ಕೊರೋನಾವೈರಸ್‌ಗೆ ಮದ್ದು ಹೇಳಿದ ಬಿಜೆಪಿ ಶಾಸಕ | ಬೆಳಗ್ಗೆದ್ದು ಖಾಲಿ ಹೊಟ್ಟೆಗೆ ಗೋಮೂತ್ರ ಕುಡೀರಿ ಎಂದು ಸಲಹೆ

ಲಕ್ನೋ(ಮೇ.09): ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ (ಹಸುವಿನ ಮೂತ್ರ) ಸೇವಿಸುವುದರಿಂದ ಕೊರೋನವೈರಸ್ ನಿಂದ ಖಂಡಿತ ರಕ್ಷಣೆ ಪಡೆಯಬಹುದು ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರದೇಶದ ಬೈರಿಯಾ ಮೂಲದ ಬಿಜೆಪಿ ಶಾಸಕ ಹಸುವಿನ ಮೂತ್ರವನ್ನು ಹೇಗೆ ಸೇವಿಸಬೇಕು ಎಂಬ ಟ್ಯುಟೋರಿಯಲ್ ವಿಡಿಯೋವನ್ನೂ ಚಿತ್ರೀಕರಿಸಿದ್ದಾರೆ. ವೀಡಿಯೊದಲ್ಲಿ ಪತಂಜಲಿಯ ಹಸುವಿನ ಮೂತ್ರದ ಬಾಟಲಿಯನ್ನು ಹಿಡಿದಿರುವ ಸಿಂಗ್, ಜನರು 50 ಮಿಲಿ ಹಸುವಿನ ಮೂತ್ರವನ್ನು ತಣ್ಣನೆಯ ನೀರಿನಲ್ಲಿ ಬೆರೆಸಿ ವೈರಸ್‌ನಿಂದ ನೈಸರ್ಗಿಕ ತಡೆ ಸಾಧಿಸಲು ಪ್ರತಿದಿನ ಅದನ್ನು ಸೇವಿಸುವಂತೆ ವಿನಂತಿಸುತ್ತಾರೆ.

ಮಾದರಿಯಾದ ಗ್ರಾಮ: 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಕೊಟ್ಟಾಯ್ತು..!

ಭಾರತದ ಎರಡನೇ ಅಲೆ ಮಧ್ಯದಲ್ಲಿ, ಸಿಂಗ್ ಅವರು ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಸಾರ್ವಜನಿಕವಾಗಿ ಕಳೆಯುತ್ತಿದ್ದಾರೆ ಮತ್ತು ಇನ್ನೂ ಆರೋಗ್ಯಕರ ಮತ್ತು ರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.

Scroll to load tweet…

ಅನುಮಾನಿಸಬೇಡಿ, ವಿಜ್ಞಾನಿಗಳು ನಂಬುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕೋವಿಡ್ -19 ನಂತಹ ಮಾರಣಾಂತಿಕ ವೈರಸ್ ಅನ್ನು ತೊಡೆದುಹಾಕಲು ಗೋಮೂತ್ರಕ್ಕೆ ಮಾತ್ರ ಶಕ್ತಿ ಇದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಸಿಂಗ್ ವೀಡಿಯೊದಲ್ಲಿ ಹೇಳುತ್ತಾರೆ.