ಹಿಂದೂ ಗೆಳೆಯನೊಂದಿಗೆ ಮುಸ್ಲಿಂ ಹುಡುಗಿಯೊಬ್ಬಳು ಓಡಿ ಹೋದ ಹಿನ್ನೆಲೆ ಯುವತಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಬಂದು ಗಲಾಟೆ ಮಾಡಿದ ಘಟನೆ ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ನಡೆದಿದೆ.

ವಡೋದರ: ಹಿಂದೂ ಗೆಳೆಯನೊಂದಿಗೆ ಮುಸ್ಲಿಂ ಹುಡುಗಿಯೊಬ್ಬಳು ಓಡಿ ಹೋದ ಹಿನ್ನೆಲೆ ಯುವತಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಬಂದು ಗಲಾಟೆ ಮಾಡಿದ ಘಟನೆ ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ನಡೆದಿದೆ. ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳ ಹಿಂದೆ ಓಡಿ ಹೋಗಿದ್ದಾರೆ. ಅವರು ತಮ್ಮ ವಿವಾಹವನ್ನು ನೋಂದಣಿ ಮಾಡಿಸುವುದಕ್ಕಾಗಿ ವಡೋದರ ನಗರದಲ್ಲಿರುವ ವಿವಾಹ ನೋಂದಣಿ ಕಚೇರಿಗೆ ಆಗಮಿಸಿದ್ದು, ಈ ವಿಚಾರ ತಿಳಿದ ಹುಡುಗಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಆಗಮಿಸಿ ದಾಂಧಲೆ ನಡೆಸಿದ್ದಾರೆ. 

Add Asianetnews Kannada as a Preferred SourcegooglePreferred

ಯುವತಿ ಮನೆ ಬಿಟ್ಟು ಹೋದ ನಂತರ ಯುವತಿ ಮನೆಯವರು ಕರ್ಜಾನ್ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಯುವತಿಯ ಕುಟುಂಬಕ್ಕೆ ತಮ್ಮ ಮನೆ ಮಗಳು ಹಿಂದೂ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಇವರಿಬ್ಬರು ಓಡಿ ಹೋಗಿದ್ದರು. ಹೀಗೆ ಓಡಿ ಹೋದ ಅಂತರ್‌ಧರ್ಮಿಯ (Inter religion) ಜೋಡಿ ವಡೋದರಾದ ಕುಬೇರ ಭವನದ (Kuber Bhavan) ಆರನೇ ಮಹಡಿಯಲ್ಲಿರುವ ವಿವಾಹ ನೋಂದಣಿ ಕಚೇರಿಗೆ ಆಗಮಿಸುವವರಿದ್ದರು. ಈ ವಿಚಾರ ತಿಳಿದು ಅಲ್ಲಿ ಹುಡುಗಿ ಕುಟುಂಬದವರು ಆಗಮಿಸಿ ಗಲಾಟೆ ಮಾಡಿದ್ದಾರೆ. ಕೂಡಲೇ ಪೊಲೀಸರು ಆಗಮಿಸಿ ಈ ಅಂತರ್‌ಧರ್ಮೀಯ ಜೋಡಿಗೆ ರಕ್ಷಣೆ ನೀಡಿದ್ದಾರೆ. ಇಬ್ಬರು ವಯಸ್ಕರಾಗಿದ್ದು, ಅವರನ್ನು ರಾವೋಪುರ ಪೊಲೀಸರು ರಕ್ಷಣೆಯೊಂದಿಗೆ ಕಟ್ಟಡದ 9ನೇ ಮಹಡಿಗೆ ಕರೆದೊಯ್ದಿದ್ದಾರೆ. ಈ ವೇಳೆ ಮುಸ್ಲಿಂ ಸಂಘಟನೆಯೊಂದರ ಅನೇಕ ಜನರು ಅವರನ್ನು ಹಿಂಬಾಲಿಸಿ ಬಂದಿದ್ದಾರೆ.

ಹಿಂದೂ- ಮುಸ್ಲಿಂ ವಿವಾಹ : ಪೋಷಕರ ವಿರೋಧಕ್ಕೆ ಹೆದರಿ ನೇಣಿಗೆ ಶರಣಾದ ಪ್ರೇಮಿಗಳು

ನಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ, ಆಕೆಯ ಕುಟುಂಬದವರು ದಾಖಲಿಸಿದ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವತಿಯ ಹೇಳಿಕೆಯನ್ನು ಪಡೆದಿದ್ದಾರೆ. ಇತ್ತ ಅಲ್ಲಿಗೆ ಬಂದ ಮುಸ್ಲಿಂ ಸಂಘಟನೆಗಳು ಯುವತಿಯ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನು ನಂತರ ನಾರಿ ಸಂರಕ್ಷಣ ಗೃಹಕ್ಕೆ (Nari Sanrakshan Gruh)ಕಳುಹಿಸಲಾಗಿದೆ. 

ಇದಕ್ಕೂ ಮೊದಲು ಜಮಾನಗರ (Jamnagar) ಜಿಲ್ಲೆಯ ಕಲವಾಡ ತಾಲೂಕಿನ ಹಸ್ತಾಲ್ ಗ್ರಾಮದಲ್ಲಿ (Hasthal village) ಇದೇ ರೀತಿಯ ಅಂತರ್‌ಧರ್ಮಿಯ ನಂಬಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ, ಮುಸ್ಲಿಂ ಹುಡುಗಿ ಮುಸ್ಕಾನ್ ಯೂಸುಫ್ ಅವರನ್ನು ಮದುವೆಯಾದ ಹಿಂದೂ ಯುವಕ ಹಿರೇನ್ ಎಂಬಾತನ ತಂದೆ, ಕಿಶೋರ್ ಕರ್ಸರಿಯಾ (Kishore Karsariya) ಮತ್ತು ಸಹೋದರಿ ಮೇಲೆ ಹಲ್ಲೆ ನಡೆಸಿ ಗ್ರಾಮಕ್ಕೆ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಯಿತು. ಈ ಜೋಡಿ ರಾಜ್‌ಕೋಟ್‌ಗೆ ಓಡಿಹೋಗಿ ಅಲ್ಲಿ ಜೀವನ ನಡೆಸಲು ಶುರು ಮಾಡಿದ್ದರು.

ಕಾಶಿ ವಿಶ್ವನಾಥನಿಗೆ ಅಕ್ಬರಿ ಪೇಟ ತಯಾರಿಸಿ ತೊಡಿಸುವ ಘಿಯಾಸುದ್ದೀನ್!