'ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸ್ತೀನಿ, ಏನೇ ಆದ್ರೂ ಗೆಲ್ಲೋಕೆ ಬಿಡಲ್ಲ'
* ಉತ್ತರ ಪ್ರದೇಶ ಚುನಾವಣೆಗೆ ಸಜ್ಜಾಗುತ್ತಿವೆ ಪಕ್ಷಗಳು
* ಯೋಗಿ ವಿರುದ್ಧ ಸ್ಪರ್ಧಿಸಲು ರೆಡಿಯಾದ ಚಂದ್ರಶೇಖರ್ ಆಜಾದ್
* ಏನೇ ಆಗಲಿ ಯೋಗಿ ಗೆಲ್ಲಲು ಬಿಡುವುದಿಲ್ಲ ಎಂದ ಆಜಾದ್
ಲಕ್ನೋ(ನ.08): ಯುಪಿ ಚುನಾವಣೆಯನ್ನು (Uttar pradesh Elections) ಗಮನದಲ್ಲಿಟ್ಟುಕೊಂಡು, ನಾನು ಯುಪಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP Chief minister Yogi Adityanath) ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಭೀಮ್ ಆರ್ಮಿ (Bhim Army) ಮುಖ್ಯಸ್ಥ ಚಂದ್ರಶೇಖರ್ ಆಜಾದ್ (Chandrashekhar Azad Ravan) ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಏನೇ ಆಗಲಿ ಯೋಗಿ ಗೆಲ್ಲಲು ಬಿಡುವುದಿಲ್ಲ. ಯೋಗಿ ವಿರುದ್ಧ ನನಗೆ ಬೆಂಬಲ ನೀಡುವಂತೆ ಇತರ ವಿರೋಧ ಪಕ್ಷಗಳಿಗೂ ಮನವಿ ಮಾಡುತ್ತೇನೆ. ನಾಲ್ಕೂವರೆ ವರ್ಷದಲ್ಲಿ ಯೋಗಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ನಮ್ಮ ಮೈತ್ರಿ ಮಾಯಾವತಿಯವರ ಬಿಎಸ್ಪಿ ಜೊತೆ ಇರಬೇಕೆಂದು ನಾನು ಬಯಸುತ್ತೇನೆ. ಬಹುಜನ ಮತಗಳು ವಿಭಜನೆಯಾಗುವುದು ನಮಗೆ ಇಷ್ಟವಿಲ್ಲ. ಲೋಕಸಭೆಯಲ್ಲಿ ಮೋದಿ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದೆ, ಆದರೆ ಆಗ ನನ್ನ ಪಕ್ಷ ಇರಲಿಲ್ಲ. ನನ್ನ ತಂಗಿ ನನ್ನನ್ನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ಯುಪಿಯಲ್ಲಿ ಬಿಜೆಪಿಯನ್ನು ಎಲ್ಲ ರೀತಿಯಿಂದಲೂ ನಿಲ್ಲಿಸಬೇಕು ಎಂದು ಅವರು ಗುಡುಗಿದ್ದಾರೆ.
ಇನ್ನು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ವಯ ಕಳೆದ ತಿಂಗಳಷ್ಟೇ, ಚಂದ್ರಶೇಖರ ಆಜಾದ್ (Chandrashekhar Azad Ravan) ಅವರು ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಮುಸ್ಲಿಮರಿಗೆ ಮೀಸಲಾತಿ ಮತ್ತು ರೈತರಿಗೆ ಎಂಎಸ್ಪಿ ಖಾತರಿ ನೀಡುವುದಾಗಿ ಹೇಳಿದ್ದಾರೆ. ತಮ್ಮ ಪಕ್ಷದ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಆಜಾದ್, ರಾಜ್ಯದಲ್ಲಿ ತಮ್ಮ ಸರ್ಕಾರ ರಚನೆಯಾದರೆ, ಜೇವರ್ ವಿಮಾನ ನಿಲ್ದಾಣಕ್ಕೆ ರಾಜಾ ಮಿಹಿರ್ ಭೋಜ್ ಅವರ ಹೆಸರನ್ನು ಇಡುವುದಾಗಿಯೂ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ 403 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವುದು ತಮ್ಮ ಪಕ್ಷದ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರ ಸೇನೆಯಲ್ಲಿ ಗುರ್ಜರ್ ಮತ್ತು ಜಾತವ್ ರೆಜಿಮೆಂಟ್ಗಳನ್ನು ರಚಿಸಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರದ ಮೂರು ಹೊಸ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವನ್ನು ಉಲ್ಲೇಖಿಸಿದ ಆಜಾದ್, ದೇಶದ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಲವಾರು ತಿಂಗಳುಗಳು ಬೀದಿಗಳಲ್ಲಿ ಬಿದ್ದಿವೆ ಮತ್ತು "ಸರ್ಕಾರವು ಅವರನ್ನು ವಾಹನಗಳಿಂದ ಪುಡಿಮಾಡುತ್ತಿದೆ".
