Asianet Suvarna News Asianet Suvarna News

ಕೊರೋನಾ ಮಣಿಸಲು 12 ಬೆಸ್ಟ್‌ ವಿಧಾನ: ಕೇಂದ್ರದಿಂದ ಬಿಡುಗಡೆ!

* ಕೊರೋನಾ ಎದುರಿಸಲು 12 ಬೆಸ್ಟ್‌ ವಿಧಾನ

* ವಿವಿಧ ಭಾಗಗಳಲ್ಲಿರುವ ನವೀನ ಪ್ರಯತ್ನವನ್ನು ರಾಜ್ಯಗಳಿಗೆ ಸೂಚಿಸಿದ ಕೇಂದ್ರ

* ಹೊಸ ಮಾದರಿ ಬಳಸಿ ಸೋಂಕು ನಿಗ್ರಹಿಸಿ ಎಂಬ ಮೋದಿ ಕರೆ ಬೆನ್ನಲ್ಲೇ ಸಲಹೆ

central govt releases 12 best successful methods to fight against corona pod
Author
Bangalore, First Published May 22, 2021, 8:21 AM IST

ನವದೆಹಲಿ(ಮೇ.22): ದೇಶದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿರುವ ನವೀನ ಮಾದರಿಗಳನ್ನು ಅನುಸರಿಸಿ ಕೊರೋನಾ ಸೋಂಕು ಹರಡುವಿಕೆಯನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಬೆನ್ನಲ್ಲೇ, ದೇಶದ 12 ವಿನೂತನ ಮಾದರಿಗಳನ್ನು ಕೇಂದ್ರ ಸರ್ಕಾರ ಪಟ್ಟಿಮಾಡಿದೆ. ಆ ಮಾದರಿಗಳನ್ನು ರಾಜ್ಯಗಳಿಗೆ ಪತ್ರ ಬರೆದು ರವಾನಿಸುವ ಮೂಲಕ, ಅದನ್ನು ಅನುಷ್ಠಾನಗೊಳಿಸಲು ಉತ್ತೇಜನ ನೀಡಿದೆ.

12 ಯಶಸ್ವಿ ಮಾದರಿಗಳು

1. ತಮಿಳುನಾಡು: ಆ್ಯಂಬುಲೆನ್ಸ್‌ಗಳ ಮೇಲಿನ ಒತ್ತಡ ನಿವಾರಣೆಗೆ ಟ್ಯಾಕ್ಸಿಗಳನ್ನು ಆ್ಯಂಬುಲೆನ್ಸ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಗಂಭೀರವಲ್ಲದ ಕೊರೋನಾ ರೋಗಿಗಳ ಸಾಗಣೆಗೆ ಇವುಗಳ ಬಳಕೆ.

2. ರಾಜಸ್ಥಾನ: ಬಿಕನೇರ್‌ ಜಿಲ್ಲೆಯಲ್ಲಿ ಕೋವಿಡೇತರ ಚಿಕಿತ್ಸೆಗೆ ಪಂಚಾಯಿತಿ ಪಟ್ಟದಲ್ಲಿ ಮೊಬೈಲ್‌ ಒಪಿಡಿ (ಹೊರರೋಗಿಗಳ ವಿಭಾಗ) ಆರಂಭ. ಇದರಿಂದ ಕೊರೋನೇತರ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ಸಿಗುತ್ತಿದೆ.

3. ರಾಜಸ್ಥಾನ: ಬಿಕನೇರ್‌ನಲ್ಲಿ ಆಕ್ಸಿಜನ್‌ ವ್ಯರ್ಥ ತಡೆಯಲು ‘ಆಕ್ಸಿಜನ್‌ ಮಿತ್ರ’ ಎಂಬ ವ್ಯವಸ್ಥೆ ಮಾಡಲಾಗಿದೆ.

