ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಚರ್ಚೆಗೆ ಸರ್ಕಾರ ಸಿದ್ಧವಿದ್ದು, ವಿಪಕ್ಷಗಳು ಭಾಗವಹಿಸಲಿ ಎಂದು ಸವಾಲು ಹಾಕಿದ್ದಾರೆ. ಆರ್ಜಿ ಕರ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮ ಪ್ರಶ್ನಿಸಿದ್ದಾರೆ.
- Home
- News
- India News
- National News Live: Sukanta Majumdar - ಪ್ರತಿಪಕ್ಷಗಳಿಗೆ ಉತ್ತರ ಬೇಕು, ಸಂಸತ್ತಿನಲ್ಲಿ ಚರ್ಚೆ ಬೇಡ ವಿರೋಧಿಗಳ ಅಸಲಿ ಆಟ ಬಯಲು ಮಾಡಿದ ಕೇಂದ್ರ ಸಚಿವ!
National News Live: Sukanta Majumdar - ಪ್ರತಿಪಕ್ಷಗಳಿಗೆ ಉತ್ತರ ಬೇಕು, ಸಂಸತ್ತಿನಲ್ಲಿ ಚರ್ಚೆ ಬೇಡ ವಿರೋಧಿಗಳ ಅಸಲಿ ಆಟ ಬಯಲು ಮಾಡಿದ ಕೇಂದ್ರ ಸಚಿವ!

ನವದೆಹಲಿ (ಆ.14): ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ. ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಪಟ್ಟುಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 14th August: Sukanta Majumdar - ಪ್ರತಿಪಕ್ಷಗಳಿಗೆ ಉತ್ತರ ಬೇಕು, ಸಂಸತ್ತಿನಲ್ಲಿ ಚರ್ಚೆ ಬೇಡ ವಿರೋಧಿಗಳ ಅಸಲಿ ಆಟ ಬಯಲು ಮಾಡಿದ ಕೇಂದ್ರ ಸಚಿವ!
India News Live 14th August: ಹಾಕಿ ವಿಶ್ವಕಪ್ 2026 - 1975ರ ಬಳಿಕ ಮತ್ತೊಂದು ವಿಶ್ವಕಪ್ ಮೇಲೆ ಭಾರತದ ಕಣ್ಣು; ಭಾರತ-ಪಾಕ್ ಪಂದ್ಯ ಯಾವಾಗ?
India News Live 14th August: ಚಂದ್ರಶೇಖರನ್ ರಾಜೀನಾಮೆ ಬೆನ್ನಲ್ಲೇ 'ಬಾಂಬೆ ಹೌಸ್' ಮುಂದಿನ ಸಾರಥಿ ಯಾರು? - ರೇಸ್ನಲ್ಲಿದ್ದಾರೆ ಟಾಟಾ ಸ್ಟೀಲ್ ಎಂಡಿ!
India News Live 14th August: ರಾಕೆಟ್ನಂತೆ ಚಲಿಸುತ್ತೆ ಚೀನಾದ ಹೊಸ ರೈಲು, ಗಂಟೆಗೆ 800 ಕಿ.ಮೀ ವೇಗ
ಚೀನಾದ ಮ್ಯಾಗ್ಲೇವ್ ಬುಲೆಟ್ ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗವನ್ನು ತಲುಪುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಈ ಕಾಂತೀಯ ತೇಲುವಿಕೆ ತಂತ್ರಜ್ಞಾನವನ್ನು ಸಾರ್ವಜನಿಕ ಸಾರಿಗೆಗೆ ಬಳಸಾಗೋದಿಲ್ಲ.