ಚಂದ್ರಶೇಖರ್ ಆಜಾದ್ ಭೀಮ್ ಆರ್ಮಿ ಮುಖ್ಯಸ್ಥ ಮತ್ತು ಕಾರ್ಯಕರ್ತ. 35 ವರ್ಷದ ಆಜಾದ್ ಭೀಮ್ ಆರ್ಮಿಯ ನಾಯಕನಾಗಿದ್ದು, ದಲಿತರು ಶಿಕ್ಷಣದ ಮೂಲಕ ಬಡತನದಿಂದ ಪಾರಾಗಲು ಶಾಲೆಗಳನ್ನು ನಡೆಸುತ್ತಿದ್ದಾರೆ. ಇವರಿಗೆ ‘ರಾವಣ’ ಎಂಬ ಹೆಸರೂ ಇದೆ. ಇವರು ಜಾತಿ ಆಧಾರಿತ ಹಿಂಸಾಚಾರದ ಬಲಿಪಶುಗಳನ್ನು ರಕ್ಷಿಸಲು ಮತ್ತು ತಾರತಮ್ಯದ ವಿರುದ್ಧ ಪ್ರಚೋದನಕಾರಿ ಪ್ರದರ್ಶನಗಳನ್ನು ಆಯೋಜಿಸುತ್ತಾರೆ. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಗಟ್ಟಿ ಧ್ವನಿಯಾಗಿದ್ದಾರೆ. ಇನ್ನು ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆಜಾದ್ ಮತ್ತು ಭೀಮ್ ಸೇನೆಯು ನ್ಯಾಯಕ್ಕಾಗಿ ಅಭಿಯಾನವನ್ನು ಮುನ್ನಡೆಸಿದರು.
ಸಿಎಂ ಯೋಗಿಗೆ ಪದೋನ್ನತಿ!
ನಿರ್ಣಯಗಳನ್ನು ಮಂಡಿಸುವ ಅವಕಾಶವನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ (BJP) ಆಡಳಿತದ ಎಲ್ಲಾ ರಾಜ್ಯಗಳ ಸಿಎಂಗಳು ವಚ್ರ್ಯುವಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯೋಗಿ ಕೂಡಾ ಹಾಗೆಯೇ ಭಾಗಿಯಾಗುವುದು ನಿಗದಿಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಸಭೆಯಲ್ಲಿ ಭಾಗಿಯಾದ ಯೋಗಿಗೆ, ನಿರ್ಣಯಗಳನ್ನು ಮಂಡಿಸುವ ಅವಕಾಶ ನೀಡಲಾಯಿತು.
ಸಾಮಾನ್ಯವಾಗಿ ಪಕ್ಷದ ಹಿರಿಯ, ಪ್ರಮುಖ ನಾಯಕರಿಗೆ ಈ ಅವಕಾಶ ನೀಡಲಾಗುತ್ತದೆ. ಕಳೆದ 2 ಸಭೆಯಲ್ಲಿ ರಾಜ್ನಾಥ್ಸಿಂಗ್ ಹೀಗೆ ನಿರ್ಣಯ ಮಂಡಿಸಿದ್ದರು. ಆದರೆ ಇದೀಗ ಯೋಗಿಗೆ ಅವಕಾಶ ನೀಡಿರುವುದು, ಪಕ್ಷದಲ್ಲಿ ಅವರ ಪದೋನ್ನತಿಯ ಸಂಕೇತ ಎಂದೇ ಬಣ್ಣಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೋವಿಡ್ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಯೋಗಿ ಅವರನ್ನು ಬಹಿರಂಗವಾಗಿಯೇ ಹೊಗಳಿದ್ದರು.
ಕಾರ್ಯಕಾರಿಣಿ ನಿರ್ಣಯಗಳು
* ಪ್ರಧಾನಿ ಮೋದಿ ನಾಯಕತ್ವದಿಂದ ದೇಶ ಕೋವಿಡ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.
* ಪಂಚರಾಜ್ಯ ಚುನಾವಣೆ ಪಕ್ಷದ ಸಾಧನೆಗೆ ಮೋದಿ ಶಕ್ತಿಯುತ ನಾಯಕತ್ವವೇ ಕಾರಣ
* ವಿಪಕ್ಷಗಳು ಅವಕಾಶವಾದಿತನ ಮತ್ತು ದ್ವೇಷ ರಾಜಕಾರಣ ಪ್ರದರ್ಶಿಸುತ್ತಿವೆ. ಇದು ಖಂಡನೀಯ
* ಬಂಗಾಳದಲ್ಲಿ ಚುನಾವಣೋತ್ತರ ಯೋಜಿತ ಹಿಂಸಾಚಾರ ನಡೆದಿದೆ. ಇದಕ್ಕೆ ಕಾನೂನಿನ ಮೂಲಕವೇ ಪರಿಹಾರ
* ಜಮ್ಮು-ಕಾಶ್ಮೀರದಲ್ಲಿನ ಬದಲಾವಣೆಯ ಶಕೆ ಆರಂಭವಾಗಿದೆ. ಅಲ್ಲದೆ ಶಾಂತಿ ಮತ್ತು ಅಭಿವೃದ್ಧಿ ಗರಿಗೆದರಿವೆ
* ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಸುವ ಮೂಲಕ ಜನಸಾಮಾನ್ಯರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