4. ಉತ್ತರಪ್ರದೇಶ: ರಾಯ್‌ಬರೇಲಿಯ ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ರಾರ‍ಯಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಹಾಗೂ ಆರ್‌ಟಿಪಿಸಿಆರ್‌ ಪರೀಕ್ಷೆ. ಇದರಿಂದಾಗಿ ಪಾಸಿಟಿವಿಟಿ ದರ ಒಂದೇ ತಿಂಗಳಲ್ಲಿ ಶೇ.38ರಿಂದ ಶೇ.2.8ಕ್ಕೆ ಇಳಿಕೆ.

5. ಕೇರಳ: ವಿವೇಚನೆಯಿಂದ ಆಕ್ಸಿಜನ್‌ ಬಳಕೆ ಮಾಡಲು ಆಸ್ಪತ್ರೆಗಳಲ್ಲಿ ‘ಆಕ್ಸಿಜನ್‌ ನರ್ಸ್‌’ ಸೇವೆ ಆರಂಭ. ಇವರು ಆಕ್ಸಿಜನ್‌ ವ್ಯರ್ಥವಾಗುವುದನ್ನು ತಡೆಯುತ್ತಾರೆ.

6. ಹರಾರ‍ಯಣ: ಗುರುಗ್ರಾಮದಲ್ಲಿ ಕರ್ತವ್ಯ ನಿರ್ವಹಣೆ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದರ ಜತೆಗೆ ಡ್ರೈವ್‌ ಇನ್‌ ಲಸಿಕಾ ಕೇಂದ್ರ ತೆರೆಯಲಾಗಿದೆ.

7. ಉತ್ತರಪ್ರದೇಶ: ಕೊರೋನಾಗೆ ಸಂಬಂಧಿಸಿದಂತೆ ಜನಸಾಮಾನ್ಯರ ಎಲ್ಲ ಸಂದೇಹ ನಿವಾರಿಸಲು ವಾರಾಣಸಿಯಲ್ಲಿ ಕಾಶಿ ಕೋವಿಡ್‌ ಪ್ರತಿಕ್ರಿಯೆ ಕೇಂದ್ರ ಆರಂಭ.

8. ಉತ್ತರಪ್ರದೇಶ: ಗೌತಮಬುದ್ಧನಗರದಲ್ಲಿ ನಿವಾಸಿಗಳ ಸಂಘಗಳ ಸಹಕಾರದಿಂದ ಐಸೋಲೇಷನ್‌ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ ಆರಂಭ.

9. ಮಧ್ಯಪ್ರದೇಶ: ಕೊರೋನಾ ಸೋಂಕಿತರ ಪ್ರತ್ಯೇಕಿಸುವಿಕೆ, ಕೊರೋನಾ ಸೋಂಕು ನಿಗ್ರಹಕ್ಕಾಗಿ ಚುನಾಯಿತಿ ಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳನ್ನು ಎಲ್ಲ ಹಂತದಲ್ಲೂ ಬಳಸಿಕೊಳ್ಳಲಾಗುತ್ತಿದೆ.

10. ಹರ್ಯಾಣ: ಗುರುಗ್ರಾಮದ ಎಲ್ಲ 102 ಆಸ್ಪತ್ರೆಗಳಲ್ಲಿನ ಬೆಡ್‌ ಲಭ್ಯತೆ, ಆಕ್ಸಿಜನ್‌ ಬಳಕೆ, ಆ್ಯಂಬುಲೆನ್ಸ್‌ ಲಭ್ಯತೆ ಕುರಿತಂತೆ ಕ್ಷಣಕ್ಷಣದ ನಿಗಾ ಇಡಲು ವೆಬ್‌ಸೈಟ್‌ ರೂಪಿಸಲಾಗಿದೆ.

11. ಚಂಡೀಗಢ: ಕೋವಿಡ್‌ ನಿರ್ವಹಣೆಗೆ ಆಯುಷ್‌ ಔಷಧ ಹಾಗೂ ಆಯುಷ್‌ ಘಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ.

12. ಛತ್ತೀಸ್‌ಗಢ: ಜಂಜ್‌ಗೀರ್‌ ಚಂಪಾ ಜಿಲ್ಲೆಯಲ್ಲಿ ಹಾತ್‌ ಬಜಾರುಗಳಲ್ಲಿ ಆಯುಷ್‌ ಕಢಾ ನೀಡಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios