Asianet Suvarna News Asianet Suvarna News

G 20 ಅಧ್ಯಕ್ಷರಾಗಿ ಭಾರತಕ್ಕಿರುವ ಅವಕಾಶ ಹಾಗೂ ಸವಾಲುಗಳೇನು..?

ಸಾಂದರ್ಭಿಕವಾಗಿ ಸರಿಯಾದ ದೇಶವನ್ನು ಮತ್ತು ಸರಿಯಾದ ನಾಯಕನನ್ನು ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ಸ್ಥಳದಲ್ಲಿ ಇರಿಸುವಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವುದು ಉದಾಹರಣೆಯಾಗಿದೆ.

india as chairman of g 20 opportunity and challenge tp sreenivas ash
Author
First Published Nov 22, 2022, 12:34 PM IST

ಭಾರತ (India) ಇತ್ತೀಚೆಗೆ ಜಿ - 20 ಅಧ್ಯಕ್ಷ ಸ್ಥಾನ (Chairmanship) ಪಡೆದುಕೊಂಡಿದೆ. ಅಲ್ಲದೆ, ಮುಂದಿನ ವರ್ಷ ಜಿ - 20 ಶೃಂಗಸಭೆಯೂ (G - 20 Summit) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi)  ನಡೆಯಲಿದೆ. ಈ ಬಗ್ಗೆ ಏಷ್ಯಾನೆಟ್‌ ನ್ಯೂಸ್‌ (Asianet News) ಭಾರತದ ಮಾಜಿ ರಾಯಭಾರಿ ಮತ್ತು IAEA ಯ ಭಾರತದ ಗವರ್ನರ್ ಟಿ.ಪಿ. ಶ್ರೀನಿವಾಸನ್‌ (T.P. Sreenivas) ಅವರನ್ನು ಸಂದರ್ಶನ ನಡೆಸಿದ್ದು, ಅವರ ಹೇಳಿಕೆಯ ವಿವರ ಹೀಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿ ಹಲವು ಅಂತಾರಾಷ್ಟ್ರೀಯ ಮಂಡಳಿಗಳು ಇಂಗ್ಲೀಷ್‌ ವರ್ಣಮಾಲೆಯ ಪ್ರಕಾರ ಪ್ರತಿ ವರ್ಷ ನಾಯಕತ್ವ ಸ್ಥಾನವನ್ನು ನೀಡುವ ಅಭ್ಯಾಸ ಹೊಂದಿದೆ. ಇದೇ ರೀತಿ, ಇಂಡೋನೇಷ್ಯಾದಲ್ಲಿ ನಡೆದ ಜಿ - 20 ಶೃಂಗಸಭೆಯ ಬಳಿಕ ಮುಂದಿನ ಬಾರಿ ಭಾರತದಲ್ಲಿ ಶೃಂಗಸಭೆ ನಡೆಯಲಿದ್ದು, ಅಧ್ಯಕ್ಷ ಸ್ಥಾನವೂ ದೊರಕಿದೆ. 

ಇನ್ನು, ಸಾಂದರ್ಭಿಕವಾಗಿ ಸರಿಯಾದ ದೇಶವನ್ನು ಮತ್ತು ಸರಿಯಾದ ನಾಯಕನನ್ನು ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ಸ್ಥಳದಲ್ಲಿ ಇರಿಸುವಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವುದು ಉದಾಹರಣೆಯಾಗಿದೆ. ಅವರು ಔಪಚಾರಿಕವಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಮೋದಿ ಮತ್ತು ಭಾರತೀಯ ನಿಯೋಗವು ಬಾಲಿ ಘೋಷಣೆಯ ಮೇಲೆ ಅಳಿಸಲಾಗದ ಪ್ರಭಾವ ಬೀರಿದೆ.

