- Home
- News
- India News
- India Latest News Live: ಶ್ರೀರಾಮಚಂದ್ರನ ರಾಣಿ ಸೀತೆಯಾಗಿ ಸಾಯಿ ಪಲ್ಲವಿ 3 ಲುಕ್ ರಿವೀಲ್; ದೈವಿಕ ಕಳೆ ಎಂದ ಫ್ಯಾನ್ಸ್
LIVE NOW
India Latest News Live: ಶ್ರೀರಾಮಚಂದ್ರನ ರಾಣಿ ಸೀತೆಯಾಗಿ ಸಾಯಿ ಪಲ್ಲವಿ 3 ಲುಕ್ ರಿವೀಲ್; ದೈವಿಕ ಕಳೆ ಎಂದ ಫ್ಯಾನ್ಸ್

ಸಾರಾಂಶ
ಛತ್ರಪತಿ ಸಂಭಾಜಿ ನಗರ: ‘ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಉಗ್ರರಲ್ಲ, ದೇಶದ ಭವಿಷ್ಯ. ಅವರನ್ನು ಸರ್ಕಾರ ಹಿಂಸಿಸಬಾರದು. ಸರ್ಕಾರ ಸರಿಯಾದ ಮಾರ್ಗದಲ್ಲಿ ನಡೆಯದಿದ್ದರೆ ಯುವಕರು ಅದನ್ನೇ (ಸರ್ಕಾರವನ್ನೇ) ಬದಲಿಸುತ್ತಾರೆ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಮ್ಮ ತವರಾದ ಛತ್ರಪತಿ ಸಂಭಾಜಿ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ದೀಪ್ಕೆ, ‘ಹೋರಾಟದ ಬಳಿಕ ಹಲವು ರಾಜ್ಯಗಳಲ್ಲಿ ಸರ್ಕಾರಗಳು ವಿದ್ಯಾರ್ಥಿಗಳನ್ನು ಹಿಂಸಿಸುತ್ತಿವೆ. ಪೊಲೀಸರು ಮನೆಗೇ ಹೋಗಿ ಬಂಧಿಸುವ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಈಗಲಾದರೂ ಸರಿಯಾಗಿ ವರ್ತಿಸಬೇಕು. ಇಲ್ಲದಿದ್ದರೆ, ಈಗ ಸಚಿವರನ್ನುಬದಲಿಸಿದವರು ಮುಂದೆ ಸರ್ಕಾರವನ್ನೇ ಬದಲಿಸಬೇಕಾಗುತ್ತದೆ’ ಎಂದರು. ಜತೆಗೆ, ಅಗತ್ಯವಿದ್ದರೆ ಇನ್ನೂ ದೊಡ್ಡ ಹೋರಾಟ ಮಾಡುವುದಾಗಿಯೂ ಹೇಳಿದರು.
09:33 AM (IST) Jul 30
India Latest News Live 30 July 2026ಶ್ರೀರಾಮಚಂದ್ರನ ರಾಣಿ ಸೀತೆಯಾಗಿ ಸಾಯಿ ಪಲ್ಲವಿ 3 ಲುಕ್ ರಿವೀಲ್; ದೈವಿಕ ಕಳೆ ಎಂದ ಫ್ಯಾನ್ಸ್
ಬಹುನಿರೀಕ್ಷಿತ 'ರಾಮಾಯಣ ಭಾಗ-1' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಗಮನ ಸೆಳೆದಿದ್ದಾರೆ. ಟ್ರೈಲರ್ನಲ್ಲಿ ಸ್ವಯಂವರ, ವನವಾಸ ಸೇರಿದಂತೆ ಅವರ ಮೂರು ವಿಭಿನ್ನ ನೋಟಗಳನ್ನು ತೋರಿಸಲಾಗಿದ್ದು, ರಾವಣನಾಗಿ ಯಶ್ ಮತ್ತು ರಾಮನಾಗಿ ರಣ್ಬೀರ್ ಕಪೂರ್ ಕೂಡ ಮಿಂಚಿದ್ದಾರೆ.
Read Full Story 07:58 AM (IST) Jul 30
India Latest News Live 30 July 2026ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?
ಯಶ್, ರಣ್ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
Read Full Story 07:40 AM (IST) Jul 30
India Latest News Live 30 July 2026ಮಾಜಿ ಬಸ್ ಚಾಲಕನ ಮನೆಯಲ್ಲಿ 20 ಕೋಟಿಗೂ ಅಧಿಕ ದುಡ್ಡು, 15 ಕೆಜಿ ಚಿನ್ನ ಪತ್ತೆ..! ಭಾರೀ ಸಂಚಲನ..!
ದಾಳಿ ವೇಳೆ ಚಿನ್ನ ಮತ್ತು ಹಣ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಗದು ಎಣಿಕೆಗೆ 5 ಮಷಿನ್ಗಳನ್ನ ತಂದಿದ್ದಾರೆ. ಇತ್ತ ಮುಖ್ಯಮಂತ್ರಿ ಅವರು ಭ್ರಷ್ಟರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.