ಮನೆಯಲ್ಲಿ ನಾಯಿಗಳನ್ನೇ ಸೆಕ್ಯುರಿಟಿಯಾಗಿ ಇರಿಸಿಕೊಂಡು ನಕಲಿ ಮದ್ಯ ತಯಾರಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂದಿದ್ದಾರೆ.

ಸುಲ್ತಾನ್‌ ಬತೇರಿ (ಫೆ.7): ಪುತ್ತೆನ್‌ಕುನ್ನಲ್ಲಿ ನಕಲಿ ಮದ್ಯ ತಯಾರಿಕಾ ಘಟಕ ಪತ್ತೆಯಾಗಿದೆ. ಮಾಹಿ ಮದ್ಯವನ್ನು ಖರೀದಿಸಿ ಬಾಟಲ್ ಮಾಡ್ತಿದ್ದ ಘಟಕವನ್ನು ಅಬಕಾರಿ ಇಲಾಖೆ ಪತ್ತೆ ಹಚ್ಚಿದೆ. ಘಟಕ ನಡೆಸ್ತಿದ್ದ ಚಿತಲಯಂ ನಿವಾಸಿ ರಾಜೇಶ್ ಪರಾರಿಯಾಗಿದ್ದಾನೆ. ಮದ್ಯ ಬಾಟಲ್ ಮಾಡ್ತಿದ್ದ ಮನೆಯಲ್ಲಿ ಸೆಕ್ಯೂರಿಟಿಗಾಗಿ ಕೆಲವು ನಾಯಿಗಳನ್ನು ಸಾಕಿದ್ದ. ಅಬಕಾರಿ ಇಲಾಖೆಗೆ ಸಿಕ್ಕಿದ್ದ ಮಾಹಿತಿ ಆಧಾರದ ಮೇಲೆ ನಕಲಿ ಮದ್ಯ ತಯಾರಿಕಾ ಘಟಕ ಪತ್ತೆಯಾಗಿದೆ. 70ಬಾಟಲ್ ಮಾಹಿ ಮದ್ಯದ ಜೊತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ: ಅದೇ ಸಮಯದಲ್ಲಿ, ಕಣ್ಣೂರು ಪಾಡಿಯೋಟ್ಟುಚಾಲ್‌ನಲ್ಲಿ 70 ಬಾಟಲ್ ಮಾಹಿ ಮದ್ಯದ ಜೊತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಡಿಯೋಟ್ಟುಚಾಲ್ ನಿವಾಸಿ ಲಕ್ಷ್ಮಣನ್ ಬಂಧಿತ ವ್ಯಕ್ತಿ. ಮಾರಾಟಕ್ಕಾಗಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 70ಬಾಟಲ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಗೆ ಸಿಕ್ಕಿದ್ದ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಲಾಗಿತ್ತು.

Add Asianetnews Kannada as a Preferred SourcegooglePreferred

ಮಹಿಳೆಯನ್ನು ತಿಂದು ತೇಗಿದ್ದ ನರಭಕ್ಷಕ ಹುಲಿ ಸಾವು, ಅನುಮಾನ ಹೆಚ್ಚಿಸಿದ ಘಟನೆ

ಕೇರಳದಲ್ಲಿ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ತೀವ್ರವಾಗಿದೆ. ನಾಲ್ಕು ದಿನಗಳ ಹಿಂದೆ ಕನಿಪಲ್ಲಯೂರ್‌ನಲ್ಲೂ ಇದೇ ರೀತಿ ದಾಳಿಯಾಗಿತ್ತು. ತ್ರಿಶೂರ್‌ನಲ್ಲಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕಣಿಪಳ್ಳಿಯೂರಿನ ವ್ಯಕ್ತಿಯೊಬ್ಬನನ್ನು ಅಬಕಾರಿ ವಿಶೇಷ ದಳ ಬಂಧಿಸಿತ್ತು. ವಿಶೇಷ ದಳದ ಅಬಕಾರಿ ನಿರೀಕ್ಷಕ ಸುದರ್ಶನ ಕುಮಾರ್ ಮತ್ತು ಅವರ ತಂಡವು ಕಣಿಪಳ್ಳಿಯೂರಿನ ಕಂಡಿರುತಿಯ ಹರಿಶಿ (40) ಅವರನ್ನು ಬಂಧಿಸಿದೆ. ತಪಾಸಣೆಯ ಸಮಯದಲ್ಲಿ, ಅಬಕಾರಿ ತಂಡವು ಆತನಿಂದ ಹತ್ತುವರೆ ಲೀಟರ್ ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದೆ. ಆರೋಪಿಯು ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಸುಳಿವಿನ ಮೇರೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹರೀಶ್ ಅವರನ್ನು ಬಂಧಿಸಲಾಗಿತ್ತು.

ಕೇರಳ ಜನರಿಗೆ 100 ಮನೆ ನಿರ್ಮಿಸಿಕೊಡುವುದಾಗಿ ಕೇಳಿದ ಸಿದ್ದರಾಮಯ್ಯಗೆ, ಪಿಣರಾಯಿ ಖಡಕ್ ಉತ್ತರ!