ಇದನ್ನು ಓದಿ: G20 Summit -2022: ಜಿ20 ಶೃಂಗದ ಯಶಸ್ಸಿಗೆ ಮೋದಿ ಕಾರಣ : ಅಮೆರಿಕ

ಭಾರತ ಸರ್ಕಾರ ವಿವಿಧ ಸಂದರ್ಭಗಳಲ್ಲಿ ಎತ್ತಿದ್ದ ಹಲವು ವಿಚಾರಗಳನ್ನು ಬಾಲಿ ಘೋಷಣೆಯಲ್ಲಿ ಪ್ರಸ್ತಾಪಿಸಲಾಯಿತು. ಬಾಲಿಯಲ್ಲಿ ಚರ್ಚಿಸಲಾದ ಅತ್ಯಂತ ತುರ್ತು ವಿಷಯದ ಬಗ್ಗೆ ಭಾರತವು ತಟಸ್ಥ ಸ್ಥಾನ ಪಡೆದಿದ್ದರಿಂದ ಇದು ಸಾಧ್ಯವಾಯಿತು.ಭಾರತವು ಮೊದಲಿನಿಂದಲೂ ತೆಗೆದುಕೊಂಡಿರುವ ನಿಲುವಿನಂತೆ ಯುದ್ಧ ಮತ್ತು ಮಾತುಕತೆಗಳನ್ನು ನಿಲ್ಲಿಸುವ ಬೇಡಿಕೆಯಲ್ಲಿ ಈ ಗುಂಪು ಒಂದೇ ಅಭಿಪ್ರಾಯ ಹೊಂದಿತ್ತು.  ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಈ ಶೃಂಗಸಭೆಯಲ್ಲಿ ಭಾಗವಹಿಸಿರಲಿಲ್ಲ ಮತ್ತು ಅವರ ವಿದೇಶಾಂಗ ಸಚಿವರು ವಾಸ್ತವಿಕವಾಗಿ ಪ್ರತ್ಯೇಕಿಸಲ್ಪಟ್ಟಿದ್ದರು. 
 
ಭಾರತವು, ಈಗಿನಿಂದ ಜಿ 20 ಅಧ್ಯಕ್ಷರಾಗಿ, ಮಧ್ಯವರ್ತಿಯಾಗಿಲ್ಲದಿದ್ದರೂ, ಸಂವಹನಕಾರರಾಗಿ ಯುದ್ಧವನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ಪ್ರಯತ್ನದ ಕೇಂದ್ರವಾಗಿದೆ. ಯುಎಸ್ ಮತ್ತು ನ್ಯಾಟೋ ಸಹ ಭಾರತವನ್ನು ಮಾತುಕತೆಗಳ ವಿಚಾರದಲ್ಲಿ ಕ್ಯಾಟಲಿಸ್ಟ್‌ ಆಗಿ ನೋಡುತ್ತವೆ. ವಿಶೇಷವಾಗಿ ಚೀನಾ ಭಾರತದ ನಡೆಗಳನ್ನು ಗಮನಿಸುತ್ತಿರುತ್ತದೆ ಹಾಗೂ ಭಾರತ ಹೆಚ್ಚು ವೈಭವೀಪ್ರೇರಿತವಾಗದಂತೆ ಮಾಡಲು ಶ್ರಮಿಸುತ್ತದೆ. ಭಾರತದ ಸ್ವಯಂ ಘೋಷಿತ "ಮಹಾಗುರು" ಪಾತ್ರವನ್ನು ತೀವ್ರ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇದನ್ನೂ ಓದಿ: ಮೋದಿ ಶಾಂತಿ ಮಂತ್ರಕ್ಕೆ G20 ಧ್ವನಿ: ಮ್ಯಾಂಗ್ರೋವ್‌ ಸಸಿ ನೆಟ್ಟ ಪ್ರಧಾನಿ ಮೋದಿ

