11:36 PM (IST) Aug 14

India News Live 14th August: ನಾನು ಸನಾತನ ಧರ್ಮ ಪಾಲಿಸುವ ಹಿಂದೂ, ನನ್ನ ಹಿಂದೆ ಆಂಜನೇಯ ಇದ್ದಾನೆ - ಪುಷ್ಪ ನಟಿ ಹೇಳಿಕೆ ವೈರಲ್

ಸನಾತನ ಧರ್ಮದ ಬಗ್ಗೆ ತಾನು ನೀಡಿದ್ದ ಹೇಳಿಕೆ ಕುರಿತು ನಟಿ ಅನಸೂಯಾ ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಾತುಗಳನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ, ಯಾವುದೇ ಧರ್ಮವನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

Read Full Story
10:53 PM (IST) Aug 14

India News Live 14th August: Vishwanath and Sons Review - ಸೂರ್ಯ ಅಭಿನಯಕ್ಕೆ ಫಿದಾ, ಆದರೆ ಸಿನಿಮಾ ಎಲ್ಲೆಲ್ಲಿ ಎಡವಿದೆ?

ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಮೊದಲ ಬಾರಿಗೆ ನಟಿಸಿದ್ದಾರೆ. ಇಂದು ಬಿಡುಗಡೆಯಾದ ಈ ಸಿನಿಮಾ ಹೇಗಿದೆ? ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆಯೇ? ಇಲ್ಲಿದೆ ಸಂಪೂರ್ಣ ವಿಮರ್ಶೆ.

Read Full Story
10:48 PM (IST) Aug 14

India News Live 14th August: ನಿವೃತ್ತಿ ನಂತರ ಕೊಹ್ಲಿ, ರೋಹಿತ್ ಏನ್ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಅಶ್ವಿನ್

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ನಂತರ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಕಾಡಿದೆ. ಅದಕ್ಕೆ ಆರ್‍‌.ಅಶ್ವಿನ್ ಉತ್ತರ ನೀಡಿದ್ದಾರೆ.

Read Full Story
10:11 PM (IST) Aug 14

India News Live 14th August: ಪ್ರತಿ 2000 ಕಿಲೋ ಮೀಟರ್‍‌ಗೆ ಯಾಕೆ ಬೈಕ್ ಸರ್ವೀಸ್ ಮಾಡಿಸಬೇಕು? ಲೇಟ್ ಆದ್ರೆ ಏನಾಗುತ್ತೆ? ತಿಳಿದುಕೊಳ್ಳಿ..!

ಪ್ರತಿ 2000 ಕಿಲೋ ಮೀಟರ್‌ಗೆ ಬೈಕ್ ಸರ್ವೀಸ್ ಮಾಡಿಸುವುದು ಯಾಕೆ ಅಗತ್ಯ? ಲೇಟ್ ಆದರೆ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Read Full Story
10:03 PM (IST) Aug 14

India News Live 14th August: ಬಂದೂಕು ಹಿಡಿದಿದ್ದ ಕೈಗಳಿವು, ಮುಖ್ಯವಾಹಿನಿಗೆ ಮರಳಿ ರ‍್ಯಾಂಪ್ ವಾಕ್ ಮಾಡಿ ಇತಿಹಾಸ ಬರೆದ 9 ಮಾಜಿ ನಕ್ಸಲ್ ಮಹಿಳೆಯರು!

ಒಂದು ಕಾಲದಲ್ಲಿ ಬಸ್ತಾರ್ ಕಾಡುಗಳಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದ ಒಂಬತ್ತು ಮಾಜಿ ನಕ್ಸಲೈಟ್ ಮಹಿಳೆಯರು, ಶರಣಾಗತಿಯ ನಂತರ ಹೊಸ ಜೀವನ ಆರಂಭಿಸಿದ್ದಾರೆ. ರಾಷ್ಟ್ರೀಯ ಕೈಮಗ್ಗ ದಿನದಂದು ರಾಯ್‌ಪುರದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಛತ್ತೀಸ್‌ಗಢದ ಕೈಮಗ್ಗ ಉಡುಪುಗಳನ್ನು ಧರಿಸಿ ರ‍್ಯಾಂಪ್ ವಾಕ್ ಮಾಡುವ ಮೂಲಕ ತಮ್ಮ ಪರಿವರ್ತನೆಯ ಯಶೋಗಾಥೆಯನ್ನು ಸಾರಿದರು.
Read Full Story
09:55 PM (IST) Aug 14

India News Live 14th August: ಧೈರ್ಯ ಇದ್ದರೆ ಮಾತ್ರ ನೋಡಿ - ನೋಡಿದ ಮೇಲೂ ತಲೆಯಿಂದ ಹೊರಹೋಗಲ್ಲ ಈ ಹಾರರ್ ಸಿನಿಮಾ!

ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ, ಬಳಿಕ OTTಯಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಹಾರರ್, ಮಿಸ್ಟರಿ ಮತ್ತು ಫ್ಯಾಂಟಸಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಸಖತ್‌ ಇಂಟರೆಸ್ಟಿಂಗ್‌ ಆಗಿದೆ.

Read Full Story
09:15 PM (IST) Aug 14

India News Live 14th August: ind vs sl 1st test - ಸರ್ಪರಾಜ್‌ಗೆ ಇಲ್ಲ ಸ್ಥಾನ, ಮೂವರು ಕನ್ನಡಿಗರಿಗೆ ಪ್ಲೇಯಿಂಗ್-11ನಲ್ಲಿ ಸ್ಥಾನ ಕೊಟ್ಟ ಚೋಪ್ರಾ

ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸಿರೀಸ್ ಆಡಲಿದೆ. ನಾಳೆಯಿಂದ ಮೊದಲ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಪ್ಲೇಯಿಂಗ್-11 ಮಾಜಿ ಕ್ರಿಕೆಟಿಕ ಆಕಾಶ್ ಚೋಪ್ರಾ ಪ್ರಕಟಿಸಿದ್ದಾರೆ.

Read Full Story
08:44 PM (IST) Aug 14

India News Live 14th August: ಪುನೀತ್‌ ರಾಜ್‌ಕುಮಾರ್‌ ನಟಿಸಿ ಮಾಯವಾದ ಈ ಚೆಲುವೆ ಯಾರು? ಅಷ್ಟಕ್ಕೂ ಈಗ ಏನ್‌ ಮಾಡ್ತಿದ್ದಾರೆ?

ಈ ಫೋಟೋದಲ್ಲಿರುವ ಕ್ಯೂಟ್‌ ಹುಡುಗಿಯನ್ನು ನೋಡಿದರೆ, ಸಿನಿಮಾ ಪ್ರೇಕ್ಷಕರಿಗೆ ಒಮ್ಮೆಲೆ ನೆನಪಾಗದೇ ಇರಬಹುದು. ಆದರೆ ಈ ಚೆಲುವೆ ಸೌತ್‌ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಸಖತ್‌ ಸದ್ದು ಮಾಡಿದ್ದ ನಟಿ.

Read Full Story
08:16 PM (IST) Aug 14

India News Live 14th August: 30 ವರ್ಷಗಳ ಗೆಳೆತನ, DNA ಟೆಸ್ಟ್ ಬಳಿಕ ಅಚ್ಚರಿಯ ಸತ್ಯ - ಇವರು ಕೇವಲ ಸ್ನೇಹಿತೆಯರಲ್ಲ, ಸ್ವಂತ ಅಕ್ಕ-ತಂಗಿ!

ಭಾರತದ ಅನಾಥಾಶ್ರಮಗಳಿಂದ ದತ್ತು ಹೋಗಿ ನೆದರ್ಲ್ಯಾಂಡ್ಸ್‌ನಲ್ಲಿ ಬೆಳೆದ ಇಬ್ಬರು ಬಾಲ್ಯದ ಸ್ನೇಹಿತೆಯರು, 30 ವರ್ಷಗಳ ನಂತರ DNA ಪರೀಕ್ಷೆಯ ಮೂಲಕ ತಾವು ಸ್ವಂತ ಅಕ್ಕ-ತಂಗಿಯರು ಎಂಬ ಸತ್ಯವನ್ನು ಪತ್ತೆಹಚ್ಚಿದ್ದಾರೆ.

