ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಭೂತಪೂರ್ವ ಗೆಲುವಿನ ಬಳಿಕ ಬಿಜೆಪಿ ವಿಜಯೋತ್ಸವ ಆಚರಿಸಿದೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾರಿ ಸಂಭ್ರಮಾಚರಣೆ ನಡೆದಿದೆ. ಈ ವೇಳೆ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಮೋದಿ, ಜನರು ದೆಹಲಿ ಸ್ವಚ್ಚಗೊಳಿಸಿದ್ದಾರೆ. 10 ವರ್ಷಗಳ ಆಪತ್ತಿನಿಂದ ದೆಹಲಿ ಮುಕ್ತವಾಗಿದೆ ಎಂದು ಮೋದಿ ಹೇಳಿದ್ದಾರೆ.
- Home
- News
- India News
- Delhi Election 2025 Results Live :ಜನರಿಂದ ದೆಹಲಿ ಸ್ವಚ್ಚ, ಗೆಲುವಿನ ಬಳಿಕ ಮೋದಿ ವಿಜಯೋತ್ಸವ
Delhi Election 2025 Results Live :ಜನರಿಂದ ದೆಹಲಿ ಸ್ವಚ್ಚ, ಗೆಲುವಿನ ಬಳಿಕ ಮೋದಿ ವಿಜಯೋತ್ಸವ

ಬಹು ನಿರೀಕ್ಷಿತ ರಾಷ್ಟ್ರ ರಾಜಧಾನಿ ದಿಲ್ಲಿ ವಿಧಾನಸಭೆ ಚುನಾವಾಣೆ ಫಲಿತಾಂಶದ ಮತಗಳ ಎಣಿಕೆ ಬಹುತೇಕ ಮುಕ್ತಾಯಗೊಂಡಿದೆ. 70 ಸ್ಥಾನಗಳ ಪೈಕಿ ಬಿಜೆಪಿ 47 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದುಸ್ಥಾನದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಒಂದು ಕ್ಷೇತ್ರದ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ. 47 ಸ್ಥಾನದಲ್ಲಿ ಗೆಲುವು ಹಾಗೂ ಮತ್ತೊಂದರಲ್ಲಿ ಮುನ್ನಡೆ ಸೇರಿದಂತೆ ಬಿಜೆಪಿ 48 ಸ್ಥಾನ ಪಡೆದುಕೊಂಡಿದೆ. ಇತ್ತ ಆಮ್ ಆದ್ಮಿ ಪಾರ್ಟಿ 22 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಸತತ ಮೂರನೇ ಬಾರಿ ಒಂದೇ ಒಂದು ಸ್ಥಾನ ಗೆಲ್ಲದೆ ನಿರಾಸೆ ಅನುಭವಿಸಿದೆ. ಬಿಜೆಪಿ ಅಭೂತಪೂರ್ವ ಗೆಲುವು ಖಚಿತವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಮೋದಿ, ದೆಹಲಿಯಲ್ಲಿ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ದೆಹಲಿ ಅಭಿವೃದ್ಧಿ, ಯುಮನಾ ನದಿ ಸ್ವಚ್ಚಗೊಳಿಸುವ ಭರವಸೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮೋದಿ ಮುಂದಿಟ್ಟಿದ್ದಾರೆ. ಇಂದಿನ ದೆಹಲಿ ಚುನನಾವಣೆ ಫಲಿತಾಂಶ, ಬಿಜೆಪಿ ವಿಜಯೋತ್ಸವ, ಆಪ್ ನಾಯಕರ ಪ್ರತಿಕ್ರಿಯೆ, ಕಾಂಗ್ರೆಸ್ ಬೆಳವಣಿಗೆ ಸೇರಿದಂತೆ ಇಡೀ ದಿನದ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ದೆಹಲಿಯನ್ನು ಜನ ಸ್ವಚ್ಚ ಮಾಡಿದ್ದಾರೆ, ಗೆಲುವಿನ ಬಳಿಕ ಮೋದಿ ವಿಜಯೋತ್ಸವ
ಶೀಶ್ ಮಹಲ್ ಹಗರಣ ಸಿಎಜಿ ವರದಿ ಮಂಡಿಸುತ್ತೇವೆ, ಪ್ರಧಾನಿ ಮೋದಿ ಘೋಷಣೆ
ಅರವಿಂದ್ ಕೇಜ್ರಿವಾಲ್ ಮೇಲೆ ಕೇಳಿಬಂದಿರುವ ಕೋಟಿ ಕೋಟಿ ರೂಪಾಯಿ ಹಗರಣ ಪೈಕಿ ಶೀಶ್ ಮಹಲ ನಿವಾಸ ಕೂಡ ಒಂದು. ಈ ಕುರಿತು ಸಿಎಜಿ ವರದಿಯನ್ನು ಮಂಡಿಸುತ್ತೇವೆ. ಮೊದಲ ಅಧಿವೇಶನದಲ್ಲೇ ಮಂಡಿಸುತ್ತೇವೆ ಎಂದು ಮೋದಿ ಘೋಷಿಸಿದ್ದಾರೆ.
