Farm Bill| ಮತ್ತೆ ಜಾರಿಯಾಗುತ್ತಾ ಕೃಷಿ ಕಾನೂನು?: ಸೂಚನೆ ಕೊಟ್ಟ ರಾಜಸ್ಥಾನ ರಾಜ್ಯಪಾಲ!
* ಕೃಷಿ ಕಾನೂನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ
* ಕೃಷಿ ಕಾನೂನು ಮತ್ತೆ ಜಾರಿಗೊಳಿಸುವ ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ
ಭದೋಹಿ(ನ.21). ಮೂರು ಹೊಸ ಕೃಷಿ ಕಾನೂನುಗಳನ್ನು (Farm Law) ಹಿಂಪಡೆಯುವುದಾಗಿ ಪ್ರಧಾನಿ ಮೋದಿ (Narendra Modi) ಶುಕ್ರವಾರ ಘೋಷಿಸಿದ್ದಾರೆ. ಅಂದಿನಿಂದ, ರೈತರು ಮತ್ತು ಸರ್ಕಾರದ ನಡುವೆ ಒಂದು ವರ್ಷದ ಕಾಲದ ಬಿಕ್ಕಟ್ಟು ಕೊನೆಗೊಳ್ಳುವ ಹಂತದಲ್ಲಿದೆ. ಏತನ್ಮಧ್ಯೆ, ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಮರು ಜಾರಿಗೊಳಿಸಬಹುದು ಎಂದು ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ (Rajasthan Governor Kalraj Mishra)ಹೇಳಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವ ಘೋಷಣೆಯು ಸಕಾರಾತ್ಮಕ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು. ಇದೀಗ ಸಮಯವು ಅನುಕೂಲಕರವಾಗಿಲ್ಲ ಆದ್ದರಿಂದ ಈ ಮಸೂದೆ ಮತ್ತೆ ಬರಬಹುದು. ಈ ಹಿಂದೆ ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಅವರು, ಬಿಲ್ಗಳನ್ನು ತಯಾರಿಸುತ್ತಾರೆ, ಹಿಂಪಡೆಯುತ್ತಾರೆ ಮತ್ತು ಬಳಿಕ ಮತ್ತೆ ಜಾರಿಗೊಳಿಸುತ್ತಾರೆ ಎಂದು ಹೇಳಿದ್ದರು. ಇನ್ನು ಸಂಸದರ ಮತ್ತು ರಾಜ್ಯಪಾಲರ ಈ ಹೇಳಿಕೆಗೂ ಮೊದಲೇ ರೈತರು ಧರಣಿ ಹಿಂಪಡೆಯುವುದಿಲ್ಲ ಎಂದಿದ್ದರು. ಈ ನಿಟ್ಟಿನಲ್ಲಿ ಶನಿವಾರವೂ ಸಭೆ ನಡೆಸಿದಿದೆ. ಇನ್ನು ಯುನೈಟೆಡ್ ಕಿಸಾನ್ ಮೋರ್ಚಾದ (United Kisan Morcha) ಬ್ಯಾನರ್ ಅಡಿಯಲ್ಲಿ ಭಾನುವಾರವೂ ರೈತರ ಸಮಾವೇಶ ನಡೆಯಲಿದೆ. ಇಂದಿನ ಸಭೆಯಲ್ಲಿ ಧರಣಿ ಅಂತ್ಯಗೊಳಿಸುವ ಅಥವಾ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ರೈತ ಮುಖಂಡ ಶಿವುಕುಮಾರ ಕಕ್ಕಾಜಿ ಹೇಳಿದ್ದಾರೆ. ಎಂಎಸ್ಪಿ ಗ್ಯಾರಂಟಿ ಕಾಯ್ದೆಯನ್ನು ಜಾರಿಗೆ ತರುವುದು ನಮ್ಮ ಆದ್ಯತೆಯಾಗಿದೆ.