Read Full Story
08:14 PM (IST) Aug 14

India News Live 14th August: ಕೋಣೆಯಲ್ಲಿ ರಾಕ್ಷಸನಿದ್ದಾನೆ ಎಂದು ಮಗು ಹೇಳಿದ್ರೂ ಕೇರ್​ ಮಾಡದ ಅಪ್ಪ-ಅಮ್ಮ - ಆಮೇಲೆ ಆಗಿದ್ದು ಮಹಾ ದುರಂತ

ತನ್ನ ಕೋಣೆಯಲ್ಲಿ ರಾಕ್ಷಸನಿದ್ದಾನೆಂದು ಮಗು ಹೇಳಿದಾಗ ಪೋಷಕರು ಅದನ್ನು ಭ್ರಮೆ ಎಂದು ನಿರ್ಲಕ್ಷಿಸಿದರು. ಆದರೆ, ಮಗುವಿನ ನಿರಂತರ ಭಯಕ್ಕೆ ಕಾರಣ ಹುಡುಕಿದಾಗ, ಕೋಣೆಯ ಗೋಡೆಯೊಳಗೆ ಬೃಹತ್ ಜೇನುಗೂಡು ಇರುವುದು ಪತ್ತೆಯಾಯಿತು. ಈ ಘಟನೆಯು ಮಕ್ಕಳ ಮಾತನ್ನು ಎಂದಿಗೂ ಕಡೆಗಣಿಸಬಾರದು ಎಂಬ ಪಾಠವನ್ನು ಸಾರುತ್ತದೆ.
Read Full Story
07:51 PM (IST) Aug 14

India News Live 14th August: ಅವಮಾನಿಸಿದ್ದಕ್ಕೆ ಡ್ರೈವಿಂಗ್ ಕಲಿತು, ಜಮ್ಮು ಬೀದಿಗಳಲ್ಲಿ ಕಾರು ಓಡಿಸ್ತಿರೋ 72ರ ನಿವೃತ್ತ ಶಿಕ್ಷಕಿಯ ಸ್ಪೂರ್ತಿಯ ಕಥೆ!

ನಿವೃತ್ತ ಶಿಕ್ಷಕಿ ವಿದ್ಯಾ ಕೌರ್, ತಮ್ಮ 59ನೇ ವಯಸ್ಸಿನಲ್ಲಿ ಡ್ರೈವಿಂಗ್ ಸ್ಕೂಲ್‌ನಿಂದ ತಿರಸ್ಕರಿಸಲ್ಪಟ್ಟರೂ ಛಲ ಬಿಡಲಿಲ್ಲ. ಸ್ವಂತ ಕಾರು ಖರೀದಿಸಿ, ನೆರೆಹೊರೆಯವರ ಸಹಾಯದಿಂದ ಚಾಲನೆ ಕಲಿತು, ಇಂದು ತಮ್ಮ 72ನೇ ವಯಸ್ಸಿನಲ್ಲಿ ಜಮ್ಮುವಿನ ರಸ್ತೆಗಳಲ್ಲಿ ಆತ್ಮವಿಶ್ವಾಸದಿಂದ ಕಾರು ಚಲಾಯಿಸುತ್ತಿದ್ದಾರೆ. ಅವರ ಈ ಪಯಣವು ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.
Read Full Story
07:42 PM (IST) Aug 14

India News Live 14th August: ಈ ಪುಟ್ಟ ಮಗು ಮಾಡಿದ ಕಿತಾಪತಿ ಅಷ್ಟಿಷ್ಟಲ್ಲ.. ವಿಮಾನ ಸಂಚಾರವೇ ರದ್ದಾಯ್ತು ನೋಡಿ..

ವಿಮಾನ ಪ್ರಯಾಣದ ವೇಳೆ ಸೀಟ್ ಬೆಲ್ಟ್ ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯ. ಆದರೆ ಪುಟ್ಟ ಮಗುವೊಂದು ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿದ ಒಂದೇ ಒಂದು ಕಾರಣಕ್ಕೆ ಇಡೀ ವಿಮಾನವೇ ರದ್ದಾದ (Cancel) ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

Read Full Story
07:34 PM (IST) Aug 14

India News Live 14th August: ಇಬ್ಬರು ಮಕ್ಕಳ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಅಪ್ಪನಿಗೇ 25 ಲಕ್ಷ ರೂ. ದಂಡ ಹಾಕಿದ ಹೈಕೋರ್ಟ್​

