Asianet Suvarna News Asianet Suvarna News

ಭಾರತದ ಆಕ್ಸಿಜನ್ ಸಮಸ್ಯೆಗೆ IIT ಬಾಂಬೆ ಪರಿಹಾರ; ನೈಟ್ರೋಜನ್‌ನಿಂದ ಆಕ್ಸಿಜನ್ ಘಟಕ !

ಕೊರೋನಾ 2ನೇ ಅಲೆ ಭೀಕರತೆಗೆ ದೇಶದಲ್ಲಿ ಆಕ್ಸಿಜನ್ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಸೋಂಕಿತರ ಚಿಕಿತ್ಸೆಗೆ ಆಮ್ಲಜನ ಸಿಗುತ್ತಿಲ್ಲ. ಪೂರೈಕೆ ಯಾಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳು ಭಾರತದಲ್ಲಿ ತಲೆದೋರಿದೆ. ಆಕ್ಸಿಜನ್ ಪೂರೈಕೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಐಐಟಿ ಬಾಂಬೆ ಆಕ್ಸಿಜನ್ ಕೊರತೆ ಪರಿಹರಿಸಲು ಹೊಸ ಸೂತ್ರ ಕಂಡುಹಿಡಿದೆ.

IIT Bombay solve Oxygen shortage by converting Nitrogen Generator into Oxygen Generator ckm
Author
Bengaluru, First Published Apr 30, 2021, 3:17 PM IST

ಮುಂಬೈ(ಏ.30): ಕೊರೋನಾ ವೈರಸ್ ದೇಶದಲ್ಲಿ ತಂದಿಟ್ಟಿರುವ ಸಮಸ್ಯೆ ಒಂದೆರಡಲ್ಲ. ಸೋಂಕಿತರ ಚಿಕಿತ್ಸೆ ಅತ್ಯಂತ ಸವಾಲಾಗುತ್ತಿದೆ. ಅದರಲ್ಲೂ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ದೇಶ ಹಾಗೂ ವಿದೇಶದಿಂದ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇದೀಗ ಬಾಂಬೆ ಐಐಟಿ ಆಕ್ಸಿಜನ್ ಕೊರತೆ ನೀಗಿಸಲು ಹೊಸ ಸೂತ್ರ ನೀಡಿದೆ.

ಕೋವಿಡ್ ರಿಸ್ಕ್ : ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್

COVID-19 ರೋಗಿಗಳ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಐಐಟಿ ಬಾಂಬೆ ನೈಟ್ರೋಜನ್ ಜನರೇಟರನ್ನು ಆಕ್ಸಿಜನ್ ಜನರೇಟರ್ ಆಗಿ ಪರಿವರ್ತಿಸಲಾಗಿದೆ. ಐಐಟಿ ಬಾಂಬೆಯಲ್ಲಿ ನಡೆದ ಆರಂಭಿಕ ಪರೀಕ್ಷೆಗಳು ಯಶಸ್ವಿಯಾಗಿದೆ. 

ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!

ಶೇಕಡಾ 93 ರಿಂದ- 96ರಷ್ಟು ಶುದ್ಧ ಅನಿಲ ಆಮ್ಲಜನಕ ಈ ಪರಿವರ್ತನೆಯಲ್ಲಿ ಉತ್ಪಾದಿಸಲಾಗುತ್ತದೆ. ಈ ಆಮ್ಲಜನಕವನ್ನು ಆಗತ್ಯವಿರುವ ಕೋವಿಡ್ ಆಸ್ಪತ್ರೆಗಳಿಗೆ ಪೂರೈಸಲು ಐಐಟಿ ಬಾಂಬೆ ನಿರ್ಧರಿಸಿದೆ. 

ಈಗಾಗಲೇ ಸ್ಥಾಪಿಸಲಾಗಿರುವ ನೈಟ್ರೋಜನ್(ಸಾರಜನಕ) ಘಟಕವನ್ನು ಟ್ಯೂನ್ ಮಾಡಿ, ಕಾರ್ಬನ್‌ನಿಂದ ಜಿಯಿಲೈಟ್‌ಗೆ ಪರಿವರ್ತಿಸಿ, ಆಮ್ಲಜನಕ ಉತ್ಪಾದಿಸಲಾಗುತ್ತದೆ ಎಂದು ಈ ಯೋಜನೆ ನೇತೃತ್ವ ವಹಿಸಿರುವ ಐಐಟಿ ಬಾಂಬೆಯ ಡೀನ್ (ಆರ್ & ಡಿ) ಪ್ರೊ. ಮಿಲಿಂದ್ ಅಟ್ರೆ ಹೇಳಿದ್ದಾರೆ.

ವಾತಾವರಣದಿಂದ ಗಾಳಿಯನ್ನು ಕಚ್ಚಾ ವಸ್ತುವಾಗಿ ತೆಗೆದುಕೊಳ್ಳುವ ಇಂತಹ ನೈಟ್ರೋಜನ್ ಘಟಕಗಳು ಭಾರತದಾದ್ಯಂತದ ವಿವಿಧ ಕೈಗಾರಿಕಾ ಸ್ಥಾವರಗಳಲ್ಲಿ ಲಭ್ಯವಿದೆ. ಆದ್ದರಿಂದ, ಅವುಗಳಲ್ಲಿ ಪ್ರತಿಯೊಂದನ್ನೂ ಆಮ್ಲಜನಕ ಉತ್ಪಾದಕವನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ, ಇದರಿಂದಾಗಿ ಪ್ರಸ್ತುತ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಮಗೆ ಸಹಾಯವಾಗುತ್ತದೆ ಎಂದು ಅಟ್ರೆ ಹೇಳಿದ್ದಾರೆ.

ಈ ಆಮ್ಲಜನಕ ಉತ್ಪಾದಕ ಘಟಕ ಪರಿವರ್ತನೆ ಕಾರ್ಯವನ್ನು ಟಾಟಾ ಕನ್ಸಲ್‌ಟೆನ್ಸಿ ಹಾಗೂ ಸ್ಪಾನ್‌ಟೆಕ್ ಎಂಜಿನಿಯರ್ ಸಹಯೋಗದಲ್ಲಿ ಈ ಘಟಕ ಪರಿವರ್ತನೆ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ

"

#ANCares #IndiaFightsCorona

Follow Us:
Download App:
  • android
  • ios