ರಾಜಸ್ಥಾನದ ವಿವಾಹ ಆಮಂತ್ರಣ ಪತ್ರಿಕೆಯೊಂದು ಇದೀಗ ಭಾರೀ ಚರ್ಚೆಯಲ್ಲಿದೆ. ದೇವರ ಫೋಟೋವನ್ನು ಮುದ್ರಿಸುವ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಫೋಟೋ ಮುದ್ರಿಸಲಾಗಿದೆ. ಇದನ್ನು ಮಾಡಿಸಿದ್ದು ಯಾರು ಅನ್ನೋದೇ ಇಲ್ಲಿನ ವಿಶೇಷ..

 ರಾಜಸ್ಥಾನದಲ್ಲಿ ಈಗ ಮದುವೆ ಸೀಸನ್ ನಡೆಯುತ್ತಿದೆ. ವಿವಾಹಗಳಲ್ಲಿ ಉತ್ತಮ ಊಟ ಮತ್ತು ಅಲಂಕಾರ ಮಾತ್ರವಲ್ಲದೆ ದುಬಾರಿ ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಲಾಗುತ್ತದೆ. ಆದರೆ ಈ ದಿನಗಳಲ್ಲಿ ರಾಜಸ್ಥಾನದಲ್ಲಿ ಒಂದು ವಿವಾಹ ಆಮಂತ್ರಣ ಪತ್ರಿಕೆ ಬಹಳಷ್ಟು ಚರ್ಚೆಯಲ್ಲಿದೆ. ಇದರ ಬಗ್ಗೆ ಇಡೀ ರಾಜಸ್ಥಾನದಲ್ಲಿ ಚರ್ಚೆ ನಡೆಯುತ್ತಿದೆ.

ಆಮಂತ್ರಣ ಪತ್ರಿಕೆಯಲ್ಲಿ ದೇವರ ಅಂಬೇಡ್ಕರ್ ಫೋಟೋ: ಸಾಮಾನ್ಯವಾಗಿ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಗಣೇಶ ದೇವರು, ಶಿವ ಪಾರ್ವತಿ ಅಥವಾ ಇನ್ಯಾವುದೇ ಮನೆ ದೇವರ ಫೋಟೋ ಇರುತ್ತದೆ. ಆದರೆ ರಾಜಸ್ಥಾನದ ಸಿಕರ್ ಜಿಲ್ಲೆಯ ದಾಂತಾರಾಮ್‌ಗಢ ಪ್ರದೇಶದ ಪಚಾರ್ ಗ್ರಾಮದ ನಿವಾಸಿ ಲಕ್ಷ್ಮಣ ರಾವ್ ಮುಂಡೋತಿಯಾ ಅವರ ಪುತ್ರಿ ನಿಶಾ ಅವರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಫೋಟೋ ಇದೆ. ಆದಾಗ್ಯೂ, ಇದಕ್ಕೂ ಮೊದಲು ದೇಶದಲ್ಲಿ ಅನೇಕ ಜನರು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಫೋಟೋವನ್ನು ಮುದ್ರಿಸಿದ್ದಾರೆ. ಆದರೆ ಬಹುಶಃ ರಾಜಸ್ಥಾನದಲ್ಲಿ ಇದು ಮೊದಲ ಪ್ರಕರಣ.

ಆಮಂತ್ರಣ ಪತ್ರಿಕೆಯ ಉದ್ದೇಶವೇ ಬೇರೆ: ನಿಶಾ ಅವರ ಸಹೋದರ ವಿಕ್ಕಿ ಅವರು ಹೇಳುವಂತೆ, 'ಈ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವುದರ ಮುಖ್ಯ ಉದ್ದೇಶವೆಂದರೆ ಪ್ರಸ್ತುತ ಯುವ ಪೀಳಿಗೆ ಮಹಾಪುರುಷರನ್ನು ಮರೆಯುತ್ತಿದೆ. ಆದರೆ, ಇಂತಹ ಆಮಂತ್ರಣ ಪತ್ರಿಕೆಗಳು ಮನೆಗಳಿಗೆ ತಲುಪಿದಾಗ ಡಾ. ಭೀಮರಾವ್ ಅಂಬೇಡ್ಕರ್ ಯಾವಾಗಲೂ ಜನರಿಗೆ ಪ್ರಸ್ತುತವಾಗಿರುತ್ತಾರೆ. ಇಂದು ಅಂಬೇಡ್ಕರ್ ಅವರಿಂದಲೇ ದಲಿತರು ಮತ್ತು ಮಹಿಳೆಯರ ಜೀವನ ಮಟ್ಟ ಸುಧಾರಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕುದುರೆಯ ಮೇಲೆ ವಧು ಸವಾರಿ: ಭಾರತೀಯ ಸಂಪ್ರದಾಯದಲ್ಲಿ ಮಗಳನ್ನುಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ. ಫೆಬ್ರವರಿ 13 ರಂದು ನಮ್ಮ ಸಹೋದರಿ ನಿಶಾ ಅವರ ವಿವಾಹ. ಆದರೆ, ಈ ವಿವಾಹಕ್ಕೂ ಮೊದಲು ನಮ್ಮ ಸಹೋದರಿಯನ್ನು ಗ್ರಾಮದಲ್ಲಿ ಕುದುರೆಯ ಮೇಲೆ ಕೂರಿಸಿ ಡಿಜೆ ಜೊತೆಗೆ ಅವಳ ಬಿಂದೋರಿಯನ್ನು (ಮೆರವಣಿಗೆ) ಮಾಡುತ್ತಾ ಹೋಗುತ್ತಾರೆ. ಇದರಲ್ಲಿ ಅನೇಕ ಗ್ರಾಮಸ್ಥರು ಭಾಗವಹಿಸುತ್ತಾರೆ ಎಂದು ವಿಕಿ ಹೇಳುತ್ತಾರೆ.

ನಿಶಾ ಅವರ ಮದುವೆ ಮೆರವಣಿಗೆ ಜುಂಜುನು ಜಿಲ್ಲೆಯ ಉದಯಪುರ್‌ವಾಟಿ ಪ್ರದೇಶದಿಂದ ಬರುತ್ತದೆ. ನಿಶಾ ಅವರ ವಿವಾಹ ರಾಜ್‌ಕುಮಾರ್ ಜೊತೆ ನಡೆಯಲಿದೆ. ಮದುವೆಯಾಗಲಿರುವ ವಧು-ವರ ಇಬ್ಬರೂ ಪದವೀಧರರು. ಪ್ರಸ್ತುತ ರಾಜ್‌ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಧುವಿನ ತಂದೆ ಲಕ್ಷ್ಮಣರಾಮ್ ವಿದೇಶದಲ್ಲಿ ಕೂಲಿ ಕೆಲಸ ಮಾಡುತ್ತಾರೆ.