ಸ್ವಯಂಪ್ರೇರಣೆಯಿಂದ ಇಸ್ಲಾಂಗೆ ಮತಾಂತರಗೊಂಡ ಇಬ್ಬರು ವಯಸ್ಕ ಸಹೋದರಿಯರನ್ನು ಅವರ ತಂದೆ ಅಕ್ರಮವಾಗಿ ಬಂಧಿಸಿದ್ದರು. ಈ ಪ್ರಕರಣದಲ್ಲಿ, ಅಲಹಾಬಾದ್ ಹೈಕೋರ್ಟ್, ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿದು, ಅವರ ತಂದೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
Read Full Story
07:31 PM (IST) Aug 14

India News Live 14th August: ಜಾನ್ವಿ ಕಪೂರ್‌ ಮನೆ ನೋಡಿದ್ದೀರಾ? ಖಾಸಗಿ ಗಾರ್ಡನ್‌ನಿಂದ ಶ್ರೀದೇವಿ ಫೋಟೋಗಳವರೆಗೆ ಎಲ್ಲವೂ ಸ್ಪೆಷಲ್‌!

ಜಾನ್ವಿ ಕಪೂರ್‌ ಅವರ ಬಾಂದ್ರಾ ಮನೆ ಕೇವಲ ಒಂದು ಐಷಾರಾಮಿ ಕಟ್ಟಡವಲ್ಲ. ಸುಂದರ ಒಳಾಂಗಣ, ಖಾಸಗಿ ಗಾರ್ಡನ್‌ನಿಂದ ಹಿಡಿದು, ಅಮ್ಮ ಶ್ರೀದೇವಿಯ ನೆನಪುಗಳನ್ನು ಹೊತ್ತಿರುವ ಫೋಟೋಗಳವರೆಗೆ, ಮನೆಯ ಪ್ರತಿಯೊಂದು ಮೂಲೆಯೂ ಪ್ರೀತಿ ಮತ್ತು ನೆನಪುಗಳಿಂದ ತುಂಬಿದೆ.

Read Full Story
06:52 PM (IST) Aug 14

India News Live 14th August: 1 ಕೋಟಿ ಸಂಬಳದ ಉದ್ಯೋಗ ತಿರಸ್ಕರಿಸಿದ 25ರ ಯುವತಿ - Gen Zಗಳಿಗೆ ಬೇಕಾಗಿದ್ದು ಏನು? ಭಾರಿ ಚರ್ಚೆ

25 ವರ್ಷದ ಯುವತಿಯೊಬ್ಬಳು ವಿಷಕಾರಿ ಕೆಲಸದ ವಾತಾವರಣದಿಂದಾಗಿ 1 ಕೋಟಿ ರೂಪಾಯಿ ಮೌಲ್ಯದ ಉದ್ಯೋಗದ ಆಫರ್ ತಿರಸ್ಕರಿಸಿದ್ದಾಳೆ. ಈ ಘಟನೆಯು, ಇಂದಿನ ಯುವ ಪೀಳಿಗೆಯು ಹಣಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿಗೆ ಹೇಗೆ ಆದ್ಯತೆ ನೀಡುತ್ತಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
06:19 PM (IST) Aug 14

India News Live 14th August: ವಿಮಾನ ರದ್ದಾಗಿದ್ದಕ್ಕೆ ಏರ್‌ಪೋರ್ಟ್‌ನಲ್ಲಿ ಮಹಿಳೆಯ ರೌದ್ರಾವತಾರ, ₹49,000 ಮೌಲ್ಯದ ಉಪಕರಣ ಧ್ವಂಸ!

ಭುವನೇಶ್ವರದಲ್ಲಿ ತಾಂತ್ರಿಕ ದೋಷದಿಂದ ಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಕೌಂಟರ್‌ನಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ವಿಮಾನಯಾನ ಸಂಸ್ಥೆಯು ಆಕೆಯನ್ನು 'ಅಶಿಸ್ತಿನ ಪ್ರಯಾಣಿಕಳು' ಎಂದು ಘೋಷಿಸಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರವು ಪೊಲೀಸ್ ದೂರು ದಾಖಲಿಸಿದೆ.
Read Full Story
05:59 PM (IST) Aug 14

India News Live 14th August: ಕಳ್ಳರು ಸಿಗದೇ ಪೊಲೀಸರು ಕೈಚೆಲ್ಲಿದ್ರು, ಚಿನ್ನಾಭರಣ ಕದ್ದೋರೇ ವಾಪಸ್​ ತಂದಿಟ್ರು- ಸಿನಿಮಾ ಮೀರಿಸೋ ರಿಯಲ್​ ಸ್ಟೋರಿ

ಆಂಧ್ರಪ್ರದೇಶದ ಕಾಕಿನಾಡದಲ್ಲಿ, ಸುಮಾರು 6.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ನಗದು ಕದ್ದಿದ್ದ ಕಳ್ಳರು, 15 ದಿನಗಳ ನಂತರ ಪಶ್ಚಾತ್ತಾಪದಿಂದ ಅದನ್ನು ವಾಪಸ್ ತಂದಿಟ್ಟಿದ್ದಾರೆ. ಕದ್ದ ವಸ್ತುಗಳ ಜೊತೆಗೆ, ತಾವು ಮಾಡಿದ್ದು ತಪ್ಪು ಎಂದು ಅರಿವಾಗಿರುವುದಾಗಿ ಮತ್ತು ಖರ್ಚಾದ 22 ಸಾವಿರ ರೂಪಾಯಿ ಹೊರತುಪಡಿಸಿ ಉಳಿದದ್ದನ್ನು ಹಿಂದಿರುಗಿಸುತ್ತಿರುವುದಾಗಿ ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟಿದ್ದಾರೆ.

Read Full Story
05:36 PM (IST) Aug 14

India News Live 14th August: Snakes - ಹಾವಿಗೆ ಕಚ್ಚುವುದು ಮಾತ್ರವಲ್ಲ, ಕಾಪಾಡೋದೂ ಗೊತ್ತು! ಜೀವ ತೆಗೆಯೋ ಈ ಜೀವಿಗಳು ಜೀವ ಉಳಿಸೋದು ಹೇಗೆ ಗೊತ್ತಾ?

ಹಾವುಗಳು ರೈತರ ಶತ್ರುಗಳಲ್ಲ, ಬದಲಿಗೆ ಮಿತ್ರರು. ಇಲಿ, ಕೀಟಗಳನ್ನು ತಿನ್ನುವ ಮೂಲಕ ಬೆಳೆ ನಷ್ಟವನ್ನು ತಡೆಯುತ್ತವೆ ಮತ್ತು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಮತೋಲನ ಕಾಪಾಡಲು ಸಹಾಯ ಮಾಡುತ್ತವೆ. ಹಾವುಗಳ ಮಹತ್ವದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ.
Read Full Story
05:24 PM (IST) Aug 14

India News Live 14th August: ಕಿಂಗ್ ನಾಗಾರ್ಜುನ ಮೊಮ್ಮಗಳು ಯಾರು ಗೊತ್ತಾ? ಈ ಯುವತಿ ಸದ್ಯ ಏನು ಮಾಡುತ್ತಿದ್ದಾರೆ?

ಅಕ್ಕಿನೇನಿ ನಾಗಾರ್ಜುನ ಕುಟುಂಬದಲ್ಲಿ, ಅವರಿಗೆ ಮೊಮ್ಮಗಳು ಆಗುವ ಸಂಬಂಧಿಯೊಬ್ಬರಿದ್ದಾರೆ. ಅವರು ಪ್ರಸ್ತುತ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಒಂದು ದುರಂತವೂ ನಡೆದಿದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

Read Full Story
05:06 PM (IST) Aug 14

India News Live 14th August: ಪ್ರಭಾಸ್‌ ಹೊಸ Instagram DP ನೋಡಿದ್ರಾ? ‘ಫೌಜಿ’ ಸೈನಿಕನ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಖುಷ್‌

Prabhas Instagram DP: ಸಿನಿಮಾ ತಾರೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಪ್ರೊಫೈಲ್‌ ಪಿಕ್ಚರ್‌ ಬದಲಿಸುವುದು ಸಾಮಾನ್ಯ ವಿಚಾರ. ಆದರೆ, ಪ್ರಭಾಸ್‌ ವಿಷಯದಲ್ಲಿ ಅದು ಕೂಡ ಒಂದು ದೊಡ್ಡ ಸುದ್ದಿಯಾಗಿಬಿಟ್ಟಿದೆ.

Read Full Story