Asianet Suvarna News Asianet Suvarna News

ಕೇಸು ಜಡಿದ ಕೇರಳಕ್ಕೆ ಕರಂದ್ಲಾಜೆ ಉತ್ತರ: ಅದೊಂದು ಮಿನಿ ಕಾಶ್ಮೀರ!

ಸಿಎಎ ಬೆಂಬಲಿಸಿದ ಹಿಂದೂಗಳಿಗೆ ನೀರು ಬಂದ್?| ಕೇರಳ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ| 'ಮಲ್ಲಪ್ಪುರಂ ಜಿಲ್ಲೆಯ ಹಿಂದೂ ಕುಟುಂಬಗಳಿಗೆ ನೀರು ನಿಲ್ಲಿಸಿದ ಕೇರಳ ಸರ್ಕಾರ'| ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿದ ಕೇರಳ ಪೊಲೀಸರು| ಸಿಎಎ ಬೆಂಬಲಿಸಿದರೆ ಕೇರಳ ಸರ್ಕಾರ ನೀರು ಪೂರೈಕೆ ನಿಲ್ಲಿಸುತ್ತದೆ ಎಂದ ಶೋಭಾ| ಕೇರಳ ಮಿನಿ ಕಾಶ್ಮೀರವಾಗಿ ಪರಿವರ್ತನೆಗೊಂಡಿದೆ ಎಂದ ಸಂಸದೆ|

Case Filed Against Shobha Karandlaje In Kerala  For No Water For Hindus Remark
Author
Bengaluru, First Published Jan 24, 2020, 2:38 PM IST

ತಿರುವನಂತಪುರಂ(ಜ.24): ಸಿಎಎ ಬೆಂಬಲಿಸಿದ ಹಿಂದೂಗಳಿಗೆ ಕೇರಳ ಸರ್ಕಾರ ನೀರು ಪೂರೈಕೆ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ.

"

ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಸಿಎಎ ಬೆಂಬಲಿಸಿದ್ದ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದರು.

ಶೋಭಾ ಕರಂದ್ಲಾಜೆ ಅವರ ಟ್ವೀಟ್ ಆಧರಿಸಿ ಅವರ ವಿರುದ್ಧ ಕೇರಳ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸಂಸದೆ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಲ್ಲಪ್ಪುರಂ ಎಸ್‌ಪಿ ಅಬ್ದುಲ್ ಕರೀಂ ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇಸು ದಾಖಲು!

ಇನ್ನು ತಮ್ಮ ವಿರುದ್ಧ ದೂರು ದಾಖಲಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶೋಭಾ ಕರಂದ್ಲಾಜೆ, ಸತ್ಯ ಹೇಳಿದ್ದಕ್ಕೆ ಕೇರಳ ಸರ್ಕಾರ ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಕೇರಳ ಮಿನಿ ಕಾಶ್ಮೀರವಾಗಿ ಪರಿವರ್ತನೆಯಾಗಿದ್ದು, ಎಡರಂಗ ಸರ್ಕಾರ ಹಿಂದೂಗಳ ವಿರುದ್ಧ ಸಮರ ಸಾರಿದೆ ಎಂದು ಸಂಸದೆ ಕಿಡಿಕಾರಿದರು.

Follow Us:
Download App:
  • android
  • ios