ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳು ಈ ಬಾರಿಯ ಚಳಿಗೆ ತತ್ತರಿಸಿ ಹೋಗಿದ್ದು, ಅಲ್ಲಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದೆಯಲ್ಲದೇ ದಟ್ಟ ಮಂಜಿನಿಂದ ಗೋಚರತೆಯ ಪ್ರಮಾಣ ಕುಸಿಯುತ್ತಿದೆ. 

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳು ಈ ಬಾರಿಯ ಚಳಿಗೆ ತತ್ತರಿಸಿ ಹೋಗಿದ್ದು, ಅಲ್ಲಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದೆಯಲ್ಲದೇ ದಟ್ಟ ಮಂಜಿನಿಂದ ಗೋಚರತೆಯ ಪ್ರಮಾಣ ಕುಸಿಯುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಮುಂಜಾನೆ ದೆಹಲಿಯಲ್ಲಿ ಕೇವಲ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬಾರಿಯ ಚಳಿಗಾಲದಲ್ಲೇ ಅತೀ ಕನಿಷ್ಠ ತಾಪಮಾನವಾಗಿದೆ. ಕಾಶ್ಮೀರದಲ್ಲಿ ಮೈನಸ್ 4.2 ಡಿಗ್ರಿ, ರಾಜಸ್ಥಾನದಲ್ಲಿ 3 ಡಿಗ್ರಿಗೆ ಉಷ್ಣಾಂಶ ಕುಸಿದಿದೆ. ಹೀಗಾಗಿ ದಿಲ್ಲಿ ಹಾಗೂ ಉತ್ತರ ಭಾರತದ 100 ವಿಮಾನಗಳ ಸಂಚಾರ ವಿಳಂಬವಾಗಿದ್ದು, 3-4 ತಾಸು ತಡವಾಗಿ ಸಂಚರಿಸಿವೆ. ರೈಲು-ರಸ್ತೆ ಸಂಚಾರದಲ್ಲೂ ವ್ಯತ್ಯಾಯವಾಗಿದೆ. 

ವಾಹನ ಸವಾರರೇ ಎಚ್ಚರ: ಚಳಿಗಾಲದಲ್ಲೇ ರಸ್ತೆ ಅಪಘಾತ ಹೆಚ್ಚು..!

ಈ ನಡುವೆ, ಚಳಿಗಾಲದ ರಜೆ ಬಳಿಕ ದೆಹಲಿಯಲ್ಲಿ ಶಾಲೆಗಳು ಸೋಮವಾರದಿಂದ ಪುನರಾರಂಭ ಆಗುತ್ತಿದ್ದರೂ, ಚಳಿ ಕಾರಣ ಬೆಳಗ್ಗೆ 9 ಗಂಟೆ ನಂತರವೇ ಶಾಲೆ ಆರಂಭಿಸಬೇಕು. ಅದಕ್ಕೂ ಮುನ್ನ ಆರಂಭಿಸ ಕೂಡದು. ಸಂಜೆ 5 ಗಂಟೆಯೊಳಗೆ ತರಗತಿ ಮುಗಿಸಬೇಕು ಎಂದು ಸೂಚಿಸಲಾಗಿದೆ. 

ಕಾಶ್ಮೀರದಲ್ಲೂ ಕೊರೆವ ಚಳಿ:

ಜಮ್ಮು- ಕಾಶ್ಮೀರದಲ್ಲೂ ತಾಪಮಾನ ಪಾತಾಳಕ್ಕೆ ಕುಸಿದಿದ್ದು, ಶ್ರೀನಗರದಲ್ಲಿ ಶನಿವಾರ ರಾತ್ರಿ ಕನಿಷ್ಠ ತಾಪಮಾನ ಮೈನಸ್ 4.2 ಡಿಗ್ರಿ ದಾಖಲಾಗಿದೆ. 

ರಾಜಸ್ಥಾನದಲ್ಲೂ ಶೀತ ಅಲೆ:

ರಾಜಸ್ಥಾನದ ಪಿಲಾನಿಯಲ್ಲಿ 3 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು ಇದು ರಾಜ್ಯದಲ್ಲೇ ಅತ್ಯಂತ ಶೀತ ಪ್ರದೇಶವಾಗಿದೆ.

ಡೀಸೆಲ್ ವಾಹನ ನಿಷೇಧ
ನವದೆಹಲಿ: ದೆಹಲಿಯ ವಾಯುಗುಣ ಮಟ್ಟವು ಕೊರೆವ ಚಳಿ ಕಾರಣ ಮತ್ತೆ ಕುಸಿಯುತ್ತಿದ್ದು ನಗರದಲ್ಲಿ ವಾಯುಗುಣಮಟ್ಟವು ಭಾನುವಾರ ಮುಂಜಾನೆ 10 ಮತ್ತು 11 ಗಂಟೆಗೆ ಕ್ರಮವಾಗಿ 457 ಮತ್ತು 458 ದಾಖಲಾಗಿದೆ. ಇದು 'ಕಳಪೆ' ವಾಯುಗುಣ ಮಟ್ಟ. ಹೀಗಾಗಿ ಕೇಂದ್ರ ಸರ್ಕಾರವು ಎಲ್ಲ ಬಿಎಸ್-3 ಪೆಟ್ರೋಲ್ ಚಾಲಿತ ಹಾಗೂ ಬಿಎಸ್ ಬಿಎಸ್-4 ಡೀಸೆಲ್ ಚಾಲಿತ 4 ಚಕ್ರಗಳ ವಾಹನ ಸಂಚಾರವನ್ನು ನಿಷೇಧಿಸಿದೆ.

ಉತ್ತರದಲ್ಲಿ ತೀವ್ರ ಚಳಿ: ಕೆಲವೆಡೆ ಶೂನ್ಯ ತಾಪಮಾನ, ಜಮ್ಮುನಲ್ಲಿ 2.2 ಡಿಗ್ರಿ