ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಯುಪಿಯ ಯೋಗಿ ಮಾಡೆಲ್ ಅನುಸರಿಸುತ್ತಿದೆ. ಸಿಎಂ ಸುವೆಂದು ಅಧಿಕಾರಿ 24 ಬುಲ್ಡೋಜರ್ ಬಳಸಿ ಅತಿಕ್ರಮ ಕಟ್ಟಡ ನೆಲೆಸಮ ಮಾಡಲಾಗುತ್ತಿದೆ. 

ಕೋಲ್ಕತಾ (ಮೇ.15) ಮಮತಾ ಬ್ಯಾನರ್ಜಿಯ ಟಿಎಂಸಿ ಆಡಳಿತ ಅಂತ್ಯಗೊಳಿಸಿದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನೂತನ ಸರ್ಕಾರ ರಚಿಸಿದೆ. ಸುವೆಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಿಎಂ ಸುವೆಂದು ಅಧಿಕಾರಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿ ಅನುಸರಿಸಿದ್ದಾರೆ. ಅತಿಕ್ರಮ ಕಟ್ಟಡಗಳ ತೆರವಿಗೆ ಸುವೆಂದು ಅದಿಕಾರಿ ಬರೋಬ್ಬರಿ 24 ಬುಲ್ಡೋಜರ್ ಬಳಸಿದ್ದಾರೆ. ಸಿಲಿಗುರಿ ಪ್ರದೇಶದಲ್ಲಿರುವ ಎಲ್ಲಾ ಅತಿಕ್ರಮ ಕಟ್ಟಡಗಳ ತೆರವಗೆ ಸುವೆಂದು ಅದಿಕಾರಿ ಆದೇಶ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಸುವೆಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿದ ಬೆನ್ನಲ್ಲೇ ಸತತ ಸಭೆ ಮಾಡಿ ಪಶ್ಚಿಮ ಬಂಗಾಳದಲ್ಲಿ ಕೈಗೊಳ್ಳಬೇಕಾದ ಮಹತ್ತರ ಬದಲಾವಣೆ ಹಾಗೂ ಆಡಳಿತ ಕುರಿತು ಸೂಚನೆ ನೀಡಿದ್ದಾರೆ. ಸುವೆಂದು ಅದಿಕಾರಿ ಸೂಚನೆ ಬೆನ್ನಲ್ಲೇ ಸಿಲಿಗುರಿ ಸಬ್ ಡಿವಿಶನ್ ಕಚೇರಿಯಲ್ಲಿ ಅಧಿಕಾರಿಗಳು ಸತತ ಸಭೆ ನಡೆಸಿದ್ದಾರೆ. ಇದೇ ವೇಳೆ ಅಕ್ರಮ ಕಟ್ಟಡಗಳು, ಅತಿಕ್ರಮ ಪ್ರವೇಶ ತಡೆಯಲು ಕಾರ್ಯಾಚರಣೆ ನಡೆಸಿದ್ದಾರೆ.

ಉತ್ತರ ಪ್ರದೇಶದಿಂದ ಬುಲ್ಡೋಜರ್ ತರಿಸಿಕೊಂಡ ಸುವೆಂದು ಅಧಿಕಾರಿ

ಸಿಲುಗುರಿಯಲ್ಲಿ ಅತೀ ಹೆಚ್ಚು ಕಟ್ಟಡಗಳು ಅತಿಕ್ರಮವಾಗಿ ನಿರ್ಮಾಣವಾಗಿದೆ. ಈ ಕುರಿತು ಅಧಿಕಾರಿಗಳು ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಿ ಖಾಲಿ ಮಾಡಲು ಸೂಚಿಸಿದೆ. ಇದರ ಬೆನ್ನಲ್ಲೇ ಪ್ರತಿಭಟನೆಗಳು ನಡೆಯುತ್ತಿದೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಮೂಲಕ ತೆರವು ಕಾರ್ಯಾಚರಣೆಗೆ ಸೂಚನೆ ನೀಡಲಾಗಿತ್ತು. ಏಕಕಾಲದಲ್ಲಿ ಸಿಲುಗುರಿಯಲ್ಲಿ ಕಾರ್ಯಾಚರಣೆ ಅವಶ್ಯಕತೆ ಇದ್ದ ಕಾರಣ 24 ಬುಲ್ಡೋಜರ್‌ಗಳನ್ನು ಉತ್ತರ ಪ್ರದೇಶದಿಂದ ತರಿಸಿಕೊಳ್ಳಲಾಗಿದೆ.

ಸಂಕಷ್ಟದಲ್ಲಿ ಸಿಲಿಗುರಿ ಮುನ್ಸಿಪಲ್ ಕಾರ್ಪೋರೇಶನ್

ಸಿಲಿಗುರಿ ಮುನ್ಸಿಪಲ್ ಕಾರ್ಪೋರೇಶನ್ ಸಂಕಷ್ಟಕ್ಕೆ ಸಿಲುಕಿದೆ. ಮುನ್ಸಿಪಲ್ ಕಾರ್ಪೋರೇಶನ್ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ ಸುಮ್ಮನೆ ಕುಳಿತಿದೆ. ಹಲವು ಅಕ್ರಮ ಕಟ್ಟಡಗಳಿಗೆ ನಕಲಿ ದಾಖಲೆ ಪಡೆದು ಅನುಮತಿ ನೀಡಿದೆ. ಸಿಲುಗುರಿಯಲ್ಲಿ ಈ ಮಟ್ಟಕ್ಕೆ ಅಕ್ರಮ ಕಟ್ಟಡಗಳು ತಲೆ ಎತ್ತಲು ಮುನ್ಸಿಪಲ್ ಕಾರ್ಪೋರೇಶನ್ ಕಾರಣ ಎಂಬ ಆರೋಪಗಳು ಕೇಳಿಬಂದಿದೆ.

ಬಂಗಾಳದಲ್ಲಿ ಯೋಗಿ ಮಾಡೆಲ್

ಪಶ್ಚಿಮ ಬಂಗಾಳದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಯುಪಿ ಮಾಡೆಲ್ ಕುರಿತು ಹೇಳಿತ್ತು. ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಯೋಗಿ ಆದಿತ್ಯನಾಥ್ ಮಾಡೆಲ್ ತರುವುದಾಗಿ ಭರವಸೆ ನೀಡಿದ್ದರು. ಅಧರಲ್ಲೂ ಮುಖ್ಯವಾಗಿ ಅತಿಕ್ರಮವಾಗಿ ಬಾಂಗ್ಲಾದೇಶದಿಂದ ಬಂಗಾಳ ಪ್ರವೇಶಿಸಿ ನೆಲೆಸಿರುವವನ್ನು ಹೊರಕ್ಕೆ ಕಳುಹಿಸುವ ಕುರಿತು ಎಚ್ಚರಿಕೆ ನೀಡಿತ್ತು. ಇದರಂತೆ ಬಂಗಾಳದಲ್ಲಿ ಯೋಗಿ ಮಾಡೆಲ್ ಕಾರ್ಯರೂಪಕ್ಕೆ ಬಂದಿದೆ.