ಕಳೆದ ವರ್ಷ ಮತ್ತು ಈ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾದ ವಿದ್ಯುನ್ಮಾನ ಮತಯಂತ್ರ ನಿಗದಿತ ಕಾಲಾವಧಿಯಲ್ಲಿ ವಾಪಸ್ ನೀಡದಿದ್ದರೆ, 2022ರ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸುವುದು ಕಷ್ಟ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೊರೆ
ನವದೆಹಲಿ (ಸೆ.03): ಕಳೆದ ವರ್ಷ ಮತ್ತು ಈ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾದ ವಿದ್ಯುನ್ಮಾನ ಮತಯಂತ್ರ (ಇವಿಎಂ)ಮತ್ತು ವಿವಿಪ್ಯಾಟ್ಸ್ಗಳನ್ನು ನಿಗದಿತ ಕಾಲಾವಧಿಯಲ್ಲಿ ವಾಪಸ್ ನೀಡದಿದ್ದರೆ, 2022ರ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸುವುದು ಕಷ್ಟಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಮುಂದಿನ ವರ್ಷ ಪಂಜಾಜ್, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಬೇಕಿದೆ. ನಿಯಮದ ಪ್ರಕಾರ ಚುನಾವಣಾ ಫಲಿತಾಂಶ ಘೋಷಣೆಯಾದ 45 ದಿನಗಳ ವರೆಗೆ ಇವಿಎಂಗಳನ್ನು ಯಾರೂ ಮುಟ್ಟದಂತೆ ಭದ್ರವಾಗಿ ಇರಿಸಬೇಕು. ಈ ಕಾಲಮಿತಿ ಒಳಗಾಗಿ ಮಾತ್ರ ಫಲಿತಾಂಶದ ವಿರುದ್ಧ ಅರ್ಜಿ ಸಲ್ಲಿಸಲು ಅವಕಾಶವಿದೆ.
2023ರ ಅಸೆಂಬ್ಲಿ ಎಲೆಕ್ಷನ್ಗೆ ಸೆ.28ಕ್ಕೆ ಜೆಡಿಎಸ್ ಮೊದಲ ಪಟ್ಟಿ: ಎಚ್ಡಿಕೆ
ಅನಂತರ ಇವಿಎಂಗಳನ್ನು ಮರುಬಳಕೆ ಮಾಡಬಹುದು. ಆದರೆ ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ಮಾಚ್ರ್ನಲ್ಲಿ ನಡೆದ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಪುದುಚೇರಿ, ನವದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶಗಳ ವಿರುದ್ಧ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ಅನಿರ್ದಿಷ್ಟಾವಧಿ ಕಾಲಾವಕಾಶ ನೀಡಿದೆ.
ಹಾಗಾಗಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಕೆಗೆ ನಿಗದಿತ ಕಾಲಾವಧಿ ಮಿತಿ ಹೇರದಿದ್ದರೆ ಇಲ್ಲಿ ಬಳಕೆಯಾದ ಇವಿಎಂಗಳನ್ನು ಮರುಬಳಕೆ ಮಾಡುವಂತಿಲ್ಲ. ಒಟ್ಟು 4.5 ಲಕ್ಷ ಇವಿಎಂಗಳು ಇದೇ ಉದ್ದೇಶದಿಂದ ಭದ್ರತೆಯಲ್ಲಿವೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿದೆ.
