Breaking: ಶರದ್ ಪವಾರ್ಗೆ ಬಿಗ್ ಶಾಕ್, 'ಗಡಿಯಾರ' ಕಳೆದುಕೊಂಡ ಎನ್ಸಿಪಿ ನಾಯಕ!
ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್ ತಮ್ಮ ಪಕ್ಷದ ಚಿನ್ಹೆ ಹಾಗೂ ಹೆಸರನ್ನು ಕಳೆದುಕೊಂಡಿದ್ದಾರೆ. ಇದೀಗ ಪಕ್ಷದ ಚಿನ್ಹೆ ಹಾಗೂ ಹೆಸರಿಗೆ ಅಜಿತ್ ಪವಾರ್ ನಿಜವಾದ ಮಾಲೀಕರಾಗಿದ್ದಾರೆ.
ನವದೆಹಲಿ (ಫೆ.6): ಇಂಡಿಯಾ ಮೈತ್ರಿಯ ನಾಯಕರಾಗಿದ್ದ ಶರದ್ ಪವಾರ್ಗೆ ದೊಡ್ಡ ಹಿನ್ನಡೆಯಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಶರದ್ ಪವಾರ್ ತಾವೇ ಕಟ್ಟಿ ಬೆಳೆಸಿದ ಎನ್ಸಿಪಿ ಪಕ್ಷದ ಚಿನ್ಹೆಯಾದ ಗಡಿಯಾರ ಹಾಗೂ ಎನ್ಸಿಪಿ ಹೆಸರನ್ನು ಕಳೆದುಕೊಂಡಿದ್ದಾರೆ. ಅಜಿತ್ ಪವಾರ್ ಅವರಿಗೆ ಎನ್ಸಿಪಿ ಪಕ್ಷದ ಚಿನ್ಹೆ ಹಾಗೂ ಹೆಸರನ್ನು ಚುನಾವಣಾ ಆಯೋಗ ನೀಡಿದೆ. '6 ತಿಂಗಳಿಗಿಂತ ಹೆಚ್ಚು ಕಾಲ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ವಿಚಾರದ ವಿವಾದವನ್ನು ಚುನಾವಣಾ ಆಯೋಗ ಇತ್ಯರ್ಥ ಮಾಡಿದೆ' ಎಂದು ಚುನಾವಣಾ ಆಯೋಗ ತಿಳಿಸಿದೆ.ಪ್ರಮುಖ ಕಾನೂನು ತಂಡಗಳ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ.ಇದರೊಂದಿಗೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ಪರಿಗಣಿಸಿದಂತಾಗಿದೆ.
ಇದು ಚುನಾವಣಾ ಆಯೋಗ ಶರದ್ ಪವಾರ್ಗೆ ನೀಡಿದ ಬಿಗ್ ಶಾಕ್. ಎಲ್ಲ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎನ್ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಹಕ್ಕಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಹೊಸ ಪಕ್ಷ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಆಯೋಗ ಶರದ್ ಪವಾರ್ ಅವರನ್ನು ಕೇಳಿದೆ. ಈ ಹೆಸರುಗಳನ್ನು ಬುಧವಾರ ಸಂಜೆ 4 ಗಂಟೆಯೊಳಗೆ ನೀಡಬೇಕು ಎಂದು ತಿಳಿಸಿದೆ.
ಇಂಡಿಯಾ ಕೂಟದ ಸಂಚಾಲಕರಾಗಿ ಬಿಹಾರ ಸಿಎಂ: ಮುನಿಸಿಕೊಂಡ ನಿತೀಶ್ರ ಸಮಾಧಾನಿಸುವ ಯತ್ನ?
ತನ್ನ ನಿರ್ಧಾರ ಮಾಡುವ ಮುನ್ನ ಆಯೋಗವು ಅರ್ಜಿಯ ಕೆಲವು ಪರೀಕ್ಷೆಗಳನ್ನು ಅನುಸರಿಸಿತು, ಇದರಲ್ಲಿ ಪಕ್ಷದ ಗುರಿಗಳು ಮತ್ತು ಉದ್ದೇಶಗಳ ಪರೀಕ್ಷೆ, ಪಕ್ಷದ ಸಂವಿಧಾನದ ಪರೀಕ್ಷೆ ಮತ್ತು ಸಾಂಸ್ಥಿಕ ಮತ್ತು ಶಾಸಕಾಂಗ ಬಹುಮತದ ಪರೀಕ್ಷೆಯನ್ನು ಒಳಗೊಂಡಿದೆ.
ಖರ್ಗೆ ಪ್ರಧಾನಿ ಅಭ್ಯರ್ಥಿಗೆ ಇಂಡಿಯಾದಲ್ಲೀಗ ಭಿನ್ನ ರಾಗ, ಶರದ್ ಪವಾರ್ ಅಪಸ್ವರ
ಚುನಾವಣಾ ಆಯೋಗದ ಪ್ರಕಾರ, ಶರದ್ ಪವಾರ್ ಬಣವು ಸರಿಯಾದ ಸಮಯಕ್ಕೆ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ನಿರ್ಧಾರ ಅವರ ಪರವಾಗಿ ಬಂದಿಲ್ಲ. ಮಹಾರಾಷ್ಟ್ರದಿಂದ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗೆ ಗಡುವನ್ನು ಗಮನದಲ್ಲಿಟ್ಟುಕೊಂಡು, ಶರದ್ ಪವಾರ್ ಬಣಕ್ಕೆ ಚುನಾವಣಾ ನೀತಿ ನಿಯಮಗಳು 1961 ರ ನಿಯಮ 39AA ಅನ್ನು ಅನುಸರಿಸಲು ವಿಶೇಷ ರಿಯಾಯಿತಿ ನೀಡಲಾಗಿದೆ. ಹೊಸ ಪಕ್ಷದ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಅವರನ್ನು ಕೇಳಲಾಗಿದೆ. ಫೆಬ್ರವರಿ 7 ರ ಸಂಜೆಯ ಒಳಗಾಗಿ ಈ ಹೆಸರನ್ನು ತಿಳಿಸುವಂತೆ ಹೇಳಿದೆ.
ಅಜಿತ್ ಪವಾರ್ ಬಣದ ಪರ ಹಲವು ವಕೀಲರು ವಾದ ಮಂಡಿಸಿದರು. ಇವರಲ್ಲಿ ಮುಕುಲ್ ರೋಹಟಗಿ, ನೀರಜ್ ಕೌಲ್, ಅಭಿಕಲ್ಪ್ ಪ್ರತಾಪ್ ಸಿಂಗ್ (ದಾಖಲೆಯಲ್ಲಿ ವಕೀಲರು) ಜೊತೆಗೆ ಶ್ರೀರಂಗ್ ವರ್ಮಾ, ದೇವಾಂಶಿ ಸಿಂಗ್, ಆದಿತ್ಯ ಕೃಷ್ಣ, ಯಾಮಿನಿ ಸಿಂಗ್ ಸೇರಿದ್ದಾರೆ.