ಆದರೂ, ಬಾಲಿಯಲ್ಲಿ ಈ ಶೃಂಗಸಭೆಯ ವಿಜೇತರನ್ನು ಜೀವಮಾನದ ನಾಯಕರೆನಿಸಿಕೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಂದು ಭಾರತದ ಮಾಜಿ ರಾಯಭಾರಿ ಮತ್ತು IAEA ಯ ಭಾರತದ ಗವರ್ನರ್ ಟಿ.ಪಿ. ಶ್ರೀನಿವಾಸನ್‌ ಏಷ್ಯಾನೆಟ್‌ ನ್ಯೂಸ್‌ಗೆ ಹೇಳಿದ್ದಾರೆ. 3 ವರ್ಷಗಳ ಸಾಂಕ್ರಾಮಿಕ ಪ್ರತ್ಯೇಕತೆಯಿಂದ ಕ್ಸಿ ಜಿನ್‌ಪಿಂಗ್ ಜತೆ  ಪ್ರತಿಯೊಬ್ಬ ವಿಶ್ವ ನಾಯಕರು ಮಾತನಾಡಲು ಮತ್ತು ಫೋಟೋ ತೆಗೆಸಿಕೊಳ್ಳಲು ಉತ್ಸುಕರಾಗಿದ್ದರು. 

ಚೀನಾದ ಮಾನವ ಹಕ್ಕುಗಳ ಉಲ್ಲಂಘನೆಯ ಖಂಡನೆ ಮತ್ತು ತೈವಾನ್ ಜಲಸಂಧಿಯಲ್ಲಿ ಅದರ ಉದ್ದೇಶಗಳ ಬಗ್ಗೆ ಆತಂಕದ ಹೊರತಾಗಿಯೂ, ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಶೃಂಗಸಭೆಯ ಪ್ರಮುಖ ಅಂಶಗಳಲ್ಲಿ ಒಂದು. ಈ ಮಧ್ಯೆ, ಉಕ್ರೇನ್‌ನಲ್ಲಿನ ಯುದ್ಧವನ್ನು ಅಂತ್ಯಗೊಳಿಸಲು ಪುಟಿನ್ ಮನವೊಲಿಸಲು ಕ್ಸಿ ಜಿನ್‌ಪಿಂಗ್‌ ಅವರನ್ನು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕೇಳಿದ್ದಾರೆ. ಇನ್ನು, ತಮ್ಮ ಸಂಭಾಷಣೆಯ ವಿಷಯವನ್ನು ಪತ್ರಿಕೆಗಳಿಗೆ ಸೋರಿಕೆ ಮಾಡಿದ್ದಕ್ಕಾಗಿ ಕ್ಸಿ ಜಿನ್‌ಪಿಂಗ್ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರೂಡೋವನ್ನು ಸಾರ್ವಜನಿಕವಾಗಿ ಖಂಡಿಸಿದರು. 

ಇದನ್ನೂ ಓದಿ: G - 20 Summit: ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡಲು ಹಿಂದೆ ಹಿಂದೆ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌: ವಿಡಿಯೋ ನೋಡಿ..

ಈ ಶೃಂಗಸಭೆಯಲ್ಲಿ ಇಂಡೋನೇಷಿಯನ್ನರು ಆಹಾರ ಮತ್ತು ಇಂಧನ ಭದ್ರತೆಯ ಬಗ್ಗೆ ಹಾಗೂ  ಹವಾಮಾನ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸಲು ಬಯಸಿದ್ದರೂ, ಭೌಗೋಳಿಕ ರಾಜಕೀಯ ವಿಚಾರವೇ ಪ್ರಾಬಲ್ಯ ಹೊಂದಿತ್ತು. ಮೊದಲ ದಿನ - ಕ್ಸಿ ಜಿನ್‌ಪಿಂಗ್ - ಜೋ ಬೈಡೆನ್‌ ಸಭೆ ಪ್ರಾಬಲ್ಯ ಸಾಧಿಸಿದರೆ, ಮರುದಿನ, G 20 ತ್ವರಿತವಾಗಿ G7 ನ ತಾತ್ಕಾಲಿಕ ಸಭೆಯಾಯಿತು. ಇದಕ್ಕೆ ಕಾರಣ, ರಷ್ಯಾದ ಕ್ಷಿಪಣಿ ಪೋಲೆಂಡ್‌ ಮೇಲೆ ದಾಳಿ ಮಾಡಿದೆ ಎಂಬ ವರದಿಗಳ ಬಗ್ಗೆ ಚರ್ಚಿಸಲು ನಾಯಕರು ಗುಂಪುಗೂಡಿದರು.  

