ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹ ಧನ | ಕೊರೋನಾ ಸೇವೆಯಲ್ಲಿ ಕೈಜೋಡಿಸಿರೋ ವೈದ್ಯಕೀಯ ವಿದ್ಯಾರ್ಥಿಗಳು

ದೆಹಲಿ(ಮೇ.05): COVID-19 ರ ಎರಡನೇ ಅಲೆ ಭಾರತದ ಆರೋಗ್ಯ ಮೂಲಸೌಕರ್ಯಗಳ ಮೇಲೆ ಭಾರಿ ಒತ್ತಡವನ್ನು ಬೀರಿದೆ. ಆಸ್ಪತ್ರೆಗಳು ತುಂಬಿವೆ, ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವವರು ಮಿತಿ ಮೀರಿ ಕೆಲಸ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆಗಳನ್ನು ನಿಭಾಯಿಸಲು, COVID-19 ವಿರುದ್ಧದ ಯುದ್ಧದಲ್ಲಿ ವೈದ್ಯಕೀಯ ಇಂಟರ್ನಿಗಳ ಸಹಾಯವನ್ನು ಪಡೆಯಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ.

'ಫೇಸ್‌ಬುಕ್‌, ಟ್ವೀಟರ್‌ ಬಿಟ್ಟು ಕಾಂಗ್ರೆಸ್‌ ಬೀದಿಗೆ ಇಳಿಯಬೇಕು'

ಕೇಂದ್ರದ ಘೋಷಣೆಯ ಒಂದು ದಿನದ ನಂತರ, ಹಿಮಾಚಲ ಪ್ರದೇಶ ಸರ್ಕಾರವು ಎಂಬಿಬಿಎಸ್, ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಗುತ್ತಿಗೆ ವೈದ್ಯರನ್ನು COVID-19 ಕರ್ತವ್ಯಕ್ಕೆ ನಿಯೋಜಿಸಲು ನಿರ್ಧರಿಸಿದೆ.

ಹಿಮಾಚಲ ಪ್ರದೇಶ ಸರ್ಕಾರವು ತನ್ನ ಆದೇಶದಲ್ಲಿ 4 ಮತ್ತು 5 ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಗುತ್ತಿಗೆ ವೈದ್ಯರು ಮತ್ತು ಶುಶ್ರೂಷಾ ವಿದ್ಯಾರ್ಥಿಗಳು 2021 ರ ಜೂನ್ 30 ರವರೆಗೆ COVID-19 ಕರ್ತವ್ಯದಲ್ಲಿ ನಿಯೋಜಿಸಲ್ಪಡುತ್ತಾರೆ ಎಂದು ಹೇಳಿದೆ.