10:59 PM (IST) Oct 01

India Latest News Live 1st October 2025ವಂದೇ ಮಾತರಂ ಗೀತೆಗೆ 150ರ ಸಂಭ್ರಮ, ದೇಶಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ

ವಂದೇ ಮಾತರಂ ಗೀತೆಗೆ 150ರ ಸಂಭ್ರಮ, ದೇಶಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಲಾಗಿದೆ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದೇ ರಾಷ್ಟ್ರಗೀತೆಯಾಗಿತ್ತು. ಇದೀಗ ಈ ಹಾಡಿನ ಸಂಭ್ರಮಾಚರಣೆ ಇಡೀ ದೇಶದಲ್ಲಿ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

Read Full Story
09:00 PM (IST) Oct 01

India Latest News Live 1st October 2025ರಾಜಸ್ಥಾನದ ಕಪ್ ಸಿರಪ್ ದುರಂತ - ಇಬ್ಬರು ಮಕ್ಕಳು ಸಾವು - ಸಿರಪ್ ಸರಿ ಇದೆ ಎಂದು ಸಾಬೀತುಪಡಿಸಲು ಹೋದ ವೈದ್ಯನು ಅಸ್ವಸ್ಥ

Rajasthan Cup Syrup Tragedy: ರಾಜಸ್ಥಾನದಲ್ಲಿ ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 11 ಮಕ್ಕಳು ಅಸ್ವಸ್ಥರಾಗಿದ್ದಾರೆ. ಈ ಸಿರಪ್ ಸುರಕ್ಷಿತವೆಂದು ಸಾಬೀತುಪಡಿಸಲು ಅದನ್ನು ಸೇವಿಸಿದ ವೈದ್ಯರೊಬ್ಬರು ಸಹ ಗಂಟೆಗಳ ಕಾಲ ಪ್ರಜ್ಞೆ ತಪ್ಪಿ ಬಿದ್ದ ಆಘಾತಕಾರಿ ಘಟನೆ ನಡೆದಿದೆ.

Read Full Story
08:14 PM (IST) Oct 01

India Latest News Live 1st October 2025'ಅಮ್ಮ ನನಗೆ ಹಾಲು ಕುಡಿಸ್ತಾ ಇದ್ರೆ, ಅಪ್ಪ ಇನ್ನೊಬ್ಬಳ ಜೊತೆ ಮಲಗಿಕೊಂಡಿದ್ದ' ಮದುವೆ ಆಗದೇ ಇರೋದಕ್ಕೆ ಕಾರಣ ಹೇಳಿದ ಬಿಗ್‌ಬಾಸ್‌ ಸ್ಪರ್ಧಿ!

Big Boss Contestant Farhana Bhat Fears Marriage ಬಿಗ್ ಬಾಸ್ ಮನೆಯಲ್ಲಿ ಕುನಿಕಾ ಸದಾನಂದ್ ಮತ್ತು ಫರ್ಹಾನಾ ಭಟ್ ಪರಸ್ಪರ ಹರಟೆ ಹೊಡೆಯುತ್ತಿರುವುದು ಕಂಡುಬಂದಿತು. ಈ ಬಾರಿ ಫರ್ಹಾನಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

Read Full Story
07:20 PM (IST) Oct 01

India Latest News Live 1st October 2025ಮೊದಲ ಮಗು ನಡೆಯೋಕೆ ಆರಂಭಿಸಿದ ಬೆನ್ನಲ್ಲೇ 2ನೇ ಮಗುವಿಗೆ ಪ್ರಗ್ನೆಂಟ್‌ ಆದ ಬಾಲಿವುಡ್‌ ಬ್ಯೂಟಿ!

Sonam Kapoor Reportedly Pregnant with Second Child ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಪತಿ ಆನಂದ್ ಅಹುಜಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. 

Read Full Story
07:13 PM (IST) Oct 01

India Latest News Live 1st October 2025ಓರಾಯನ್ ಮಾಲ್‌ಲ್ಲಿ ಕಾಂತಾರಾ 1 ಪ್ರೀಮಿಯರ್ ಶೋ, ಮೂವಿ ವೀಕ್ಷಣೆಗೆ ಫ್ಯಾನ್ಸ್ ಜೊತೆ ಬಂದ ರಿಷಬ್

ಓರಾಯನ್ ಮಾಲ್‌ಲ್ಲಿ ಕಾಂತಾರಾ 1 ಪ್ರೀಮಿಯರ್ ಶೋ, ಮೂವಿ ವೀಕ್ಷಣೆಗೆ ಫ್ಯಾನ್ಸ್ ಜೊತೆ ಬಂದ ರಿಷಬ್, ಮಾಲ್‌ನ 7 ಸ್ಕ್ರೀನ್ ಕೂಡ ಹೌಸ್ ಫುಲ್ ಆಗಿದೆ. ಪತ್ನಿ ಸಮೇತ ರಿಷಬ್ ಶೆಟ್ಟಿ ಮಾಲ್‌ಗೆ ಆಗಮಿಸಿದ್ದು, ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ.