ಬಾಲಿ ಜಂಟಿ ಘೋಷಣೆಯ ವೇಳೆ ರಷ್ಯಾವನ್ನು ದೋಷಾರೋಪಿಸಲಾಗಿದೆ. G20 ಭದ್ರತಾ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಲ್ಲ ಎಂದು ಗುರುತಿಸಿದರೂ, ಭದ್ರತಾ ಸಮಸ್ಯೆಗಳು ಜಾಗತಿಕ ಆರ್ಥಿಕತೆಗೆ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ ಎಂದು ಬಹುತೇಕ ನಾಯಕರು ಒಪ್ಪಿದರು. ಇನ್ನು, ಹವಾಮಾನ ತುರ್ತು ಪರಿಸ್ಥಿತಿಯಲ್ಲಿ, G20 ನಾಯಕರು ಕಲ್ಲಿದ್ದಲಿನ ಅಡೆತಡೆಯಿಲ್ಲದ ಬಳಕೆಯನ್ನು ಹಂತ ಹಂತವಾಗಿ ತಗ್ಗಿಸುವ ಪ್ರಯತ್ನಗಳನ್ನು ವೇಗಗೊಳಿಸುವುದು ಸೇರಿದಂತೆ ಜಾಗತಿಕ ತಾಪಮಾನದ ಏರಿಕೆಯನ್ನು 1. 5 ಡಿಗ್ರಿ ಎಲ್ಶಿಯಸ್‌ಗೆ ಮಿತಿಗೊಳಿಸುವ ಪ್ರಯತ್ನಗಳನ್ನು ಮುಂದುವರಿಸುವ ನಿರ್ಣಯ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: G20 Summit: ಜಗತ್ತಿನ ಅಭಿವೃದ್ಧಿಗೆ ಭಾರತವೇ ಮುಖ್ಯ ಎಂದ ಪ್ರಧಾನಿ ಮೋದಿ!

ಶೃಂಗಸಭೆಯಲ್ಲಿ ರಷ್ಯಾದ ಉಪಸ್ಥಿತಿಯ ಕಾರಣ ವಿಶ್ವ ನಾಯಕರು "ಕುಟುಂಬದ ಫೋಟೋ" ಶೂಟ್‌ನಲ್ಲಿ ಭಾಗವಹಿಸಲಿಲ್ಲ. ಹಾಗೂ, ಉಕ್ರೇನ್‌ ಅಧ್ಯಕ್ಷರು ಈ ಸಭೆಯನ್ನು "G19" ಎಂದು ಕರೆದಿದ್ದರು. ಇನ್ನು, ಕ್ಸಿ ಜಿನ್‌ಪಿಂಗ್‌ ಜೊತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಮೊದಲ ಸಭೆಯು ಎರಡು ಮಹಾಶಕ್ತಿಗಳ ನಡುವಿನ ಸಂಬಂಧಗಳಲ್ಲಿ "ಮರುಹೊಂದಿಸುವಿಕೆ" ಪ್ರಾರಂಭವಾಗಿದೆ ಎಂದು ಸೂಚಿಸಿದೆ. 