ಭರ್ಜರಿ ಗೆಲುವಿನ ಬಳಿಕ ಪ್ರಧಾನಿ ಮೋದಿ ಬಾಷಣ, ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ
ದೆಹಲಿ ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೀಗ ದಹೆಲಿ ಬಿಜೆಪಿ ಪ್ರಧಾನ ಕಚೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನುದ್ದೇಶಿ ಮೋದಿ ಮಾತನಾಡಿದ್ದಾರೆ. ಗೆಲುವಿಗೆ ದೆಹಲಿ ಜನೆಗೆ ಧನ್ಯವಾದ ತಿಳಿಸಿದ್ದಾರೆ.
ಕೇಜ್ರಿವಾಲ್, ಸಿಸೋಡಿಯಾ ಸೇರಿ ಸೋಲು ಕಂಡ ಆಪ್ ಘಟಾನುಘಟಿ ನಾಯಕರ ಲಿಸ್ಟ್
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಮಕಾಡೆ ಮಲಗಿದೆ. ಇದರ ಜೊತೆಗೆ ಆಪ್ ಘಟಾನುಘಟಿ ನಾಯಕರು ಮುಗ್ಗರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಸೇರಿದಂತೆ ಹಲವು ಪ್ರಮುಖ ನಾಯಕರು ಮುಗ್ಗರಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಸ್ನಲ್ಲಿ ನಾಲ್ವರು ಬಿಜೆಪಿ ನಾಯಕರ ಹೆಸರು, ಮತ್ತೆ ಮಹಿಳಾ ಸಿಎಂ?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಇತ್ತ ದೆಹಲಿ ಬಿಜೆಪಿಯಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ಹೈಕಮಾಂಡ್ ಸಭೆ ನಡೆಸುತ್ತಿದೆ. ಮುಖ್ಯವಾಗಿ ದೆಹಲಿ ಸಿಎಂ ಯಾರು ಚರ್ಚೆ ಶುರುವಾಗಿದೆ. ಈ ಪೈಕಿ ಅರವಿಂದ್ ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾ, ಸುಷ್ಮಾ ಸ್ವರಾಜ್ ಪುತ್ರಿ ಬನ್ಸುರಿ ಸ್ವರಾಜ್, ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಸಿ ದುಷ್ಯಂತ್ ಗೌತಮ್ ಹೆಸರು ಮುಂಚೂಣಿಯಲ್ಲಿದೆ.