Read Full Story
07:12 PM (IST) Oct 01

India Latest News Live 1st October 2025ಇಂದು ಮೋದಿ, ಅಂದು ವಾಜಪೇಯಿ - ವಿಶೇಷ ಅಂಚೆಚೀಟಿಗಳ ರೋಚಕ ಸ್ಟೋರಿ- ಇತಿಹಾಸ ಪುಟದಲ್ಲಿ ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಅಂಗವಾಗಿ ಬಿಡುಗಡೆ ಮಾಡಿರುವ ಅಂಚೆಚೀಟಿ ಮತ್ತು ವಾಜಪೇಯಿ ಅವಧಿಯಲ್ಲಿ ಬಿಡುಗಡೆಯಾದ ಅಂಚೆಚೀಟಿಗಳ ಕುತೂಹಲದ ಸ್ಟೋರಿ ಇಲ್ಲಿದೆ…

Read Full Story
06:42 PM (IST) Oct 01

India Latest News Live 1st October 2025ಅಕ್ಟೋಬರ್ 2ರ ವಿಜಯದಶಮಿ ದಿನ ಈ ಶುಭ ಮುಹೂರ್ತದಲ್ಲಿ ವಾಹನ ಖರೀದಿಸಿ

ಅಕ್ಟೋಬರ್ 2ರ ವಿಜಯದಶಮಿ ದಿನ ಈ ಶುಭ ಮುಹೂರ್ತದಲ್ಲಿ ವಾಹನ ಖರೀದಿಸಿ, ಕಾರು ಬೈಕ್, ಸ್ಕೂಟರ್ ಸೇರಿದಂತೆ ವಾಹನ ಖರೀದಿಸಲು ಉತ್ತಮ ಸಮಯ ಮಿಸ್ ಮಾಡಿಕೊಳ್ಳಬೇಡಿ. ಈ ಸಮಯದಲ್ಲಿ ವಾಹನ ಖರೀದಿಸಿದರೆ ಜೀವನದಲ್ಲಿ ಎಲ್ಲವೂ ಶುಭವಾಗಲಿದೆ ಅನ್ನೋ ನಂಬಿಕೆ ಇದೆ.

Read Full Story
06:36 PM (IST) Oct 01

India Latest News Live 1st October 2025ಅಜ್ಜನ ಜನ್ಮದಿಂದೇ ಪ್ಯಾರಿಸ್‌ನಲ್ಲಿ ಗರ್ಲ್‌ಫ್ರೆಂಡ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸ್ಟಾರ್‌ ನಟ!

Allu Sirish Engaged to Nayanika ನಟ ಅಲ್ಲು ಸಿರೀಶ್ ಅವರು ತಮ್ಮ ಅಜ್ಜ, ದಿವಂಗತ ಅಲ್ಲು ರಾಮಲಿಂಗಯ್ಯ ಅವರ ಜನ್ಮದಿನದಂದೇ ನಯನಿಕಾ ಅವರೊಂದಿಗೆ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ.

Read Full Story
06:35 PM (IST) Oct 01

India Latest News Live 1st October 2025ವಿಜಯದಶಮಿ ಶುಭ ಮುಹೂರ್ತ ಯಾವುದು? ಈ ದೇಗುಲಗಳ ಭೇಟಿ, ಮಂತ್ರ ಪಠಣೆಯಿಂದ ಸರ್ವ ಇಷ್ಟಾರ್ಥ ಸಿದ್ಧಿ

ದಸರಾ ಅಥವಾ ವಿಜಯದಶಮಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. 2025ರ ದಸರಾ ಹಬ್ಬದ ನಿಖರವಾದ ಪೂಜಾ ಮುಹೂರ್ತದ ಜೊತೆಗೆ, ಶ್ರೀರಾಮ, ಹನುಮಂತ, ಶನಿ ಮತ್ತು ಭೈರವ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಜೀವನದ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ವಿಧಾನ ವಿವರಿಸಲಾಗಿದೆ.

Read Full Story
06:27 PM (IST) Oct 01

India Latest News Live 1st October 2025ICC T20I Rankings - ಏಷ್ಯಾಕಪ್‌ನಲ್ಲಿ ಅಬ್ಬರಿಸಿ ಯಾರೂ ಮಾಡದ ರೆಕಾರ್ಡ್‌ ಬರೆದ ಅಭಿಷೇಕ್ ಶರ್ಮಾ!

ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ (931) ಗಳಿಸಿ ಭಾರತದ ಅಭಿಷೇಕ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಏಷ್ಯಾಕಪ್‌ನಲ್ಲಿನ ಅಮೋಘ ಪ್ರದರ್ಶನದ ಬಲದಿಂದ ಅವರು ಡೇವಿಡ್ ಮಲಾನ್ ಅವರ ದಾಖಲೆಯನ್ನು ಮುರಿದಿದ್ದಾರೆ.
Read Full Story
06:16 PM (IST) Oct 01

India Latest News Live 1st October 2025ಬಂಬಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ನಟಿಗೆ ಅದೇ ಡೇಟಿಂಗ್ ಆಪ್ ಬಳಸಿ ಮೋಸ ಮಾಡಿದ ಪ್ರಿಯಕರ

Anusha Dandekar dating app story: ಗಾಯಕಿ ಹಾಗೂ ನಟಿ ಅನುಷಾ ದಂಡೇಕರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರಚಾರ ಮಾಡುತ್ತಿದ್ದ ಡೇಟಿಂಗ್ ಆಪ್ ಅನ್ನೇ ಬಳಸಿ ತಮ್ಮ ಮಾಜಿ ಗೆಳೆಯ ತಮಗೆ ಹೇಗೆ ಮೋಸ ಮಾಡಿದರು ಎಂಬುದನ್ನು ಅವರು ವಿವರಿಸಿದ್ದಾರೆ.

Read Full Story
05:43 PM (IST) Oct 01

India Latest News Live 1st October 2025ಶಾಲೆಯಲ್ಲಿ ಇಷ್ಟಪಟ್ಟಿದ್ದ ಹುಡುಗಿಯ ಜೊತೆ ವಿವಾಹ, 12 ವರ್ಷಗಳ ಬಳಿಕ ವಿಚ್ಛೇದನ ಘೋಷಿಸಿದ ಸ್ಟಾರ್‌ ಜೋಡಿ!

GV Prakash and Saindhavi Divorce After 12 Years of Marriage ತಮಿಳು ಸಂಗೀತ ಲೋಕದ ಖ್ಯಾತ ಜೋಡಿ ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಸೈಂಧವಿ, 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ. ಚೆನ್ನೈ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ಅಂತಿಮಗೊಳಿಸಿದೆ.

Read Full Story
05:32 PM (IST) Oct 01

India Latest News Live 1st October 2025ಅದಾನಿ ಹಿಂದಿಕ್ಕಿದ ಅಂಬಾನಿ ಈಗ ನಂ.1 ಶ್ರೀಮಂತ, ಮಹಿಳೆಯರ ಪೈಕಿ ರೋಶನಿ ನಾಡರ್‌ಗೆ ಪಟ್ಟ

ಅದಾನಿ ಹಿಂದಿಕ್ಕಿದ ಅಂಬಾನಿ ಈಗ ನಂ.1 ಶ್ರೀಮಂತ, ಮಹಿಳೆಯರ ಪೈಕಿ ರೋಶನಿ ನಾಡರ್‌ಗೆ ಪಟ್ಟ, ಹುರನ್ ಇಂಡಿಯಾ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಹಲವು ಬದಲಾವಣೆಯಾಗಿದೆ. ಭಾರತದ ಶ್ರೀಮಂತರ ಸ್ಥಾನ ಪಲ್ಲಟವಾಗಿದೆ.

Read Full Story
04:23 PM (IST) Oct 01

India Latest News Live 1st October 2025ಮನೆಕೆಲಸದಾಕೆಗೆ ಕಿರುಕುಳ - ನಟಿ ಡಿಂಪಲ್ ಹಯಾತಿ ಪತಿ ವಿರುದ್ಧ ಕೇಸ್

Dimple Hayati housemaid case: ಟಾಲಿವುಡ್ ನಟಿ ಡಿಂಪಲ್ ಹಯಾತಿ ಹಾಗೂ ಆಕೆಯ ಪತಿ ವಿಕ್ಟರ್ ಡೇವಿಡ್ ವಿರುದ್ಧ ಮನೆಕೆಲಸದಾಕೆಗೆ ಕಿರುಕುಳ ನೀಡಿದ ಆರೋ ಕೇಳಿ ಬಂದಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೈದರಾಬಾದ್‌ನ ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

Read Full Story
04:18 PM (IST) Oct 01

India Latest News Live 1st October 2025ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ ನೀಡಲಾಗಿದೆ. ಕ್ರೋಮ್ ಬಳಕೆದಾರರಿಗೆ ಗೂಗಲ್ ಕೊಟ್ಟ ಸೂಚನೆಗೆ ಕಾರಣವೇನು? ಕ್ರೋಮ್ ಬಳಸುತ್ತಿರುವವರಿಗೆ ಅಪಾಯವಿದೆಯಾ?

