಿ ಸಹಕಾರಿ ಸಂಸ್ಥೆಯನ್ನು ಮೊದಲು ಆರಂಭಿಸಿದ ಖ್ಯಾತಿ ಕರ್ನಾಟಕಕ್ಕಿದೆ. ಸರಿಸುಮಾರು 100 ವರ್ಷಗಳಿಂದ ಕರ್ನಾಟಕದಲ್ಲಿ ಕಾಪರೇಟೀವ್ ಸೊಸೈಟಿ ಗಟ್ಟಿಯಾಗಿ ನೆಲೆಯೂರಿದೆ. 100 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆರಂಭಗೊಂಡ ಸಹಾಕಾರಿ ಸಂಸ್ಥೆ ಕ್ರಾಂತಿ ಇದೀಗ ಇಡೀ ಭಾರತಕ್ಕೆ ವ್ಯಾಪಿಸಿದೆ. ಇದರ ಪರಿಣಾಮ ಭಾರತದಲ್ಲಿ ಬರೋಬ್ಬರಿ 9 ಲಕ್ಷ ಯಶಸ್ವಿ ಕಾಪರೇಟೀವ್ ಸೊಸೈಟಿಗಳಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಮಿತ್ ಶಾ, ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅಮಿತ್ ಶಾ, ಕರ್ನಾಟಕದಲ್ಲಿ ಸಹಕಾರಿ ಆಂದೋಲನ ಸರಿಸುಮಾರು 100 ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ನಡೆಯತ್ತಿದೆ. ಗದಗದ ಸಿದ್ದನಗೌಡ ರಮಣ ಪಾಟೀಲ್, ದೇಶದಲ್ಲಿ ಮೊದಲ ಸಹಕಾರಿ ಸಂಘ ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲಿಂದ ಶುರುವಾಗಿರುವ ಸಹಕಾರಿ ಆಂದೋಲನ ಇಡೀ ಭಾರತದಲ್ಲಿ ವ್ಯಾಪಿಸಿದೆ. ಇಷ್ಟೇ ಅಲ್ಲ ವಿಶ್ವಕ್ಕೆ ಮಾದರಿಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Mandya: ಕಾಂಗ್ರೆಸ್‌ ಬಂದರೆ ದೆಹಲಿಗೆ ಎಟಿಎಂ, ಜೆಡಿಎಸ್‌ ಬಂದರೆ ಕುಟುಂಬಕ್ಕೆ ಎಟಿಎಂ: ಅಮಿತ್‌ ಶಾ ಕಿಡಿ

ಇಂದು ಮಂಡ್ಯದಲ್ಲಿ ಕರ್ನಾಟಕ ಕಾಪೋರೇಟೀವ್ ಪ್ಲಾಂಟ್ ಉದ್ಘಾಟನೆ ಮಾಡಿದ್ದೇನೆ. ಕರ್ನಾಟಕದ ಸಹಕಾರಿ ಆಂದೋಲನ ಕುರಿತು ಹೇಳಲು ಒಂದು ಉದಾಹರಣೆ ಕೊಡುತ್ತೇನೆ. ಅದು ನಂದಿನಿ. ಕರ್ನಾಟಕದಲ್ಲಿ ನಂದಿನ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಂದಿನಿಯಿಂದ ಹಳ್ಳಿ ಹಳ್ಳಿಯಲ್ಲಿರುವ ಮಹಿಳೆಯರು, ಕುಟುಂಬಗಳಿಗೆ ಎಲ್ಲಾ ರೀತಿಯಿಂದಲೂ ನೆರವಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ನಿಂದಿನಿಂದ ಲಕ್ಷಾಂತರ ಕುಟುಂಬಗಳು ಹಸನಾಗಿದೆ. ಅತೀ ದೊಡ್ಡ ವರ್ಗಕ್ಕೆ ಉತ್ಪಾದನೆ ಮಾಡುವುದು ಹಾಗೂ ಅತೀ ದೊಡ್ಡ ಸಂಖ್ಯೆಯಲ್ಲಿ ಉತ್ಪಾದಕರು ಸಹಕಾರ ನೀಡುವುದು ಕಾಪರೇಟೀವ್ ಸೊಸೈಟಿಯಲ್ಲಿ ಅತೀ ಮುಖ್ಯವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಹಕಾರಿ ಮಂತ್ರಾಲಯ ಮಾಡಿದರು. ಈ ಮೂಲಕ ಕಾಪರೇಟೀವ್ ಸೊಸೈಟಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರ ಜೀವನ ಸುಗಮವಾಗಿಸಲು ಮೋದಿ ಈ ಕ್ರಮ ಕೈಗೊಂಡರು. ಇಂದು ವಿಶ್ವದಲ್ಲಿ 30 ಲಕ್ಷ ಯಶ್ವಸ್ವಿ ಕಾಪರೇಟೀವ್ ಸೊಸೈಟಿ ಇದೆ. ಇದರಲ್ಲಿ 9 ಲಕ್ಷ ಕಾಪರೇಟೀವ್ ಸೊಸೈಟಿ ಭಾರತದಲ್ಲೇ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ.

Amit Shah: ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸದಾ ಸಿದ್ಧ: ಅಮಿತ್‌ ಶಾ

ಶೇಕಡಾ 20 ರಷ್ಟು ಅಕ್ಕಿಯನ್ನು ಸಹಕಾರಿ ಕ್ಷೇತ್ರ ಖರೀದಿಸಲಿದೆ. ಶೇಕಡಾ 35 ರಷ್ಟು ರಸಗೊಬ್ಬರ ಸಹಕಾರಿ ಕ್ಷೇತ್ರದಲ್ಲಿ ವಿತರಣೆಯಾಗುತ್ತಿದೆ. ಸಾವಯವ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಕೆಲಸವಾಗುತ್ತಿದೆ. ಇಡೀ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ರು. ಸಾಲ ನೀಡುವ ಯೋಜನೆಯನ್ನು ಅಮಿತ್‌ಶಾ ಚಾಲನೆ ನೀಡಿದ್ದಾರೆ. ಇನ್ನು ಬಿಜೆಪಿ ಪ್ರಮುಖ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕ ಡಿಸೆಂಬರ್ 31ಕ್ಕೆ  ಮಲ್ಲೇಶ್ವರದ ಸೌಹಾರ್ದ ಫೆಡರೇಶನ್‌ಗೆ ಭೇಟಿ ನೀಡಿ, ಸೌಹಾರ್ದ ಸಹಕಾರಿಗಳ ಸಭೆಯನ್ನು ಅಮಿತ್‌ ಶಾ ನಡೆಸಲಿದ್ದಾರೆ. ಆನಂತರ ಬಿಜೆಪಿ ಬೂತ್‌ ವಿಜಯ ಅಭಿಯಾನವನ್ನು ಉದ್ಘಾಟಿಸಿ, ಪಕ್ಷದ ನೂತನ ಕ್ರಿಯಾ ಯೋಜನೆಗಳ ಕುರಿತು ಅಮಿತ್‌ ಶಾ ಮಾರ್ಗದರ್ಶನ ನೀಡಲಿದ್ದಾರೆ.

Follow Us:
Download App:
  • android
  • ios