ಲಾಭದ ಕಾನೂನು ಎಂದು ರೈತರಿಗೆ ಅರ್ಥವಾಗಿಲ್ಲ
ಈ ಮೂರು ಕೃಷಿ ಕಾನೂನುಗಳನ್ನು ರೈತರ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದು ಕಲ್ರಾಜ್ ಮಿಶ್ರಾ ಹೇಳಿದ್ದಾರೆ. ಇದು ಅವರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಆದರೆ ರೈತರಿಗೆ ಇದರ ಪ್ರಯೋಜನಗಳನ್ನು ವಿವರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೃಷಿ ಕಾನೂನನ್ನು ಹಿಂಪಡೆಯುವಂತೆ ರೈತರ ಕಡೆಯಿಂದ ಆಂದೋಲನ ನಡೆದಿದ್ದು, ಇದೀಗ ಕೊನೆಗೊಳ್ಳುವ ವಿಚಿತ್ರ ಪರಿಸ್ಥಿತಿ ದೇಶದಲ್ಲಿ ಉದ್ಭವಿಸಿದೆ.
ಒಂದು ವರ್ಷದಿಂದ ಚಳುವಳಿ ನಡೆಯುತ್ತಿದೆ
ಕೃಷಿ ಕಾನೂನುಗಳ ವಿರುದ್ಧ ರೈತರ ಚಳುವಳಿ ಒಂದು ವರ್ಷದಿಂದ ನಡೆಯುತ್ತಿದೆ. ಇದುವರೆಗೂ ರೈತರು ಧರಣಿಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ. ಇಂದು ಕೂಡ ಅವರ ಸಭೆ ನಡೆಯಲಿದ್ದು, ಅದರಲ್ಲಿ ಮುಂದಿನ ಕಾರ್ಯತಂತ್ರ ನಿರ್ಧಾರವಾಗಲಿದೆ. ರೈತರ ಆಂದೋಲನದಿಂದಾಗಿ ಸರ್ಕಾರ ಕಾನೂನನ್ನು ಹಿಂಪಡೆದಿದೆ ಎಂದು ಕಲ್ರಾಜ್ ಮಿಶ್ರಾ ಹೇಳಿದ್ದಾರೆ. ನಂತರ ಈ ವಿಷಯದಲ್ಲಿ ಕಾನೂನು ಮಾಡಬೇಕಾದರೆ ಕಾನೂನು ರೂಪಿಸಲಾಗುವುದು ಎಂದಿದ್ದಾರೆ.
ಸಾಕ್ಷಿ ಮಹಾರಾಜ್ ಹೇಳಿದ್ದೇನು?
2022ರಲ್ಲಿ ಯುಪಿಯಲ್ಲಿ ಬಿಜೆಪಿ 300 ದಾಟಲಿದೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದರು. ಕೃಷಿ ಮಸೂದೆ ಹಿಂಪಡೆಯುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ತಥಾಕಥಿತ ರೈತರ ಬಾಯಿಂದ ಪಾಕಿಸ್ತಾನ್ ಜಿಂದಾಬಾದ್, ಖಲಿಸ್ತಾನ್ ಜಿಂದಾಬಾದ್ ಎಂಬ ಅಪವಿತ್ರ ಘೋಷಣೆಗಳು ಎದ್ದಿದ್ದವು. ಇದಾದ ನಂತರವೂ ಮೋದಿಜಿ ದೊಡ್ಡ ಹೃದಯ ತೋರಿದರು. ಬಿಲ್ಗಳು ಬರುತ್ತಲೇ ಇರುತ್ತವೆ. ಕೆಟ್ಟದಾಗುತ್ತಲೇ ಇರುತ್ತವೆ. ಆಗ ಮತ್ತೆ ಬರುತ್ತಾರೆ. ಮೋದಿಯವರಿಗೆ ರಾಷ್ಟ್ರವೇ ಮೊದಲನೆಯದು. ಅವರು ಕೃಷಿ ಮಸೂದೆ ಮತ್ತು ರಾಷ್ಟ್ರ ಎರಡರಿಂದಲೂ ರಾಷ್ಟ್ರವನ್ನು ಆಯ್ಕೆ ಮಾಡಿದರು.