ದೊಡ್ಡ ಯುದ್ಧ ಗೆಲ್ಲುವಾಗ ಸಣ್ಣ ಯುದ್ಧಗಳಲ್ಲಿ ಸೋಲು ಸಹಜ, ಆಪ್ ಮಾರ್ಮಿಕ ನುಡಿ
ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಚುನಾವಣೆಯಲ್ಲಿ ಮುಗ್ಗರಿಸಿದೆ. ಇದೀಗ ಆಪ್ ನಾಯಕರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಪೈಕಿ ಸೌರಬ್ ಭಾರದ್ವಾಜ್ ಹೇಳಿಕೆ ನೀಡಿದ್ದಾರೆ, ದೊಡ್ಡ ಯುದ್ಧಗಳನ್ನು ಗೆಲ್ಲಬೇಕಾದಾಗ, ಕೆಲ ಸಣ್ಣ ಸವಾಲುಗಳಲ್ಲಿ ಸೋಲು ಸಹಜ ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಸ್ನಲ್ಲಿ ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಆಡಳಿತರೂಢ ಆಮ್ ಆದ್ಮಿ ಪಾರ್ಟಿ ಹೀನಾಯ ಸೋಲು ಕಂಡಿದೆ. ಇತ್ತ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಬಿಜೆಪಿ ಗೆಲುವು ಹಾಗೂ ಮುನ್ನಡೆ ಒಟ್ಟು ಸ್ಥಾನ 48ಕ್ಕೆ ಏರಿಕೆಯಾಗಿದ್ದರೆ, ಆಪ್ 22ರಲ್ಲಿದೆ. ಇನ್ನು ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ, ಮುನ್ನಡೆ ಪಡೆದಿಲ್ಲ. ಅರವಿಂದ್ ಕೇಜ್ರಿವಾಲ್ ವಿರುದ್ದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಇದೀಗ ದೆಹಲಿ ಮುಖ್ಯಮಂತ್ರಿ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಪರ್ವೇಶ್ ವರ್ಮಾ ಈಗಾಗೇ ಅಮಿತ್ ಶಾ ಭೇಟಿಯಾಗಿದ್ದಾರೆ.
ಅಯೋಧ್ಯೆ ಗೆದ್ದ ಸಮಾಜವಾದಿಯ ಅವಧೇಶ್ನಿಂದ ವಿಧಾನಸಭೆ ಕ್ಷೇತ್ರ ಕಿತ್ತುಕೊಂಡ ಬಿಜೆಪಿ!
ಕಳೆದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ವ್ಯಾಪ್ತಿಯಲ್ಲಿರುವ ಫೈಜಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಇಲ್ಲಿ ಗೆಲುವು ಕಂಡಿದ್ದ ಅವದೇಶ್ ಚೌಧರಿ ಮಿಲ್ಕಿಪುರ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅವದೇಶ್ ಚೌಧರಿ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಂಡಿದೆ.
ಕೇಜ್ರಿವಾಲ್ಕೈ ಹಿಡಿಯದ ಗ್ಯಾರಂಟಿಗಳು
ಸ್ವತಃ ಕೇಜ್ರಿವಾಲ್ ದಿಲ್ಲಿ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದು, ಅವರು ನೀಡಿದ ಗ್ಯಾರಂಟಿಗಳು ವರ್ಕ್ ಆಗಿಲ್ಲ.
ಅವರು ನೀಡಿದ ಗ್ಯಾರಂಟಿಗಳೇನು?
ಆಮ್ ಆದ್ಮಿ ಪಾರ್ಟಿಯನ್ನು ಕೌರವರಿಗೆ ಹೋಲಿಸಿ ಟಾಂಗ್ ನೀಡಿದ ಸ್ವಾತಿ ಮಲಿವಾಲ್!
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿನಲ್ಲಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣಾ ಪ್ರಚಾರದ ವೇಳೆ ಪಕ್ಷದ ವಿರುದ್ಧ ಮಾತನಾಡಿದ್ದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪಕ್ಷವನ್ನು ಟೀಕಿಸಿದ್ದ ಸ್ವಾತಿ ಮಲಿವಾಲ್ ಆಪ್ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ದಿಲ್ಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಧಿಕಾರ, ಎಎಪಿ ಸೋಲಿಗೆ ಕಾರಣವೇನು?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಭ್ರಷ್ಟಾಚಾರ ಆರೋಪಗಳು, ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯ ಕೊರತೆ, ಆಂತರಿಕ ಕಲಹಗಳು, ಭರವಸೆಗಳನ್ನು ಈಡೇರಿಸದಿರುವುದು, ಯುವಜನತೆ ದೂರವಾಗುವುದು ಮತ್ತು 12 ವರ್ಷಗಳ ಆಡಳಿತ ಸೇರಿದಂತೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗಿದೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
ಕೊನೆ 15 ದಿನದಲ್ಲಿ ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸಿ ಬಿಜೆಪಿಯನ್ನು ಗೆಲ್ಲಿಸಿದ್ದೇಗೆ ರಾಹುಲ್-ಪ್ರಿಯಾಂಕಾ?
