ರಾಜ್ಯದ 140 ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಇತರ ಬುದ್ಧಿಜೀವಿಗಳು ಕೇರಳ ಸರ್ಕಾರಕ್ಕೆ ಪತ್ರ ಬರೆದು ಪತ್ರಕರ್ತನ ಮೇಲಿನ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ತಿರುವನಂತಪುರ (ಜೂ.17): ಕೇರಳದ ಕಾಲೇಜೊಂದರ ನೇರವರದಿ ಕುರಿತು ಏಷ್ಯಾನೆಟ್ ನ್ಯೂಸ್ ಪತ್ರಕರ್ತೆ ಮತ್ತು ಇತರ ಪತ್ರಕರ್ತರ ವಿರುದ್ಧ ಪೊಲೀಸ್ ಪ್ರಕರಣದ ವಿರುದ್ಧ ರಾಜ್ಯದ ಸಾಂಸ್ಕೃತಿಕ ನಾಯಕರು ಮತ್ತು ಬರಹಗಾರರು ಒಂದಾಗಿದ್ದಾರೆ. ರಾಜ್ಯದ 140 ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಇತರ ಬುದ್ಧಿಜೀವಿಗಳು ಪತ್ರಕರ್ತರ ಮೇಲಿನ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಏಷಿಯಾನೆಟ್ ನ್ಯೂಸ್ ವರದಿಗಾರ್ತಿ ಅಖಿಲಾ ನಂದಕುಮಾರ್ ಮತ್ತು ಇತರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ಮತ್ತು ಇತರ ವರದಿಗಾರರು ಕೇರಳದ ವಿದ್ಯಾರ್ಥಿ ಸಂಘ (ಕೆಎಸ್ಯು) ಮಾಡಿದ ಆರೋಪಗಳನ್ನು ತಮ್ಮ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಿದ್ದರು. ಎರ್ನಾಕುಲಂ ಮಹಾರಾಜ ಕಾಲೇಜಿನ ಮಾಜಿ ಸಂಯೋಜಕ ವಿನೋದ್ ಕುಮಾರ್, ಕಾಲೇಜು ಪ್ರಾಂಶುಪಾಲ ವಿಎಸ್ ಜಾಯ್, ಕೆಎಸ್ಯು ರಾಜ್ಯಾಧ್ಯಕ್ಷ ಅಲೋಶಿಯಸ್ ಕ್ಸೇವಿಯರ್, ಫಾಝಿಲ್ ಸಿಎ ಮತ್ತು ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಕೇರಳ ಪೊಲೀಸರು ಪಿತೂರಿ ನಡೆಸಿರುವ ಆರೋಪದಲ್ಲಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ಅವರ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದ್ದರು.
ಪೊಲೀಸರು ಈ ಜನರ ಮೇಲೆ ಕ್ರಿಮಿನಲ್ ಪಿತೂರಿ, ನಕಲಿ ಮತ್ತು ಮಾನನಷ್ಟ ಮತ್ತು ಕೇರಳ ಪೊಲೀಸ್ (ಕೆಪಿ) ಆಕ್ಟ್ 2011 ರ ಸೆಕ್ಷನ್ 120 (ಒ) ಸೇರಿದಂತೆ ಐಪಿಸಿಯ ಸೆಕ್ಷನ್ 120-ಬಿ, 465,469 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಬಯಲಿಗೆಳೆದ ಪತ್ರಕರ್ತೆ ವಿರುದ್ಧ FIRಗೆ ರಾಜೀವ್ ಚಂದ್ರಶೇಖರ್ ಖಂಡನೆ
ಈ ನಡುವೆ ಅಖಿಲಾ ನಂದಕುಮಾರ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಅಧ್ಯಯನ ಮಾಡಲು ಎಸ್ಎಫ್ಐ ಮುಖಂಡ ಪಿಎಂ ಅರ್ಶೋ ಅವರ ದೂರಿನ ಪ್ರತಿಯನ್ನು ಕೇಳಿದ್ದಾರೆ. ವರದಿಗಾರ್ತಿ ತನ್ನ ವಿರುದ್ಧದ ಸುಳ್ಳು ಪ್ರಕರಣಗಳಿಗಾಗಿ ಹೈಕೋರ್ಟ್ನ ಮೊರೆ ಹೋಗಲಿದ್ದಾರೆ.
ಅಂಕಪಟ್ಟಿ ಅಕ್ರಮ ಬಯಲು ಮಾಡಿದ ಏಷ್ಯಾನೆಟ್ ವರದಿಗಾರ್ತಿ ವಿರುದ್ಧ ಕೇಸ್: ಬಿಜೆಪಿ ಖಂಡನೆ