ಇನ್ನು, ಬ್ರಿಟನ್‌ ಅಧ್ಯಕ್ಷರಾಗಿ ರಿಷಿ ಸುನಕ್ ಅವರ ರಾಜತಾಂತ್ರಿಕ ಚೊಚ್ಚಲ ಪ್ರದರ್ಶನವು ಸಾಧಾರಣ ಯಶಸ್ಸನ್ನು ಕಂಡಿತು. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಅವರ ಬಲವಾಗಿ ಖಂಡನೆ ಹಾಗೂ ರಷ್ಯಾದ ವಿದೇಶಾಂಗ ಸಚಿವರತ್ತ ಬೀರಿದ ನೋಟ ಉಕ್ರೇನ್‌ಗೆ ಇಷ್ಟವಾಗುತ್ತದೆ. ಆದರೆ, ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುನಕ್ ಅವರ ಯೋಜಿತ ಸಭೆಯು ಸಮಯದ ನಿರ್ಬಂಧಗಳ ಕಾರಣದಿಂದ ರದ್ದುಗೊಂಡಿತು.

ಇದನ್ನೂ ಓದಿ: ಕಂಗ್ರಾ ಚಿತ್ರಕಲೆಯಿಂದ ಸೂರತ್‌ನ ಬೆಳ್ಳಿಯ ಬಟ್ಟಲು, G20 ನಾಯಕರಿಗೆ ಪ್ರಧಾನಿ ಮೋದಿ ನೀಡಿದ ಗಿಫ್ಟ್‌!

ಬಾಲಿ ಶೃಂಗಸಭೆಯ 52 ಪ್ಯಾರಾಗ್ರಾಫ್‌ನ ಘೋಷಣೆಯ ಹೆಚ್ಚಿನ ಭಾಗವನ್ನು ಜಾಗತಿಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ವಿಶ್ಲೇಷಣೆಯಲ್ಲಿ ವಿವರಿಸಲಾಗಿದೆ. ಮುಂದಿನ ಶೃಂಗಸಭೆಗೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಇಡೀ ಸರ್ಕಾರಿ ಯಂತ್ರವು ನಮಗೆ ದೊರೆತಿರುವ ಜಿ 20 ಅಧ್ಯಕ್ಷಗಿರಿಯ ಅವಕಾಶವನ್ನು ಬಳಸಿಕೊಳ್ಳಲು ಸಮ್ಮೇಳನಗಳು ಮತ್ತು ಪ್ರದರ್ಶನಗಳ ಅದ್ಭುತ ವರ್ಷಕ್ಕೆ ಸಜ್ಜಾಗುತ್ತಿದೆ. 2024ರ ಚುನಾವಣೆಯ ಪ್ರಯತ್ನದಲ್ಲಿ ಬಿಜೆಪಿಗೆ ಇದು ವರದಾನವಾಗಲಿದೆ.

ಆದರೆ ಯುದ್ಧ ಮುಂದುವರಿದರೆ ಮತ್ತು ಜಾಗತಿಕ ಆರ್ಥಿಕತೆಯು ಕುಸಿದರೆ, ಸ್ವಲ್ಪಮಟ್ಟಿಗೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಒಟ್ಟಾರೆ, ಜಿ 20 ಅಧ್ಯಕ್ಷ ಸ್ಥಾನ ಅವಕಾಶ ಭಾರತಕ್ಕೆ ದೊರೆತಿರುವುದು ಸ್ವಾಗತಾರ್ಹವಾಗಿದ್ದರೂ, 2023 ರಲ್ಲಿ ಸವಾಲು ದೊಡ್ಡದಾಗಿದೆ ಎಂದು ಏಷ್ಯಾನೆಟ್‌ ನ್ಯೂಸ್‌ ನಡೆಸಿದ ಸಂದರ್ಶನದಲ್ಲಿ ಭಾರತದ ಮಾಜಿ ರಾಯಭಾರಿ ಮತ್ತು IAEA ಯ ಭಾರತದ ಗವರ್ನರ್ ಟಿ.ಪಿ. ಶ್ರೀನಿವಾಸನ್‌ ಅವರು ಹೀಗೆ ಹೇಳಿದ್ದಾರೆ. 

Follow Us:
Download App:
  • android
  • ios