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ರಣತಂತ್ರ ಪ್ರಮುಖ ಪಾತ್ರ ವಹಿಸಿದೆ. ಕೊನೆಯ 15 ದಿನಗಳಲ್ಲಿ ನಡೆಸಿದ ಪ್ರಚಾರದ ಮೂಲಕ ಎಎಪಿ ಪಕ್ಷವನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾದರು.
ಏನಿದು ಸುದ್ದಿ?
ಬಿಜೆಪಿಗೆ ದೆಹಲಿ ಗದ್ದುಗೆ, ಕಾರ್ಯಕರ್ತರಿಂದ ಸಂಭ್ರಮಾಚರಣೆ
ದಿಲ್ಲಿ ಗದ್ದುಗೆ ಬಿಜೆಪಿ ತೆಕ್ಕೆಗೆ: 20 ರಾಜ್ಯಗಳಲ್ಲಿ ಬಿಜೆಪಿ ಗದ್ದುಗೆಗೆ
ದೆಹಲಿಯಲ್ಲಿ ಬಿಜೆಪಿ ವಿಜಯದ ಹಿನ್ನೆಲೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ. ದೆಹಲಿಯ ಸಿಎಂ ಅಭ್ಯರ್ಥಿ ಯನ್ನು ಸಂಸದೀಯ ಮಂಡಳಿ ಮತ್ತು ಶಾಸಕರು ತೀರ್ಮಾನಿಸಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 20 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಡಬಲ್ ಎಂಜಿನ್ ಸರ್ಕಾರ ವನ್ನು ದೆಹಲಿಗರು ಬಯಸಿದ್ದಾರೆ. ನಾವು ಘೋಷಣೆ ಮಾಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ.
ದೆಹಲಿಯಲ್ಲಿ ಪ್ರಚಂಡ ಗೆಲುವಿನತ್ತ ಬಿಜೆಪಿ, ಆಮ್ ಆದ್ಮಿಗೆ ಶಾಕ್!
ನನ್ನನ್ನು ಸೋಲಿಸಲು ಮೋದಿ ಮತ್ತೊಂದು ಜನ್ನವೆತ್ತಬೇಕು: ಕೇಜ್ರಿವಾಲ್ ಹಳೇ ವೀಡಿಯೋ ವೈರಲ್
ಬಿಜೆಪಿ ಅಗತ್ಯ ಮ್ಯಾಜಿಕ್ ನಂಬರ್ ಪಡೆಯುವತ್ತ ದಿಲ್ಲಿಯಲ್ಲಿ ಹೆಜ್ಜೆ ಹಾಗಿದ್ದು, ಆಡಳಿತಾರೂಢ ಆಪ್ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬೆನ್ನಲ್ಲೇ ಕೇಜ್ರಿವಾಲ್, ಮೋದಿ ನನ್ನನ್ನು ಸೋಲಿಸಲು ಮತ್ತೊಂದು ಜನ್ಮ ತಾಳಿ ಬರಬೇಕೆಂದ ಹಳೇ ವೀಡಿಯೋವೊಂದು ವೈರಲ್ ಆಗಿದೆ.
ಸಾರಾಯಿಯಿಂದಲೇ ಕೇಜ್ರಿವಾಲ್ಗೆ ಸೋಲು: ಅಣ್ಣಾ ಹಜಾರೆ
ದೆಹಲಿ ಚುನಾವಣೆಯ ಟ್ರೆಂಡ್ ಕುರಿತು ಮಾತನಾಡಿರುವ ಅಣ್ಣಾ ಹಜಾರೆ, ಚುನಾವಣೆಗಳಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿಯು ಶುದ್ಧ ನಡವಳಿಕೆ, ಶುದ್ಧ ಆಲೋಚನೆಗಳು, ನಿಷ್ಕಳಂಕ ಜೀವನ ಮತ್ತು ತ್ಯಾಗವನ್ನು ಹೊಂದಿರುವುದು ಮುಖ್ಯ ಎಂದಿದ್ದಾರೆ. ಒಬ್ಬ ಅಭ್ಯರ್ಥಿಗೆ ಈ ಗುಣಗಳಿದ್ದರೆ, ಮತದಾರರು ಅವನ ಮೇಲೆ ನಂಬಿಕೆ ಇಡುತ್ತಾರೆ. ನಾನು ಅವರಿಗೆ ಮತ್ತೆ ಮತ್ತೆ ಹೇಳುತ್ತಲೇ ಇದ್ದೆ, ಮದ್ಯದಿಂದಲೇ ಅವರು ಇಂದು ಸೋಲು ಕಂಡಿದ್ದಾರೆ.