Read Full Story
03:36 PM (IST) Oct 01

India Latest News Live 1st October 2025ಅಕ್ಟೋಬರ್ 3ರ ಭಾರತ್ ಬಂದ್ ಮುಂದೂಡಿದ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್

ಅಕ್ಟೋಬರ್ 3ರ ಭಾರತ್ ಬಂದ್ ಮುಂದೂಡಿದ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ , ವಕ್ಫ್ ತಿದ್ದುಪಡಿ ವಿರೋಧಿಸಿ ನಡೆಯಬೇಕಿದ್ದ ಭಾರತ್ ಬಂದ್ ಇದೀಗ ಹೊಸ ದಿನಾಂಕದಲ್ಲಿ ನಡೆಯಲಿದೆ. ಯಾವ ದಿನ ಭಾರತ್ ಬಂದ್ ನಡೆಯಲಿದೆ.

Read Full Story
03:00 PM (IST) Oct 01

India Latest News Live 1st October 2025Breaking - ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಬಂಪರ್ ಘೋಷಣೆ - DA, DR ಏರಿಕೆಗೆ ಮೋದಿ ಸಂಪುಟ ಅಸ್ತು!

Central Govt Announces 3% DA/DR Hike for Employees Pensioners ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ (ಡಿಎ) ಶೇ.3 ರಷ್ಟು ಹೆಚ್ಚಳವನ್ನು ಅನುಮೋದಿಸಿದೆ.

Read Full Story
02:41 PM (IST) Oct 01

India Latest News Live 1st October 2025ಕೊನೆಗೂ ಬಿಸಿಸಿಐ ಬಳಿ ಕ್ಷಮೆ ಕೇಳಿದ ಮೊಹ್ಸಿನ್ ನಖ್ವಿ, ಆದ್ರೆ ಮತ್ತೆ ಕಂಡೀಷನ್ ಎಂದ ACC ಅಧ್ಯಕ್ಷ!

ದುಬೈ: 2025ರ ಏಷ್ಯಾಕಪ್ ಟೂರ್ನಿ ಮುಗಿದು ಎರಡು ದಿನ ಕಳೆದಿದೆ. ಹೀಗಿದ್ದೂ ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ಟ್ರೋಫಿ ಸಿಕ್ಕಿಲ್ಲ. ಇದೆಲ್ಲದರ ನಡುವೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ, ಬಿಸಿಸಿಐ ಕ್ಷಮೆ ಕೋರಿದ್ದಾರೆ. ಆದ್ರೆ ಟ್ರೋಫಿ ನೀಡಲು ಮತ್ತೊಂದು ಕಂಡೀಷನ್ ಹಾಕಿದ್ದಾರೆ.

Read Full Story
02:37 PM (IST) Oct 01

India Latest News Live 1st October 2025ಇವ್ರು ಮೇಷ್ಟ್ರು ಹೆಂಗಾದ್ರೋ - ಸಣ್ಣದೊಂದು ಚೆಕ್‌ನಲ್ಲಿ ಹಲವು ಮಿಸ್ಟೆಕ್ - ಬ್ಯಾಂಕ್‌ನಿಂದ ರಿಜೆಕ್ಟ್

Teacher Spelling Mistakes: ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರು ಚೆಕ್‌ನಲ್ಲಿ ಮೊತ್ತವನ್ನು ಪದಗಳಲ್ಲಿ ಬರೆಯುವಾಗ ಹಲವಾರು ಕಾಗುಣಿತ ತಪ್ಪು ಮಾಡಿದ್ದಾರೆ. ಈ ಚೆಕ್ ಅನ್ನು ಬ್ಯಾಂಕ್ ತಿರಸ್ಕರಿಸಿದ್ದು, ಈ ಚೆಕ್ ಫೋಟೋ ವೈರಲ್ ಆಗಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

Read Full Story
01:33 PM (IST) Oct 01

India Latest News Live 1st October 2025ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರಕ್ಕೆ 20ರ ಹರೆಯದ ಭಜರಂಗದಳ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

Moradabad Bajrang Dal worker death: ಉತ್ತರ ಪ್ರದೇಶದಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಸಂಬಂಧಿಸಿದಂತೆ 20 ವರ್ಷದ ಭಜರಂಗದಳದ ಕಾರ್ಯಕರ್ತ ಶೋಭಿತ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯಿಂದಾಗಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Read Full Story