Asianet Suvarna News Asianet Suvarna News

ಮೋಸದ ಜಗತ್ತು...ಕಣ್ಣುಜ್ಜಿಕೊಂಡರೆ ಕೈಗೆ ಬಂದ್ಬಿಡ್ತು ಕಣ್ಣು, ನಕಲಿ ಕಣ್ಣು ಹಾಕಿದ್ದ ಜಾರ್ಖಂಡ್‌ ಆಸ್ಪತ್ರೆ ಸೀಲ್‌!

ಈ ಜಗತ್ತಿನಲ್ಲಿ ಎಷ್ಟು ಮೋಸ ತುಂಬಿದೆ ಎನ್ನುವ ಉದಾಹರಣೆ ಇದು. ಕಣ್ಣು ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೃದ್ಧನೊಬ್ಬನ ನಿಜವಾದ ಕಣ್ಣುಗಳನ್ನು ತೆಗೆದ ವೈದ್ಯರೊಬ್ಬರು, ನಕಲಿ ಕಣ್ಣುಗಳನ್ನು ಹಾಕಿ ಕಳಿಸಿಕೊಟ್ಟಿದ್ದಾರೆ. ತುರಿಕೆ ಮತ್ತು ನೋವು ಕಾಣಿಸಿಕೊಂಡ ಕಾರಣ ಅಜ್ಜ ಕಣ್ಣುಜ್ಜಿಕೊಂಡರೆ, ಕಣ್ಣು ಕೈಗೆ ಬಂದು ಬಿಟ್ಟಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತ ಉನ್ನತ ಮಟ್ಟದ ತನಿಖೆಗೆ ಅದೇಶಿಸಿದ್ದಾರೆ.

In The Name of Free Operation old mans eye was removed and Fake eye was installed in Jarkhand san
Author
First Published Oct 12, 2022, 4:13 PM IST

ರಾಂಚಿ (ಅ.12): ಜಾರ್ಖಂಡ್‌ ರಾಜ್ಯದಲ್ಲಿ ವೈದ್ಯರೊಬ್ಬರ ಅತ್ಯಂತ ಗಂಭೀರ ಪ್ರಮಾಣದ ಅಚಾತುರ್ಯ ಬೆಳಕಿಗೆ ಬಂದಿದೆ. ಕಣ್ಣಿನ ದೋಷವನ್ನು ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸುವ ನಿಟ್ಟಿನಲ್ಲಿ ವೃದ್ಧರೊಬ್ಬರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರೊಬ್ಬರು, ಆತನ ನಿಜವಾದ ಕಣ್ಣನ್ನು ತೆಗೆದು ಆ ಜಾಗಕ್ಕೆ ನಕಲಿ ಕಣ್ಣು ಹಾಕಿದ್ದಾರೆ. ಜೆಮ್ಶೆಡ್ಪರದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ. ನಕಲಿ ಕಣ್ಣನ್ನು ಕೈಯಲ್ಲಿ ಹಿಡಿದುಕೊಂಡು ವೃದ್ಧ ಆಸ್ಪತ್ರೆಗೆ ತಲುಪಿದಾಗ ಅಲ್ಲಿದ್ದವರೆಲ್ಲಾ ಒಮ್ಮೆ ಅಚ್ಚರಿಗೆ ಒಳಗಾಗಿದ್ದಾರೆ. ಆಪರೇಷನ್‌ ವೇಳೆ ನನ್ನ ಅಸಲಿ ಕಣ್ಣನ್ನು ತೆಗೆದು, ಗಾಜಿನ ಗುಂಡಿನ ರೀತಿಯಲ್ಲಿರುವ ನಕಲಿ ಕಣ್ಣನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅಜ್ಜ ಈ ವಿಚಾರವನ್ನು ತಿಳಿಸುತ್ತಿದ್ದರೆ, ಆಸ್ಪತ್ರೆಯಲ್ಲಿದ್ದವರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದಿವಾಸಿಯಾಗಿರುವ ಗಂಗಾಧರ್‌ ಸಿಂಗ್‌   ಈ ಕುರಿತಾಗಿ ಪೊಲೀಸ್‌ ದೂರು ದಾಖಲಿಸಿದ್ದಾರೆ. ಕೆಸಿಸಿ ಆಸ್ಪತ್ರೆಯ ಮ್ಯಾನೇಜ್‌ಮೆಂಟ್‌ ಹಾಗೂ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ವಿರುದ್ಧ ಗಂಗಾಧರ್‌ ಸಿಂಗ್‌ ಕೇಸ್‌ ದಾಖಲು ಮಾಡಿದ್ದಾರೆ. ಜಮ್ಶೆಡ್ಪುರದಿಂದ ಅಂದಾಜು 60 ಕಿಲೋಮೀಟರ್‌ ದೂರ ಸಾಗಿದರೆ, ಅಲ್ಲಿನ ಕಾಡಿನಲ್ಲಿ ಅಂದಾಜು 15 ಮನೆಗಳಿರುವ ಬುಡಕಟ್ಟು ಸಮುದಾಯ ಕಾಣುತ್ತದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಗಂಗಾಧರ್‌ ಸಿಂಗ್‌ ಈ ಬುಡಕಟ್ಟು ಮನೆಗಳಿಗೆ ಸೇರಿದವರು.

ಕಳೆದ ಕೆಲವು ಸಮಯಗಳಿಂದ ಗಂಗಾಧರ್‌ ಅವರ ಒಂದು ಕಣ್ಣಿನಿಂದ ವಿಪರೀತ ನೀರು ಬರುತ್ತಿತ್ತು. ಈ ವೇಳೆ ಇವರ ಗ್ರಾಮಕ್ಕೆ ಬಂದ ಮಹಿಳೆಯೊಬ್ಬರಿಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ತಮ್ಮ ಕಣ್ಣಿನ ಸಮಸ್ಯೆಯ ಬಗ್ಗೆ ಮಹಿಳೆಯ ಬಳಿ ಸಂಪೂರ್ಣವಾಗಿ ವಿವರ ನೀಡಿದ್ದರು. ಈ ವೇಳೆ ಆ ಮಹಿಳೆ, ತಾನು ಎನ್‌ಜಿಓ (NGO) ಜೊತೆ ಮಾತನಾಡಿ ಕಣ್ಣಿನ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಹೇಳಿದ್ದಳು.

2021ರ ನವೆಂಬರ್‌ 18 ರಂದು, ವೃದ್ಧ ಗಂಗಾಧರ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಇವರೊಂದಿಗೆ ಅದೇ ಗ್ರಾಮದ ದೇವ ಮುರ್ಮು, ಚಿತಾ ಹಂಸ್ದಾ, ಭಾನು ಸಿಂಗ್, ಮಂಜೋಲ್ ಸಿಂಗ್ ಮತ್ತು ಟೆಟೆ ಗಿರಿ ಸೇರಿದಂತೆ ಹಲವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆಪರೇಷನ್ ಆದ ಎರಡನೇ ದಿನವೇ ಎಲ್ಲರನ್ನೂ ಮನೆಗೆ ಕಳುಹಿಸಲಾಯಿತು. ಕೆಲವು ದಿನಗಳ ನಂತರ ಗಂಗಾಧರ್‌ ಅವರ ಕಣ್ಣುಗಳಲ್ಲಿ ತುರಿಕೆ ಶುರುವಾಯಿತು. ಇದಾದ ನಂತರ ಗಂಗಾಧರ್ ಅವರನ್ನು ಮತ್ತೆ ಜೆಮ್‌ಶೆಡ್‌ಪುರ, ರಾಂಚಿ ಮತ್ತು ಕೋಲ್ಕತ್ತಾಗೆ ಕರೆದೊಯ್ಯಲಾಯಿತು, ಆದರೆ ಸಮಸ್ಯೆ ಬಗೆಹರಿಯಲಿಲ್ಲ.

ದಿನದಿಂದ ದಿನಕ್ಕೆ ಅವರ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು. ಕಣ್ಣುಗಳಲ್ಲಿ (Eye) ತುರಿಕೆ, ಉರಿ ಹೆಚ್ಚಾದ ಬಳಿಕ, ಕೈಗಳಿಂದ ಕಣ್ಣನ್ನು ಉಜ್ಜಿಕೊಳ್ಳಲು ಆರಂಭಿಸಿದ್ದಾರೆ. ಒಂದು ಹಂತದಲ್ಲಿ ಕಣ್ಣುಗಳನ್ನು ಉಜ್ಜಿಕೊಳ್ಳಲುವ ವೇಳೆ, ಕಣ್ಣಲ್ಲಿ ಇಟ್ಟಿದ್ದ ನಕಲಿ ಗಾಜಿನ ಗುಂಡು ಹೊರಬಿದ್ದಿದೆ ಎಂದು ಗಂಗಾಧರ್‌ ಸಿಂಗ್‌ ಹೇಳಿದ್ದಾರೆ. ಇದನ್ನು ಕಂಡೊಡನೆ ಭಯಗೊಂಡ ಅವರು, ತಕ್ಷಣವೇ ಕಣ್ಣನ್ನು (Fake Eye) ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ಅಲ್ಲಿಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ಅವರಿಗೆ ಹಾಕಿದ್ದ ಕಣ್ಣು ನಕಲಿ ಎಂದು ಹೇಳಲಾಗಿದೆ. ಈ ಸತ್ಯ ಗೊತ್ತಾದ ಬಳಿಕ, ಇಡೀ ಆಸ್ಪತ್ರೆ ಆಡಳಿತದಲ್ಲಿ ಸಂಚಲನ ಉಂಟಾಗಿದ್ದು, ಪ್ರಕರಣವನ್ನೂ ದಾಖಲಿಸಲಾಗಿದೆ. ಇದಾದ ಬಳಿಕ, ಗ್ರಾಮಸ್ಥರು ಸಭೆಯನ್ನು ನಡೆಸಿ, ಶಸ್ತ್ರ ಚಿಕಿತ್ಸೆ ಮಾಡಿದ ಮಹಿಳಾ ವೈದ್ಯೆಯನ್ನು ಹುಡುಕಲು ಆರಂಭಿಸಿದ್ದಾರೆ.

Fake Doctor ನಕಲಿ ವೈದ್ಯರ ಐವಿಎಫ್‌ ಚಿಕಿತ್ಸೆಗೆ ಮಹಿಳೆ ಬಲಿ, 4 ಲಕ್ಷ ರೂ ಪಡೆದು ಟ್ರೀಟ್‌ಮೆಂಟ್!

ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸಿವಿಲ್ ಸರ್ಜನ್ ಶಾಹಿದ್ ಪಾಲ್ ಅವರು ಗಂಗಾಧರ್ (Gangadhar Singh) ಅವರ ಕಣ್ಣನ್ನು ಆಪರೇಷನ್ ಮಾಡಿದ ವೈದ್ಯೆಯ ತನಿಖೆ ಆರಂಭಿಸಿದ್ದಾರೆ. ಆಕೆ ಅಸಲಿ ಕಣ್ಣನ್ನು ತೆಗೆದು ನಕಲಿ ಕಣ್ಣು ಹಾಕಿದ್ದು ಸ್ಪಷ್ಟವಾಗಿದೆ. ಇದಕ್ಕೆ ಕಾರಣವೇನು, ಇದರ ಹಿಂದಿನ ಉದ್ದೇಶವೇನು ಎನ್ನುವ ಬಗ್ಗೆ ವಿಚಾರಣೆ ನಡೆಯಬೇಕಿದೆ. ಇದೊಂದು ಗಂಭೀರ ಅಪರಾಧ. ವಿಚಾರಣೆಯ ಬಳಿಕ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ವೆಬ್‌ ಕ್ಯಾಮೆರಾ ಚಿಕಿತ್ಸೆ, 400 ಮಹಿಳೆಯರ ಗುಪ್ತಾಂಗದ ವಿಡಿಯೋ ಸೆರೆ ಹಿಡಿದ ನಕಲಿ ಸ್ತ್ರೀರೋಗ ತಜ್ಞ!

ತನಿಖೆಗೆ ಆದೇಶ: ಈ ವೇಳೆ ಗಂಗಾಧರ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಂಗನವಾಡಿ ಕೆಲಸಗಾರ್ತಿ ಸೋಮಾವರಿ ಮಾಲಿ (Somvari Mali) ಎಂದು ಹೇಳಲಾಗಿದೆ. ಗಂಗಾಧರ್‌ ಸಿಂಗ್‌ ತುರಿಕೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದ ವೇಳೆ 2 ತಿಂಗಳು ಅವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಈ ಸಮಯದಲ್ಲೂ ಇದು ಕಣ್ಣು ನಕಲಿ ಎನ್ನುವುದು ಗೊತ್ತಾಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರ್ಖಂಡ್‌ ಆರೋಗ್ಯ ಸಚಿವ ಬನ್ನಾ ಗುಪ್ತಾ (Jarkhand Health Minister Banna Gupta) ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದಾರೆ.

Follow Us:
Download App:
  • android
  • ios