ದಿಲ್ಲಿ ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ
ದಿಲ್ಲಿ ಬಿಜೆಪಿ ಕಚೇರಿ ಮುಂದೆ ಬಿಜೆಪ ಕಾರ್ಯಕರ್ತರು ಜಮಾಯಿಸಿದ್ದು, ಪಕ್ಷ ಮ್ಯಾಜಿಕ ನಂಬರ್ ದಾಟಿದ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ.
ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗೋಲ್ಲ: ಶೆಟ್ಟರ್
ಹುಬ್ಬಳ್ಳಿ: ಕಾಂಗ್ರೆಸ್ ಡೇ ಬಾಯ್ ಡೇ ಕೊಲ್ಯಾಪ್ಸ್ ಆಗುತ್ತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ. ಅದು ನಮ್ಮ ತಪ್ಪಿನಿಂದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ.ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ ಎಂದ ಬಿಜೆಪಿ ಎಂಪಿ ಜಗದೀಶ್ ಶೆಟ್ಟರ್.
ತೆಲಂಗಾಣ ,ಕರ್ನಾಟಕ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು. ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ.ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ ಅಲ್ಲಿ ಮಾತ್ರ ಒಳ್ಳೆ ಕೆಲಸಗಳು ಆಗಿವೆ. ಹೀಗಾಗಿ ಡಬಲ್ ಇಂಜಿನ್ ಸರ್ಕಾರ ತಂದಿದ್ದಾರೆ. ದೆಹಲಿ ಜನ ಮೋದಿ ನಾಯಕತ್ವ ಒಪ್ಪಿದ್ದಾರೆ. ದೆಹಲಿಯನ್ನು ಅಭಿವೃದ್ದಿ ಮಾಡೋದಾಗಿ ಮೋದಿ ಹೇಳಿದ್ದಾರೆ. ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕ ಬರುತ್ತೇವೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲಿ ಎನ್ನುವ ಸ್ಫೋಟಕ ಹೇಳಿಕೆಯನ್ನೂ ನೀಡಿದ್ದಾರೆ. ಭಿನ್ನಮತಕ್ಕೆ ನಾಯಕರು ಇತಿಶ್ರೀ ಹಾಕ್ತಾರೆ. ಅಧ್ಯಕ್ಷರ ಚುನಾವಣೆ ಬಂದಿದೆ. ಸರ್ವಾನುಮತದಿಂದ ಅಧ್ಯಕ್ಷರ ಆಯ್ಕೆ ಆಗಬೇಕು, ಚುನಾವಣೆ ಅನ್ನೋದು ಒಂದು ಪ್ರೊಸೆಸ್, ಎಂದಿದ್ದಾರ.ೆ

ದಿಲ್ಲಿ ಚುನಾವಣಾ ಫಲಿತಾಂಶದ ನಡುವೆ 1500 ವರ್ಷಗಳ ಕಾಲ ಕಾಣೆಯಾದ ದೆಹಲಿ ಇತಿಹಾಸದ ಬಗ್ಗೆ ತಿಳಿಯಲೇಬೇಕು!
ದಿಲ್ಲಿಯ ಹೆಸರು ಹಲವು ಬಾರಿ ಬದಲಾಗಿದೆ. ಪ್ರತಿಯೊಬ್ಬ ಆಡಳಿತಗಾರರು ತಮ್ಮದೇ ಆದ ರೀತಿಯಲ್ಲಿ ಇದನ್ನು ಗುರುತಿಸಿದ್ದಾರೆ. ಮೊದಲು ಇದು ಪಾಂಡವರ ರಾಜಧಾನಿಯಾಗಿತ್ತು, ನಂತರ 1,500 ವರ್ಷಗಳ ಕಾಲ ಇದರ ಇತಿಹಾಸವೇ ಕಾಣೆಯಾಗಿದೆ.
ದೆಹಲಿ ಚುನಾವಣಾ ಫಲಿತಾಂಶದ ನಡುವೆ ಇದನ್ನು ತಿಳಿಯಲೇಬೇಕು,1500 ವರ್ಷಗಳ ಕಾಲ ಇತಿಹಾಸವೇ ಕಾಣೆ!